ಚಿಬ್ಬಲಗುಡ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಚಿಬ್ಬಲಗುಡ್ಡೆಯು ಪ್ರಸಿದ್ಧನದಿಯಾದ ತುಂಗಾ ನದಿಯ ತಟದಲ್ಲಿದೆ. ಇಲ್ಲಿ ಶ್ರೀಸಿದ್ಧಿವಿನಾಯಕ ದೇವಾಲಯವಿದೆ. ಅನೇಕ ಋಷಿಮುನಿಗಳ ತಪಸ್ಸಿನಿಂದ ಪುನೀತವಾದ ಈ ಪ್ರದೇಶವು ಇಂದಿಗೂ ವಿಶೇಷ ಮಹತ್ವವನ್ನು ಹೊಂದಿದೆ. ಚಿಬ್ಬು ಅಥವಾ ಸಿಬ್ಬು ರೋಗವಿರುವವರು ಇಲ್ಲಿ ಬಂದು ನದಿಯ ಮೀನುಗಳಿಗೆ ಅಕ್ಕಿ ಅಥವಾ ಮಂಡಕ್ಕಿ ಹಾಕುವೆ, ದೇವರಿಗೆ ಹಣ್ಣುಕಾಯಿ ಮಾಡಿಸುವೆ ಎಂದು ಹರಕೆ ಹೊತ್ತ್ತರೆ ರೋಗ ವಾಸಿಯಾಗುವುದು. ಆದುದರಿಂದಲೆ ಈ ಪ್ರದೇಶಕ್ಕೆ ಚಿಬ್ಬಲಗುಡ್ಡೆ ಎಂದು ಹೆಸರು ಬಂದಿದೆ. ಇಲ್ಲಿನ ನದಿಯ ಮೀನುಗಳನ್ನು ನೋಡುವುದೆ ಒಂದು ಆನಂದ.