ತಾನು ಮಾಡುವ ಕೆಲಸಗಳಿಂದ ಯಾವಾಗ 'ಕರ್ಮಬಂಧ'ಕ್ಕೆ ಸಿಲುಕುವುದಿಲ್ಲವೋ ಆಗ ಜೀವಿಯು ಕರ್ಮಮುಕ್ತನಾಗುತ್ತಾನೆ.ಒಂದೆಡೆ ಕೆಲಸಗಳು ಜೀವಿಯನ್ನು ಕರ್ಮಬಂಧಕ್ಕೆ ಒಳಪಡಿಸಿದರೆ ಅದೇ ಕೆಲಸ ಸರಿಯಾಗಿ ನಿರ್ವಹಿಸಲ್ಪಟ್ಟಾಗ ಜೀವಿಯ ಕರ್ಮವಿಮೋಚನೆಗ ಸಾಧನವಾಗುತ್ತದೆ.ಈ ರೀತಿ ಜೀವಿಯು ಮಾಡುವ ಕೆಲಸಗಳನ್ನು ಕರ್ಮಬಂಧಕ್ಕೆ ಸಿಲುಕದಂತೆ ಮಾಡಿ ಅದೇ ಕೆಲಸಗಳು ಜೀವಿಯ ಆತ್ಮಸಾಕ್ಷಾತ್ಕಾರಕ್ಕೆ,ಮುಕ್ತಿಗೆ ಸಾಧನವನ್ನಾಗಿಸುವುದೇ ಕರ್ಮಯೋಗ.
ಇಷ್ಟನ್ನೇ ಹೇಳಿದರೆ ಗೀತೆಯ ಕರ್ಮಯೋಗದ ಸಾರವನ್ನು ಹೇಳಿದಂತೆ ಆಗುವುದಿಲ್ಲವೆಂದು ನನ್ನ ಅಭಿಪ್ರಾಯ. ಆದ್ದರಿಂದ ಗೀತೆಯ ಮೂರನೇ ಅಧ್ಯಾಯ ದ ಸಾರಾಂಶವನ್ನು ತುಂಬಿದ್ದೇನೆ. Bschandrasgr ೧೨:೦೭, ೧೬ ಜುಲೈ ೨೦೧೩ (UTC) ಬಿ.ಎಸ್. ಚಂದ್ರಶೇಖರ. ಸಾಗರ