ಖಾಷಭ ದಾದಾಸಾಹೇಬ್ ಜಾಧವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಾಷಭ ದಾದಾಸಾಹೆಬ್ ಜಾಧವ್
ಚಿತ್ರ:K d jadhav.jpg
ಖಾಷಭಾವು ದಾದಾಸಾಹೇಬ್ ಜಾಧವ್‌, ಸ್ವತಂತ್ರ ಭಾರತದ ಮೊದಲ ವೈಯಕ್ತಿಕ ಒಲಿಂಪಿಕ್ಸ್ ಪದಕ ವಿಜೇತ
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಖಾಷಭ ದಾದಾಸಾಹೆಬ್ ಜಧವ
ರಾಷ್ರೀಯತೆಭಾರತ
ಜನನ೧೫-೦೧-೧೯೨೬
ಮಹಾರಾಷ್ಟ್ರ
ಮರಣ೧೪-೦೮-೧೯೮೪
ಮಹಾರಾಷ್ಟ್ರ
Sport
ದೇಶಭಾರತ

ಖಾಷಭಾವು ದಾದಾಸಾಹೇಬ್ ಜಾಧವ್‌ರವರು ೧೯೫೨ರ ಹೆಲ್ಸಿಂಕಿ ಒಲಂಪಿಕ್ಸ್‌ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಭಾರತೀಯ ಕ್ರೀಡಾಪಟು.ಸ್ವತಂತ್ರ ಭಾರತದ ಮೊದಲ ವೈಯಕ್ತಿಕ ಒಲಿಂಪಿಕ್ಸ್ ಪದಕ ವಿಜೇತ ಕ್ರೀಡಾಪಟು ಎಂಬ ಹೆಗ್ಗಳಿಕೆ ಜಾಧವ್ ರದ್ದು. ಮಹಾರಾಷ್ಟ್ರ ಪೋಲೀಸ್ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದರು.

ಬಾಲ್ಯ[ಬದಲಾಯಿಸಿ]

ಜನವರಿ ೧೫ ೧೯೨೬ರಂದು ಮಹಾರಾಷ್ಟ್ರದ ಗೋಳೇಶ್ವರ ಟಾಲ್ಕಾರ್ಡ್ ಎಂಬಲ್ಲಿ ಜನಿಸಿದರು.ಜಾಧವ್‌ರವರ ತಂದೆ ದಾದಾಸಾಹೆಬ್ ಸ್ವತಃ ಪ್ರಖ್ಯಾತ ಕುಸ್ತಿಪಟುವಾಗಿದ್ದರು.ಖಾಷಬಾವು ದಾದಾಸಾಹೇಬರ ಐದನೆಯ ಪುತ್ರ. ಜಾಧವ್‌ರವರ ತಂದೆ ಅವರನ್ನು ಕುಸ್ತಿಯಾಡಲು ಐದನೇ ವಯಸ್ಸಿನಲ್ಲಿ ಮೊದಲ ಮಾಡಿದರು.[೧] ಬಾಬುರಾವ್ ಬಾಲವಡೆ ಮತ್ತು ಬೇಲಾಪುರಿ ಗುರೂಜಿ ಜಾಧವ್‌ರವರ ಮಾರ್ಗದರ್ಶಕರಾಗಿ ಮತ್ತು ಗುರುವಾಗಿ ಅವರಿಗೆ ಕುಸ್ತಿಯನ್ನು ಕರಗತ ಮಾಡಿಸಿದರು.[೨]. ಬಾಲ್ಯದಿಮ್ದಲೂ ಕೃಶಕಾಯರಾಗಿದ್ದ ಖಾಷಭಾವು, ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಛಾಪು ಮೂಡಿಸಿದರು. ಕರದ್ ಜಿಲ್ಲೆಯ ಲೋಕಮಾನ್ಯ ತಿಲಕ್ ಪ್ರೌಢ ಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ೧೯೪೦-೧೯೪೭ರಲ್ಲಿ ಮುಗಿಸಿದರು. ಕೊಲ್ಹಾಪುರದಾ ರಾಜಾರಾಂ ಕಾಲೇಜಿನಲ್ಲಿ ಓದುವಾಗ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿಪಟುವಾದರು. ಇವರು ಕ್ವಿಟ್ ಇಂಡಿಯಾ ಹೋರಾಟದಲ್ಲಿ ಕೆಲವು ಪರಿಣಾಮಕಾರಿಯಾದ ಪತ್ರಗಳನ್ನು ಬರೆದು ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.


೧೯೪೮ರ ಒಲಂಪಿಕ್ಸ್[ಬದಲಾಯಿಸಿ]

ಜಾಧವ್‌ರವರು ೧೯೪೮ರಲ್ಲಿ ಲಂಡನ್ ಒಲಂಪಿಕ್ಸ್‌ನ ಕುಸ್ತಿ ಸ್ಪರ್ಧೆಗೆ ಭಾರತದ ಪರವಾಗಿ ಆಯ್ಕೆಯಾದರು. ಮಹಾರಾಷ್ಟ್ರದ ಕೋಲ್ಲಾಪುರದ ರಾಜ ಜಾಧವ್‌ರವರು ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ಧನ ಸಹಾಯ ಮಾಡಿದರು. ರೀಸ್ ಗಾರ್ಡನರ್ ಎಂಬ ಅಮೆರಿಕಾದ ಒಬ್ಬ ವಿಜೇತ ಜಾಧವ್‌ರವರಿಗೆ ಮಾರ್ಗದರ್ಶಕರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಜಾಧವ್‌ರವರು ಲಂಡನ್‌ನಲ್ಲಿ ತರಬೇತಿ ಪಡೆದರು.

೧೯೫೨ರ ಹೆಲ್ಸಿಂಕಿ ಒಲಿಂಪಿಕ್ಸ್[ಬದಲಾಯಿಸಿ]

ಭಾರತವನ್ನು ಪ್ರತಿನಿಧಿಸಲು ಬಂಗಾಳದ ೬ ಅಡಿ ಎತ್ತರ ನಿರಂಜನ್ ದಾಸ್ ಮತ್ತು ಕೃಶಕಾಯದ ಖಾಷಭಾವು ಮಧ್ಯೆ ತುರುಪಿನ ಸ್ಪರ್ಧೆ ಏರ್ಪಟ್ಟಿತು.ಸತತ ೨ ಪಂದ್ಯದಲ್ಲಿ ಗದ್ದರೂ ಸಹ, ಖಾಷಭಾವುರನ್ನು ನಿರ್ಲಕ್ಷ ಮಾಡಲಾಯಿತು. ಖಾಷಭಾವು ಆ ಕಾಲದಲ್ಲಿ ಕುಸ್ತಿಯ ಅವಿಭಾಜ್ಯ ಅಂಗವಾಗಿದ್ದ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಪಟಿಯಾಲಾದ ಮಹಾರಾಜ ಭಲೀಂದ್ರ ಸಿಂಗ್ ರಲ್ಲಿ ಅಳಲು ತೋಡಿಕೊಂಡರು.ಭಲೀಂದ್ರ ಸಿಂಗ್ ಮತ್ತೊಮ್ಮೆ ನಿರಂಜನ್ ದಾಸ್ ಮತ್ತು ಖಾಷಭಾವು ಮಧ್ಯೆ ಕುಸ್ತಿ ಸ್ಪರ್ಧೆ ಏರ್ಪಡಿಸಿದರು.ಖಾಷಭಾವು ಈ ಪಂದ್ಯವನ್ನು ಗೆದ್ದು ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದರು.
ಪ್ರಯಾಣ ಮತ್ತು ವಿಮಾನವೆಚ್ಚಕ್ಕೆ ನೆರವು ನೀಡಲು ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿ ನಿರಾಕರಿಸಿದಾಗ, ಖಾಷಭಾವುರ ಕಾಲೇಜಿನ ಪ್ರಿನ್ಸಿಪಾಲರು, ಶಿಷ್ಯನ ಮೇಲಿನ ಆಸ್ಥೆಯಿಂದ ತಮ್ಮ ಸ್ವಂತ ಮನೆಯನ್ನು ಒತ್ತೆ ಇಟ್ಟು, ೭೦೦೦ ರೂಪಾಯಿಯನ್ನು ಖಾಷಭಾವುರಿಗೆ ನೀಡಿದರು. ತಮ್ಮ ಊರಿನ ದಾನಿಗಳು ಮತ್ತು ಕುಸ್ತಿ ಅಭಿಮಾನಿಗಳ ನೆರವಿನ ಮೂಲಕ ಹೆಲ್ಸಿಂಕಿ ತಲುಪಿದರು.
ಖಾಷಭಾವು, ಬಾಂಟಂವೇಯ್ಟ್ ಫ್ರೀಸ್ಟೈಲ್ ಕುಸ್ತಿ ವಿಭಾಗದ ಸತತ ೫ ಪಂದ್ಯ ಗೆದ್ದು ಅಚ್ಚರಿ ಮೂಡಿಸಿದರು.ಆದರೆ, ಜಪಾನಿನ ಸೊಹಾಚಿ ಇಚಿ ವಿರುದ್ಧ ಸೋತರು. ನಿಯಮದಂತೆ ೨ ಸೆಣಸಾಟಗಳ ನಡುವೆ ೩೦ ನಿಮಿಷಗಳ ಬಿಡುವು ಸಹ ನೀಡದೆಯೇ,ತಕ್ಷಣವೇ ಖಾಷಭಾವುರನ್ನು ರಷ್ಯಾದ ರಷೀದ್ ಮೊಮ್ಮದ್ ಬಿಯೋವ್ ವಿರುದ್ಧ ಸ್ಪರ್ಧಿಸಲು ಆದೇಶಿಸಲಾಯಿತು. ಖಾಷಭಾವು ಪರ ದನಿ ಎತ್ತಲು ಭಾರತದ ಯಾವ ಅಧಿಕಾರಿಯೂ ಹಾಜರಿರಲಿಲ್ಲ್ಲ.
ದಣಿದಿದ್ದ ಖಾಷಭಾವು ಸೆಮಿಫೈನಲ್ಸ್ ನಲ್ಲಿ ರಷೀದ್ ವಿರುದ್ಧ ಸೋತು ಹೋದರು.ಕ್ರಮವಾಗಿ ಸೊಹಾಚಿ ಇಚಿ ಸ್ವರ್ಣ ಪದಕ, ರಷೀದ್ ಬೆಳ್ಳಿ ಪದಕ ಮತ್ತು ಖಾಷಭಾವು ಕಂಚಿನ ಪದಕ ಪಡೆದರು.

ಹೀಗೆ ೧೯೫೨ರ ಒಲಿಂಪಿಕ್ಸ್ ನಲ್ಲಿ ಫ್ರೀಸ್ಟೈಲ್ ಕುಸ್ತಿ ವಿಭಾಗದ ೮ ಕಂಚಿನ ಪದಕ ವಿಜೇತರಲ್ಲಿ ಖಾಷಭಾವು ಸಹ ಒಬ್ಬರಾಗಿ ಸಮ್ಮಾನ ಪಡೆದರು.೧೧ ಕ್ರೀಡೆಗಳ ಪೈಕಿ, ಹಾಕಿ ತಂಡದ ಚಿನ್ನದ ಪದಕ ಮತ್ತು ಖಾಷಭಾವುರ ವೈಯಕ್ತಿಕ ಪದಕ, ಇವೆರಡೇ ಹೆಲ್ಸಿಂಕಿ ಒಲಿಂಪಿಕ್ಸ್ ನಲ್ಲಿ ಭಾರತದ ಸಾಧನೆಯಾಯಿತು.

ಖಾಷಭಾವು ಗೆದ್ದ ಕಂಚಿನ ಪದಕ

ಈ ಕಂಚಿನ ಪದಕ ಸ್ವತಂತ್ರ ಭಾರತದ ಮೊದಲ ಒಲಂಪಿಕ್ಸ್ ಕಂಚಿನ ಪದಕವಾಗಿತ್ತು.[೩]

ವೃತ್ತಿ ಬದುಕು[ಬದಲಾಯಿಸಿ]

ಭಾರತಕ್ಕೆ ಮರಳಿದ ಖಾಷಭಾವು ೧೯೫೬ರ ಒಲಿಂಪಿಕ್ಸ್ ನಲ್ಲಿ ಗಾಯದ ಕಾರಣ ಪಾಲ್ಗೊಳ್ಳಲಿಲ್ಲ. ಜಾಧವ್‌ರವರು ೧೯೫೫ರಲ್ಲಿ ಆರಕ್ಷಕ ಸಂಸ್ಥೆಯಲ್ಲಿ ಉಪ ಆರಕ್ಷಕರಾಗಿ (ಸಬ್ ಇನ್ಸ್ ಪೆಕ್ಟರ್) ನಿಯುಕ್ತಿಗೊಂಡರು. ಆರಕ್ಷಕರ ನಡುವೆಯೇ ನಡೆಯುತ್ತಿದ್ದ ಕ್ರೀಡಾ ಸ್ಪರ್ಧೆಗಳಲ್ಲಿ ಜಾಧವ್‌ರವರೇ ವಿಜಯಿಗಳಾಗುತ್ತಿದ್ದರು. ಅವರು ಕ್ರೀಡಾ ಆಕಾಂಕ್ಷಿಗಳ ಸಲಹೆಗಾರರು ಆಗಿದ್ದರು. ಅವರು ಆರಕ್ಷಕ ಸಂಸ್ಥೆಯಲ್ಲಿ ಇಪ್ಪತ್ತೇಳು ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದರು.[೪]ಭಾರತ ಸರ್ಕಾರ ಖಾಷಭಾವುರಿಗೆ ಯಾವುದೇ ನಾಗರೀಕ ಪ್ರಶಸ್ತಿಯನ್ನು ಅವರ ಜೀವಮಾನದಲ್ಲಿ ನೀಡಿ ಗೌರವಿಸಲಿಲ್ಲ. ಸಹಾಯಕ ಪೋಲೀಸ್ ಆಯುಕ್ತ ದರ್ಜೆಗೆ ಏರಿದ ನಂತರ ಖಾಷಭಾವು, ೧೯೮೩ರಲ್ಲಿ ಪೋಲೀಸ್ ಕೆಲಸಕ್ಕೆ ರಾಜೀನಾಮೆ ಇತ್ತರು. ೧೯೮೪ರಲ್ಲಿ ಖಾಷಭಾವು ಅಪಘಾತದಲ್ಲಿ ನಿಧನರಾದರು.[೫]

ಸನ್ಮಾನ[ಬದಲಾಯಿಸಿ]

  • ೨೦೦೧ರಲ್ಲಿ, ಗತಿಸಿದ ೧೭ ವರ್ಷಗಳ ತರುವಾಯ, ಮರಣೋತ್ತರವಾಗಿ ಖಾಷಭಾವುರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು. [೬]ಮರಣೋತ್ತರವಾಗಿ ಪದ್ಮ ಪುರಸ್ಕಾರವನ್ನು ನೀಡಲು, ಖಾಷಭಾವುರ ಸಾಧನೆ ವಿಶಿಷ್ಟವಾದುದು ಎಂದು ಪರಿಗಣಿಸಲಾಗದ ಕಾರಣ, ಖಾಷಭಾವುರಿಗೆ ಯಾವುದೇ ಪದ್ಮ ಪುರಸ್ಕಾರವನ್ನು ನೀಡಿಲ್ಲ.
  • ೨೦೧೦ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿನ ಕುಸ್ತಿ ಅಂಕಣಕ್ಕೆ ಕೆ.ಡಿ. ಜಾಧವ್ ಅಂಕಣ ಎಂದು ಹೆಸರಿಡಲಾಯಿತು.[೭]

ಉಲ್ಲೇಖಗಳು[ಬದಲಾಯಿಸಿ]

  1. https://indianexpress.com/sports/rio-2016-olympics/a-small-man-in-a-big-world-forgotten-story-of-khashaba-jadhav-2945343/
  2. "ಆರ್ಕೈವ್ ನಕಲು". Archived from the original on 2019-08-24. Retrieved 2019-08-24.
  3. https://www.kreedon.com/k-d-jadhav-first-indian-olympic-medalist/
  4. https://indianexpress.com/sports/rio-2016-olympics/a-small-man-in-a-big-world-forgotten-story-of-khashaba-jadhav-2945343/
  5. https://theprint.in/sport/kd-jadhav-indias-first-individual-olympic-medallist-who-wasnt-even-given-a-padma-award/177759/
  6. "ಆರ್ಕೈವ್ ನಕಲು". Archived from the original on 2019-08-21. Retrieved 2019-08-21.
  7. https://moovitapp.com/index/en/public_transit-K_D_Jadhav_Indoor_Hall-Delhi-site_52748481-3801