ಕುರವಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀಪಾದ ಶ್ರೀ ವಲ್ಲಭ

ಕುರವಪುರ ಶ್ರೀಪಾದ ಶ್ರೀ ವಲ್ಲಭರಿಗೆ ಸಂಬಂಧಿಸಿದ ಒಂದು ಪುಣ್ಯಕ್ಷೇತ್ರ. ಶ್ರೀಪಾದ ಶ್ರೀ ವಲ್ಲಭರನ್ನು ಕಲಿಯುಗದಲ್ಲಿ ದತ್ತಾತ್ರೇಯನ ಮೊದಲ ಅವತಾರವೆಂದು ಪರಿಗಣಿಸಲಾಗುತ್ತದೆ. ಈ ಗ್ರಾಮವು ಕೃಷ್ಣಾ ನದಿಯ ತಟದಲ್ಲಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿ ಸ್ಥಿತವಾಗಿದೆ. ಈ ಗ್ರಾಮವನ್ನು ಕುರುಗಡ್ಡೆ, ವಲ್ಲಭಪುರ ಎಂದೂ ಕರೆಯಲಾಗುತ್ತದೆ.

ಶ್ರೀಪಾದ ವಲ್ಲಭರು ತಮ್ಮ ಜೀವನದ ಬಹು ಭಾಗ ಇಲ್ಲಿ ಇದ್ದು ಕಳೆದರು. ಕುರವಪುರದ ಧಾರ್ಮಿಕ ಪ್ರಾಮುಖ್ಯತೆಯನ್ನು ದತ್ತಾತ್ರೇಯನಿಗೆ ಸಂಬಂಧಿಸಿದ ಶ್ರೀ ಗುರು ಚರಿತ್ರೆ ಮತ್ತು ಇತರ ಪವಿತ್ರ ಪುಸ್ತಕಗಳಲ್ಲಿ ಯಥೋಚಿತವಾಗಿ ಉಲ್ಲೇಖಿಸಲಾಗಿದೆ. ಶ್ರೀಪಾದ ವಲ್ಲಭರು ಇಲ್ಲಿ ಅನೇಕ ಲೀಲೆಗಳನ್ನು ಮಾಡಿದರು. ಗುರು ಚರಿತ್ರೆಯ ಪ್ರಕಾರ, ಕುರವಪುರಕ್ಕೆ ಭೇಟಿ ನೀಡುವ ಜನರು ತಮ್ಮ ಎಲ್ಲ ಸಮಸ್ಯೆಗಳಿಂದ ಮುಕ್ತರಾಗಿ ಆರೋಗ್ಯವಂತ ಮತ್ತು ಸಮೃದ್ಧ ಜೀವನದಿಂದ ಅನುಗ್ರಹಿತರಾಗುವರು.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  • Shri Dattatreya Dnyankosh by Dr. P. N. Joshi (Shri Dattateya Dnyankosh Prakashan, Pune, 2000).
  • Datta-Sampradyacha Itihas (History of Datta Sampradaya) by Dr. R. C. Dhere (Padmagnadha Prakashan, Pune).
  • Sri Pada Charitra- Shankar Bhatt ( Submitted in Telugu Version by Sri Malladi Diskhitulu)
  • Sankshipta Sripada Srivallabha Charitramrutam Parayana grantham (abridged by Smt Prasanna Kumari Telugu Version)
  • SriPada Sri Vallabha Website - www.sripadavallabha.org
  • SriPada Vallabha Miracles - www.sripadavallabhamiracles.com
"https://kn.wikipedia.org/w/index.php?title=ಕುರವಪುರ&oldid=779283" ಇಂದ ಪಡೆಯಲ್ಪಟ್ಟಿದೆ