ಕುದ್ರೋಳಿ ಗಣೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುದ್ರೋಳಿ ಗಣೇಶ್ ( ಜನನ-ಎಪ್ರಿಲ್ ೧, ೧೯೭೨ ) ಕರ್ನಾಟಕದ ಜಾದೂಗಾರರು.ಜಾದೂ ಕಲೆಯಲ್ಲಿ ಜಾನಪದ ಹಾಗೂ ರಂಗಭೂಮಿಯ ಅಂಶಗಳನ್ನು ಸೇರಿಸುವ ಮೂಲಕ ಹೊಸ ಪ್ರದರ್ಶನ ಶೈಲಿಯನ್ನು ಹುಟ್ಟು ಹಾಕಿದವರು. ಕರಾವಳಿಯ ಜಾನಪದ ಆರಾಧನಾ ಪದ್ದತಿಯಾದ "ಭೂತ ಕೋಲ" ದ ಅಂಶಗಳನ್ನು ಜಾದೂವಿನ ಪ್ರದರ್ಶನದಲ್ಲಿ ಅಳವಡಿಸಿಕೊಂಡವರು. ವಿಸ್ಮಯ ಜಾದೂ ತಂಡ ಸ್ಥಾಪಿಸಿದ್ದಾರೆ.