ಕರ್ನಾಟಕ ಅಸೋಸಿಯೇಷನ್, ತಿರುವನಂತಪುರಂ, ಕೇರಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಅಸೋಸಿಯೇಷನ್, ತಿರುವನಂತಪುರಂ ಕೇರಳ, ಸುಮಾರು ೪ ದಶಕಗಳಿಂದ ತನ್ನ ನಿರಂತರ ಕನ್ನಡಮ್ಮನ ಸೇವೆಯನ್ನು ಮಾಡುತ್ತಿದೆ. ಈ 'ಕರ್ನಾಟಕ ಸಂಘ' ಸನ್,೨೦೧೨ ರಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. 'ಈ ಸಂಸ್ಥೆಯ ೪೧ ನೆಯ ವಾರ್ಷಿಕಾತ್ಸವ ಸಮಾರಂಭ' ಸನ್, ೨೦೧೨ ರ ಫೆಬ್ರವರಿ, ೨೬ ನೆಯ ತಾರೀಖು, 'ತಿರುವನಂತಪುರಂ ನಗರದ ಹಸನ್ ಮರಿಕ್ಕರ್ ಸಭಾಂಗಣ' ದಲ್ಲಿ ಜರುಗಿತು.

ಮುಖ್ಯ ಅತಿಧಿ[ಬದಲಾಯಿಸಿ]

ಮಲಯಾಳಂ ಮತ್ತು ಕನ್ನಡ ಭಾಷೆಗಳ ಪಂಡಿತರಾದ ಡಾ.ರಾಮ, ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಇವರು, 'ಪ್ರಾಂತೀಯ ಭಾಷೆಗಳ ಸಂಶೋಧನಾ ಕೇಂದ್ರದ ನಿರ್ದೇಶಕ' ರಾಗಿದ್ದಾರೆ. ಡಾ.ರಾಮರ ಹಸ್ತದಿಂದ ಸಂಘದ ಕಾರ್ಯಚಟುವಟಿಕೆಗಳ 'ಕೈಪಿಡಿ ಬಿಡುಗಡೆ' ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕಗಳನ್ನು ವಿತರಣೆಮಾಡಲಾಯಿತು.

ಸನ್ಮಾನ[ಬದಲಾಯಿಸಿ]

ಕಾರ್ಯಕ್ರಮದ ಮೊದಲು, ಸ್ವಾಗತ ಭಾಷಣವನ್ನು 'ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್' ಮಾಡಿದರು. ನಂತರ ಸಂಘದ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಾ, ಡಾ.ರಾಮ್ ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸಂಘದ ಕೊಡುಗೆಗಳನ್ನು ಮುಕ್ತವಾಗಿ ಅಭಿನಂದಿಸಿದರು. ಈ ಕರ್ನಾಟಕ ಸಂಘಕ್ಕೆ ತಮ್ಮದೇ ರೀತಿಯಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಿರುವ, ಶ್ರೀ ರಘುರಾಮ್ ವೋಟ್ಟಿ ಯರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಶ್ರೀ. ಎನ್. ನಯನ್ ಕುಮಾರ್ 'ಸಂಘದ ವಾರ್ಷಿಕ ಆಯ-ವ್ಯಯಗಳ ವರದಿ'ಯನ್ನು ಸಭೆಯಮುಂದಿಟ್ಟರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ, ಶ್ರೀ ಮೋಹನ್ ವಂದನಾರ್ಪಣೆಯನ್ನು ನೆರವೇರಿಸಿಕೊಟ್ಟರು. ಸಂಘದ ಸದಸ್ಯರು ಹಾಗೂ ಅವರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದರು.