ಆಚಾರ್ಯತ್ರಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇದಾಂತ ದರ್ಶನ ಅಥವಾ ಉತ್ತರ ಮೀಮಾಂಸಾ ದರ್ಶನದ ಪ್ರವರ್ತಕರಲ್ಲಿ ದಕ್ಷಿಣ ಭಾರತದ ಮೂರು ಯತಿ ವರೇಣ್ಯರು ಪ್ರಮುಖರು - ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು. ಈ ಮೂರು ಯತಿ ವರೇಣ್ಯರನ್ನು 'ಆಚಾರ್ಯ ತ್ರಯ'ರೆಂದು ಸಂಬೋಧಿಸಲಾಗುತ್ತದೆ. ಶಂಕರರು ಅದ್ವೈತದ ಪ್ರವರ್ತಕರು. ರಾಮಾನುಜರು ವಿಶಿಷ್ಟಾದ್ವೈತ ಸಿದ್ಧಾಂತದ ಪ್ರವರ್ತಕರು. ಆಚಾರ್ಯ ಮಧ್ವರು ದ್ವೈತ ಮತದ ಪ್ರತಿಪಾದಕರು. ಈ ಮೂರೂ ಯತಿಗಳು - ಬ್ರಹ್ಮ ಸೂತ್ರಗಳು, ಉಪನಿಷತ್ಗಳು ಹಾಗೂ ಭಗವದ್ಗೀತೆಯೆಂಬ ಪ್ರಸ್ಥಾನತ್ರಯೀಗಳಿಗೆ ತಮ್ಮ ತಮ್ಮ ಸಿದ್ಧಾಂತದ ಅನುಗುಣವಾಗಿ ಭಾಷ್ಯಗಳನ್ನು ರಚಿಸಿದ್ದಾರೆ.