ಅರ್ಜುನ್ ಅಭಿಮನ್ಯು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಟೈಗರ್" ಪ್ರಭಾಕರರವರು ನಿರ್ದೇಶಿಸಿ, ನಟಿಸಿರುವ ಚಲನಚಿತ್ರ "ಅರ್ಜುನ್ ಅಭಿಮನ್ಯು.ಇವರ ಜೊತೆಗೆ ನಾಯಕರಾಗಿ "ನವರಸ ನಾಯಕ" ಜಗ್ಗೇಶ್ ಅಭಿನಯಿಸಿದ್ದಾರೆ . ಶ್ರೀಕನ್ಯಾ, ಪಾಯಲ್ ಮಲ್ಹೋತ್ರ ಸುಂದರ್ ರಾಜ್ ಹಾಗೂ ಖಳನಾಯಕನ ಪಾತ್ರದಲ್ಲಿ ವಜ್ರಮುನಿ ನಟಿಸಿದ್ದರೆ. "ಶ್ರೀಲಕ್ಶ್ಮಿ ಫಿಲಮ್ಸ್" ಬ್ಯಾನರ್ ನಲ್ಲಿ ಬಂದ ಈ ಚಿತ್ರ ೧೯೯೮ ನೇ ವರ್ಷದಲ್ಲಿ ತೆರೆ ಕಂಡಿತು.ಈ ಚಿತ್ರದ ನಿರ್ಮಾಪಕರು ನ್.ಕುಮಾರ್ ರವರು. ಕಥೆ-ಚಿತ್ರಕಥೆ-ನಿರ್ದೇಶನ ಪ್ರಭಾಕರ್ ರವರು. ಸಂಭಾಶಣೆ ಜೋಸೆಫ್

ರವರು. ಈ ಚಿತ್ರಕ್ಕೆ ಸಂಗೀತ ನೀಡಿದವರು ರಾಜನ್-ನಾಗೇಂದ್ರ .ಸಮಾಜದ ಬಗ್ಗೆ ಕಾಳಜಿ ವಹಿಸಿದ ನಾಯಕರು ಸಮಾಜದಲ್ಲಿ ಇರುವ ಕೆಟ್ಟ ಹುಳುಗಳನ್ನು ಸಾಯಿಸಿ ಜಯಗಳಿಸಿದ ಈ ಕಥೆಯ ಪೊಲೀಸ್ ಪಡೆಯವರೆ ಸಮಾಜ ಘಾತುಕರು ಎಂಬ ಸ್ಪಷ್ಟ ನಿಲುವನ್ನು ನಿಡುತ್ತದೆ.ಯಾರೇ ಆಗಲಿ ಸತ್ಯಕ್ಕೆ ನ್ಯಾಯ ನಿತಿಗೆ ಜಯಭೇರಿ ಖಂಡಿತ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದು.ಒಳ್ಳೆಯವರಿಗೆ ಕಾಲವಿಲ್ಲದ ಈ ಕಾಲದಲ್ಲಿ ನ್ಯಾಯ ಗೆಲ್ಲುತ್ತದೆ ಎಂಬುದನ್ನು ಪ್ರಭಕರ್ ಸ್ಪಷ್ಟ ಪಡಿಸಿದ್ದರೆ.ಈ ಚಿತ್ರದ ಹಾಡುಗಳೂ ಸಹ ಚೆನ್ನಾಗಿ ಮೂಡಿಬಂದಿದೆ .ಅವಿನಾಶ್ ಅವರು ಪೋಲೀಸ್ ಪಾತ್ರಧಾರಿಯಾಗಿ ಖಳನಾಯಕನ ಪಾತ್ರಕ್ಕೆ ಮರುಗು ನೀಡಿದ್ದಾರೆ ."ನ್ಯಾಯ ದೇವತೆಗೆ ಕಣ್ಣಿಲ್ಲದಿದ್ದರೂ ನ್ಯಾಯ ಗೆದ್ದೇ ಗೆಲ್ಲುತ್ತದೆ."

ಅರ್ಜುನ್ ಅಭಿಮನ್ಯು
ಅರ್ಜುನ್ ಅಭಿಮನ್ಯು
ನಿರ್ದೇಶನಪ್ರಭಾಕರ್
ಪಾತ್ರವರ್ಗಪ್ರಭಾಕರ್, ಜಗ್ಗೇಶ್ ಶ್ರೀಕನ್ಯಾ, ಪಾಯಲ್ ಮಲ್ಹೋತ್ರ ಸುಂದರ್ ರಾಜ್, ವಜ್ರಮುನಿ
ಬಿಡುಗಡೆಯಾಗಿದ್ದು೧೯೯೮
ಚಿತ್ರ ನಿರ್ಮಾಣ ಸಂಸ್ಥೆಶ್ರೀಲಕ್ಷ್ಮೀ ಫಿಲಮ್ಸ್