ಅಜಿತಪುರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨ನೇ ತೀರ್ಥಂಕರ ಅಜಿತಸ್ವಾಮಿಯ ಕುರಿತ ೧೨ ಆಶ್ವಾಸಗಳ ವಿಸ್ತ್ರತ ಕಥೆ.ಮತ್ತು ದಾನಚಿಂತಾಮಣಿ 'ಅತ್ತಿಮಬ್ಬೆ' ಎಂಬ ಜೈನಶ್ರಾವಕಿ ರನ್ನನಿಂದ ಬರೆಯಿಸಿದಳು. ೯೯೩ ರಲ್ಲಿ ರನ್ನ ಬರೆದ ಅಜಿತಪುರಾಣವು, ಜೈನ ಧರ್ಮ ಎರಡನೇ ತೀರ್ಥಂಕರ 'ಅಜಿತನಾಥ' ಕಥೆಯನ್ನು ನಿರೂಪಿಸುತ್ತದೆ. ಇದು ಕನ್ನಡ ಭಾಷೆಯಲ್ಲಿ ಸಣ್ಣ ಜಿನಪುರಾಣ ಆಗಿದೆ. ಇದು ತೀರ್ಥಂಕರನ ಎರಡು ಹಳೆ ಜನ್ಮದ ಕಥೆ ಆಗಿದೆ.

ಪ್ರಮುಖ ಪ್ರಸಂಗಗಳು[ಬದಲಾಯಿಸಿ]

ಅತ್ತಿಮಬ್ಬೆ ಚರಿತ್ರೆ[ಬದಲಾಯಿಸಿ]

ಮಲ್ಲಪನಿಗೆ ಐದು ಗಂಡುಮಕ್ಕಳು ಮತ್ತು ಎರಡು ಹೆಣ್ಣು ಮಕ್ಕಳಲ್ಲಿ ಅತ್ತಿಮಬ್ಬೆ -ಗುಂಡಮಬ್ಬೆಎಂಬಿಬ್ಬರನ್ನು ನಾಗದೇವನಿಗೆ ಮದುವೆ ಮಾಡಿಕೊಟ್ಟಾಗ, ಅತ್ತಿಮಬ್ಬೆ ಮಗ ಅಣ್ಣಿದದೇವ ಮಗುವಾಗಿರುವಾಗಲೇ ನಾಗದೇವ ಯುದ್ಡದಲ್ಲಿ ಮಡಿದ.ಸಹಗಮನ ಮಾಡದೇ ಮಗುವನ್ನು ನೋಡಿಕೊಳ್ಳುವ ಕಾರಣದಿಂದ ಬದುಕಿದರೂ ಜೈನದೀ‌ ಸ್ವೀಕರಿಸಿದರು. ಅತ್ತಿಮಬ್ಬೆಯು 'ರನ್ನನಿಂದ'ಅಜಿತಪುರಾಣ ಬರೆಸಿದಳು ಎಂಬುದಾಗಿ ಸಂಶೋಧಕರ ಅಭಿಪ್ರಾಯ.

ವಿಮಲವಾಹನನ ವೈರಾಗ್ಯ[ಬದಲಾಯಿಸಿ]