ತಿರು ಶ್ರೀನಿವಾಸಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಿರು ಶ್ರೀನಿವಾಸಾಚಾರ್ಯರು ಹೊಸಗನ್ನಡ ವ್ಯಾಕರಣದ ಆದ್ಯ ಗ್ರಂಥಕರ್ತರಲ್ಲೊಬ್ಬರಾಗಿದ್ದರು. ಪ್ರೌಢಶಾಲಾ ಕನ್ನಡ ವ್ಯಾಕರಣ, ಸಂಸ್ಕೃತಿ ಪ್ರದೀಪ ಮುಂತಾದ ಕೃತಿಗಳನ್ನು ರಚಿಸಿದ್ದರು. ಮಧುಗಿರಿ, ಹಾಸನ, ಆಯನೂರು, ಮೈಸೂರು ಮುಂತಾದೆಡೆಗಳಲ್ಲಿ ಇವರು ಪ್ರೌಢಶಾಲಾ ಕನ್ನಡ ಪಂಡಿತರಾಗಿ ಕೆಲಸಮಾಡಿದ್ದರು.

ಇವರ ತಂದೆ ಶ್ರೀನಿವಾಸರಂಗಾಚಾರ್ಯರು ಕೂಡ ಲೇಖಕರಾಗಿದ್ದರು.