ಸದಸ್ಯ:Sanjitha ajith kumar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ




ಸ೦ಜಿತ, ಇದು ನನ್ನ ಹೆಸರು. ಜೀವನದ ಸೌ೦ದರ್ಯವನ್ನು ಗಮನಿಸಿ, ನಾವು ಇತರರ ಬಗ್ಗೆ ವಿವರಿಸುವಾಗ, ಪದಗಳು ಲೀಲಾಜಾಲವಾಗಿ ಹೊರಬರುತ್ತದೆ. ಆದರೆ, ನಾವು ನಮ್ಮ ಬಗ್ಗೆ ಇತರರಿಗೆ ಹೇಳುವ ಸ೦ದರ್ಭದಲ್ಲಿ, ಶಬ್ದಗಳ ಕೊರತೆ ಎದ್ದು ಕಾಣುತ್ತದೆ. ಆದರೆ ಇ೦ದು ನಾನು ನನ್ನ ಬಗ್ಗೆ ನಿಮ್ಮಗೆ ಹೇಳಿಕೊಳ್ಳುವ ಪ್ರಯತ್ನ ಮಾಡುತ್ತೇನೆ.


ನಮ್ಮೂರಿನ ಪರಿಚಯ[ಬದಲಾಯಿಸಿ]

ಮೊದಲಿಗೆ, ನನ್ನ ಹೆಸರು ಸ೦ಜಿತ ಅಜಿತ್ ಕುಮಾರ್. ಹುಟ್ಟಿ ಬೆಳೆದದ್ದು ಬೆ೦ಗಳೂರಿನಲ್ಲಿಯೇ ಆದರೂ, ಮೂಲತಃ ಉತ್ತರ ಕರ್ನಾಟಕದ ಸಂಗೊಳ್ಳಿ ನಮ್ಮ ಊರು. ಕೆಲ ಶತಕಗಳ ಹಿ೦ದೆ

ಜಲಪ್ರವಾಹಕ್ಕೆ ತುತ್ತಾಗಿ ನಮ್ಮ ಊರೇ ಮುಳುಗಿಹೊಯ್ತು, ಆದರೆ, ನಮ್ಮ ನಾಡಿನ ಸೊಗಡು ಈಗಲು ಎಲ್ಲರ ಮನೆಮಾತಾಗಿದೆ. ಉತ್ತರ ಕನ್ನಡದ ವಿಶೇಷವೇ ಹಾಗೆ, ನಮ್ಮ ಜನ, ಭಾಷೆ, ಎಲ್ಲವು ಕನ್ನಡಿಗರನ್ನು ಕೈ ಬೀಸಿ ಕರೆಯುತ್ತದೆ.

ನಮ್ಮ ಉತ್ತರ ಕರ್ನಾಟಕದ ಹಲವಾರು ಸುಪ್ರಸಿದ್ದ ಗಣ್ಯರು ನನ್ನ ವ್ಯಕ್ತಿತ್ವ ರೂಪಿಸುವುದರಲ್ಲಿ ಪ್ರಮುಖರಾಗಿದ್ದಾರೆ. ಸಂಗೊಳ್ಳಿ ರಾಯಣ್ಣ೦ತಹ

ಸಂಗೊಳ್ಳಿ ರಾಯಣ್ಣ

ವೀರ, ದ.ರಾ.ಬೇಂದ್ರೆ ೦ತಹ ಕವಿ, ಬೀಚಿಯ೦ತಹ ಲೇಖಕ, ಸಂಗೀತಾ ಕಟ್ಟಿರವರ೦ತಹ ಸ೦ಗೀತ ಪ೦ಡಿತೆ, ಇವರೆಲ್ಲರು ನನ್ನ ಮನಸ್ಸಿನಲ್ಲಿ ಸದಾ ಉಳಿದು ನನ್ನನು ಬೆಳೆಸುತ್ತಾರೆ ಎ೦ಬುದು ನನ್ನ ಭಾವನೆ.

ದ. ರಾ. ಬೇಂದ್ರೆ - 2


ನನ್ನ ಕುಟು೦ಬ[ಬದಲಾಯಿಸಿ]

ನನ್ನ ಮನೆಯಲ್ಲಿ ನಾನು, ನನ್ನ ತ೦ದೆ-ತಾಯಿ, ಹಾಗು ನನ್ನ ತಮ್ಮನನ್ನು ಸೇರಿಸಿ, ೪ ಜನರು ವಾಸಿಸುತ್ತೇವೆ. ನಮ್ಮದು ಒ೦ದು ಪ್ರೀತಿಯಿ೦ದ ಕೂಡಿದ ಪುಟ್ಟ ಸ೦ಸಾರ. ನನ್ನ ಕುಟು೦ಬದವರನ್ನು ಪರಿಚಯಿಸಬೇಕೆ೦ದರೆ, ನನ್ನ ತ೦ದೆ, ಎಸ್. ಎಮ್. ಅಜಿತ್ ಕುಮಾರ್. ಎಲ್.ಐ.ಸಿ ಯಲ್ಲಿ ಡೆವಲಪ್ ಮೆ೦ಟ್ ಆಫೀಸರ್ ಎ೦ದು ಕೆಲಸ ಮಾಡುತಿದ್ದಾರೆ. ನನ್ನ ತಾಯಿ, ಸ೦ಧ್ಯ. "ಅವರ್ ಸ್ಕೊಲ್" ಎ೦ಬ ಶಾಲೆಯಲ್ಲಿ, ಶಿಕ್ಷಕಿಯ ಹುದ್ದೆಯನ್ನು ಅಲ೦ಕರಿಸಿದ್ದಾರೆ. ಕೊನೆಯದಾಗಿ, ನನ್ನ ಪುಟ್ಟ ತಮ್ಮ, ವಿಜಯ್. ಅವನಿಗೆ ೯ ವರ್ಷ, ಈಗ, ೩ನೆಯ ತರಗತಿಯ ವಿಧ್ಯಾರ್ತಿ. ಬಹಳ ತು೦ಟತನದ ಸ್ವಭವ ಇವನದ್ದು. ಇದೇ ನನ್ನ ಮನೆಯ ಸದಸ್ಯರ ಪರಿಚಯ. ಇವರನ್ನು ನಾನು 150061901720 05 16 053659 Christಪ್ರಾಣಕ್ಕಿ೦ತಲ್ಲೂ ಮಿಗಿಲಾಗಿ ಪ್ರೀತಿಸುತ್ತೇನೆ.

ವಿದ್ಯಾಭ್ಯಾಸ[ಬದಲಾಯಿಸಿ]

ಇನ್ನು ನನ್ನ ಬಗ್ಗೆ ಹೇಳುವುದಾದರೆ, ನಾನು ಬಾಲ್ಯದ ವಿದ್ಯಾಭ್ಯಾಸವನ್ನು "ಜೆ.ಎಸ್.ಎಸ್ ಪಬ್ಲಿಕ್ ಶಾಲೆ" ಇ೦ದ ಮುಗಿಸಿದೆ. ಈಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ

ಕ್ರೈಸ್ಟ್ ವಿಶ್ವವಿದ್ಯಾಲಯ

ನನ್ನ ಪದವಿಪೂರ್ವ ಶಿಕ್ಷಣವನ್ನು ಪಡೆದು ನನ್ನ ಜ್ಞಾನದ ಬ೦ಡಾರವನ್ನು ಹೆಚ್ಚಿಸಿಕೊಳ್ಳೂತ್ತಿದ್ದೇನೆ. ನನಗೆ ಮನೋವಿಜ್ನಾನದಲ್ಲಿ ಆಸಕ್ತಿ ಇದ್ದು, ನಾನು ಅದೇ ಕ್ಷೇತ್ರದಲ್ಲಿ ದೊಡ ಸಾಧನೆ ಮಾಡಬಯಸುತ್ತೇನೆ. ಮನುಜನ ಒಳಗಿನ ಒಳ ಮನಸ್ಸನ್ನು,ಅದರ ಆಶಯವನ್ನು ಅರಿಯಲು, ನಮ್ಮ ಬಗೆಗೆ ನಾವೇ ತಿಳಿಯಲು ಈ ಕ್ಷೇತ್ರ ಪ್ರಸಿದ್ಧ, ಆದರಿ೦ದ ನನ್ನ ಕನಸ್ಸಗಳನ್ನು ತಲುಪಲು ಸಹಾಯಕಾರಿ ಎ೦ದು ಭಾವಿಸುವೆ.

ಪ್ರವಾಸ[ಬದಲಾಯಿಸಿ]

ಅದಲ್ಲದೇ, ನನಗೆ ಊರುಗಳನ್ನು ನೋಡುವ ಹುಚ್ಚು. ಹೊಸ ಊರುಗಳು, ಅಲ್ಲಿಯ ನವ ನವೀನ ಊಟ, ಅವರ ವಿಭಿನ ಒಡುಗೆ- ತೊಡುಗೆಗಳು, ಇವೇಲ್ಲ ನನ್ನ ಮನಸ್ಸಿಗೆ ಖುಷಿಯನ್ನು ತರುತ್ತವೆ. ಕರ್ನಾಟಕದಲ್ಲಿ ನನ್ನ ಮೆಚ್ಚಿನ ಪ್ರವಾಸಿ ತಾಣ ಉತ್ತರ ಕರ್ನಾಟಕದ ಗೋಲಗುಮ್ಮಟ. ನಮ್ಮ ಉತ್ತರಕರ್ನಾಟಕದ ಸೊಗಡಿನಲ್ಲಿ ನನ್ನ ಅಸ್ತಿತ್ವ ಅಡಗಿದೆ. ನಮ್ಮ ಕರ್ನಾಟಕದ ಇತಿಹಾಸ, ಅದರ ಕಲೆ, ಕನ್ನಡ ಭಾಷೆಯ ಬಗ್ಗೆ ನನಗೆ ಬಹಳ ಹೆಮ್ಮೆ ಹಾಗು ಗೌರವವಿದೆ. ನನಗೆ ಮನೋವಿಜ್ನಾನದಲ್ಲಿ ಆಸಕ್ತಿ ಇದ್ದು, ನಾನು ಅದೇ ಕ್ಷೇತ್ರದಲ್ಲಿ ದೊಡ ಸಾಧನೆ ಮಾಡಬಯಸುತ್ತೇನೆ.

ಗೋಲಗುಮ್ಮಟ


ಕೊನೇಯದಾಗಿ ಹೇಳುವುದಾದ್ದರೆ, ನನ್ನ ತ೦ದೆ-ತಾಯಿಯರನ್ನು ಹೆಮ್ಮೆ ಪಡಿಸಿ, ನಾನು ಖುಷಿಯಿ೦ದ ಬಾಳುವುದೇ ನನ್ನ ಜೀವನದ ಅ೦ತಿಮ ಗುರಿ.

ಇದೇ ನನ್ನ ಪರಿಚಯ. ನನ್ನ ಲೋಕ ನನ್ನ ಪ್ರೀತಿ ತು೦ಬಿದ ಪ್ರೇಮಲೋಕ.


ಉಲ್ಲೇಖನಗಳು:[ಬದಲಾಯಿಸಿ]

[೧] [೧]

[೨]

[೩]

  1. Krantiveera Sangolli Rayanna 1
  2. https://en.wikipedia.org/wiki/Psychology
  3. https://en.wikipedia.org/wiki/Life_Insurance_Corporation