ಎಲ್. ನಾರಾಯಣ ರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲ್. ನಾರಾಯಣ ರೆಡ್ಡಿ
ನಾರಾಯಣ
ನಾರಾಯಣ ರೆಡ್ಡಿಯವರು
ಜನನ(೧೯೩೫-೦೯-೧೮)೧೮ ಸೆಪ್ಟೆಂಬರ್ ೧೯೩೫
ಮರಣJanuary 14, 2019(2019-01-14) (aged 83)
ರಾಷ್ಟ್ರೀಯತೆಭಾರತ
ಇದಕ್ಕೆ ಖ್ಯಾತರುಸಾವಯವ/ಸಹಜ ಕೃಷಿ
ಪ್ರಶಸ್ತಿಗಳುರಾಜ್ಯೋತ್ಸವ ಪ್ರಶಸ್ತಿ

ಎಲ್. ನಾರಾಯಣ ರೆಡ್ಡಿಯವರು ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವಂತಹ ಪ್ರಗತಿಪರ ರೈತ ಮತ್ತು ಕೃಷಿತಜ್ಞರಾಗಿದ್ದರು[೧]. ಇವರು ಕೃಷಿರಂಗದಲ್ಲಿ ಮಾರ್ಗದರ್ಶಕರಾಗಿದ್ದರು.ದೊಡ್ಡಬಳ್ಳಾಪುರ ಸಮೀಪದ ಸೋರಹುಣಸೆ ಗ್ರಾಮದಲ್ಲಿ ನೆಲೆಸಿದ್ದ ಇವರು ಸಾವಯವ ಕೃಷಿಯ ಸಾಧನೆಗಾಗಿ 'ನಾಡೋಜ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ.

ಜೀವನ[ಬದಲಾಯಿಸಿ]

ಸೋರಹುಣಸೆ ಗ್ರಾಮದ ನಾರಾಯಣ ರೆಡ್ಡಿಯವರು ಹುಟ್ಟಿದ್ದು ೧೮ ಸೆಪ್ಟೆಂಬರ್ ೧೯೩೫. ತಂದೆ ಲಕ್ಷ್ಮಯ್ಯ ರೆಡ್ಡಿ, ತಾಯಿ ಎಲ್ಲಮ್ಮ. ಹೆಂಡತಿ ಸರೋಜಮ್ಮ. ಮಕ್ಕಳು ಮಂಜುನಾಥ, ನಿತ್ಯಾನಂದ ಮತ್ತು ಸಾಯಿನಾಥ. ರೆಡ್ಡಿಯವರು ಎಸ್.ಎಸ್.ಎಲ್.ಸಿ. ವರೆಗಿನ ವಿದ್ಯಾಭ್ಯಾಸ ಮಾಡಿದ್ದಾರೆ.[೨]

ಪ್ರಶಸ್ತಿ, ಗೌರವಗಳು[ಬದಲಾಯಿಸಿ]

  • ಹಂಪಿ ವಿಶ್ವವಿದ್ಯಾನಿಲಯದ 'ನಾಡೋಜ ಪ್ರಶಸ್ತಿ' (೨೦೦೪)
  • ರಾಜ್ಯೋತ್ಸವ ಪ್ರಶಸ್ತಿ (೧೯೯೪)
  • ತಾಲ್ಲೂಕು, ಜಿಲ್ಲಾ, ರಾಜ್ಯ ಕೃಷಿ ಸಾಧಕ ಪ್ರಶಸ್ತಿ (೧೯೭೭, ೭೮, ೭೯)
  • ಎಚ್. ಡಿ. ಚೌಡಯ್ಯ ಪ್ರತಿಷ್ಠಾನ ಪ್ರಶಸ್ತಿ (೨೦೦೪)
  • ಡಾ|| ಆರ್. ದ್ವಾರಕಾನಾಥ್ ಶ್ರೇಷ್ಠ ಕೃಷಿಕ ಪ್ರಶಸ್ತಿ (೨೦೧೧)

ನಿರ್ವಹಿಸಿದ ಸ್ಥಾನಗಳು[ಬದಲಾಯಿಸಿ]

  • ೧೧ನೇ ಪಂಚವಾರ್ಷಿಕ ಯೋಜನೆಯ ಸಲಹಾ ಸಮಿತಿಯ ಸದಸ್ಯರು
  • 'ಸಾವಯವ ಕೃಷಿ ಮಿಷನ್' ಸದಸ್ಯರು
  • ಸಾವಯವ ಕೃಷಿ ಸಲಹಾ ಸಮಿತಿ ಸದಸ್ಯರು
  • ಕರ್ನಾಟಕ ರಾಜ್ಯ ಪರಿಸರ ಸಂರಕ್ಷಣಾ ಸಮಿತಿ ಸದಸ್ಯ
  • ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹಾಲೋಚನ ಕೇಂದ್ರದ ಸದಸ್ಯರು
  • ಹುಲಿಕೋಟೆ ಎಚ್.ಕೆ.ಪಾಟೀಲ್ ಪ್ರತಿಷ್ಠಾನ ಮತ್ತು ಕೊಡೈಕೆನಾಲ್ ಕೋಲೆ ಶಾಲೆಯ ಗೌರವಾನ್ವಿತ ಟ್ರಸ್ಟಿ

ನಿಧನ[ಬದಲಾಯಿಸಿ]

ನಾರಾಯಣ ರೆಡ್ಡಿಯವರು ೧೪ಜನವರಿ೨೦೧೯ರಂದು ನಿಧನರಾದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.[೩][೪]

ಉಲ್ಲೇಖಗಳು/ಆಕರಗಳು[ಬದಲಾಯಿಸಿ]

  1. ವಿಜಯಕರ್ನಾಟಕ ಸುದ್ದಿಲೋಕ, ಜನವರಿ ೧೩, ೨೦೧೫
  2. ನೆಲದೊಡಲ ಚಿಗುರು. ಬೆಂಗಳೂರು: ನವಕರ್ನಾಟಕ ಪ್ರಕಾಶನ. ISBN 81-8467-331-0.
  3. ಸಾವಯವ ಕೃಷಿಕ, ನಾಡೋಜ ಎಲ್ ನಾರಾಯಣ ರೆಡ್ಡಿ ನಿಧನ, ಒನ್ ಇಂಡಿಯಾ ಕನ್ನಡ
  4. ಸಾವಯವ ಕೃಷಿಕ ನಾರಾಯಣರೆಡ್ಡಿ ಇನ್ನಿಲ್ಲ

ಹೊರಸಂಪರ್ಕ ಕೊಂಡಿಗಳು[ಬದಲಾಯಿಸಿ]

ಹೆಚ್ಚಿನ ಓದು[ಬದಲಾಯಿಸಿ]

  • ಪು: ಈ ಭೂಮಿ ಈ ಸಸ್ಯ - ಡಾ. ನಾರಾಯಣ ರೆಡ್ಡಿಯವರ ಕೃಷಿ ವಿಚಾರಗಳು, ನಿರೂಪಣೆ: ಬಂದಗದ್ದೆ ರಾಧಾಕೃಷ್ಣ, ನವಕರ್ನಾಟಕ ಪ್ರಕಾಶನ