ಮೋಳಿಗೆ ಮಹಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಳಿಗೆ ಮಹಾದೇವಿ/ಗಂಗಾದೇವಿ
ಜನನ೧೧೬೦
ಅಂಕಿತನಾಮನಿ:ಕಳಂಕ ಮಲ್ಲಿಕಾರ್ಜುನಯ್ಯಾ
ಸಂಗಾತಿ(ಗಳು)ಮಹದೇವರಸ /ಮೋಳಿಗೆ ಮಾರಯ್ಯ


ಗಂಗಾದೇವಿ/ಮೋಳಿಗೆ ಮಹಾದೇವಿ[ಬದಲಾಯಿಸಿ]

ಬಸವಣ್ಣನವರ ನಿರ್ಮಲ ವ್ಯಕ್ತಿತ್ವ ಕೇವಲ ಕರ್ನಾಟಕದ ಜನರನ್ನಷ್ಟೇ ಆಕರ್ಷಿಸಲಿಲ್ಲ. ದೇಶದ ಮೂಲೆ ಮೂಲೆಗಳಿಂದ ಅನೇಕ ಜನರು ಕಲ್ಯಾಣಕ್ಕೆ ಬಂದು ಶರಣದೀಕ್ಷೆ, ಶರಣತ್ವ ಸ್ವೀಕರಿಸಿದರು. ಅಂತಹವರಲ್ಲಿ ಕಾಶ್ಮೀರದ ದೊರೆ ಮಹದೇವರಸ ಮತ್ತು ಆತನ ಪಟ್ಟ ಮಹಿಷಿ ಗಂಗಾದೇವಿ ಪ್ರಮುಖರು. ಇವರು ತಮಗಿದ್ಧ ರಾಜ ವೈಭವವನ್ನು ತೊರೆದು, ಸಾಮಾನ್ಯರಂತೆ ಕಟ್ಟಿಗೆ ಮಾರುವ ಕಾಯಕವನ್ನು ಕೈಗೆತ್ತಿಕೊಂಡು ಬದುಕ ನಡೆಸಿದವರು. ಈ ಸಂದರ್ಭದಲ್ಲಿ ಅವರು ತಮ್ಮ ಮೂಲ ಹೆಸರನ್ನು ಬದಲಾಯಿಸಿ, ಮಹದೇವರಸ ಮೋಳಿಗೆ ಮಾರಯ್ಯನಾದರೆ, ರಾಣಿ ಗಂಗಾದೇವಿ ವೋಳಿಗೆ ಮಹಾದೇವಿಯಾಗುತ್ತಾಳೆ. ಈಕೆಯ ವಚನಗಳ ಅಂಕಿತ- "ನಿ:ಕಳಂಕ ಮಲ್ಲಿಕಾರ್ಜುನಯ್ಯಾ".

ಊರ್ವಶಿ ಕರ್ಪೂರವ ತಿಂದು ಎಲ್ಲರಿಗೂ
ಮುತ್ತು ಕೊಟ್ಟರೆ ಮೆಚ್ಚುವರಲ್ಲದೆ
ಹಂದಿ ಕರ್ಪೂರವ ತಿಂದು ಎಲ್ಲರಿಗೂ
ಮುತ್ತು ಕೊಟ್ಟರೆ ಮೆಚ್ಚುವರೇ!
ಹುಡು ಹುಡು ಎಂದಟ್ಟುವರಲ್ಲದೆ
ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋಹೆನೆಂಬುದು
ಕೈಕೂಲಿ ಇಂತಿ ಉಭಯದಲಿ ಲಕ್ಷಿತವಾದವರಿಗೆ
ಮರ್ತ್ಸ ಕೈಲಾಸವೆಂಬುದು ತನ್ನರಿವು
ನಿಶ್ವಯವಾದಲ್ಲಿ ಅದೇ ಲಕ್ಷ್ಯ ಎನ್ನಯ್ಯ
ಪ್ರಿಯ ಇಮ್ಮಡಿ ನಿ:ಕಳಂಕ ಮಲ್ಲಿಕಾರ್ಜುನಯ್ಯಾ