ಕನ್ನಡ ಗುರುಕುಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಗುರುಕುಲ
ಧ್ಯೇಯವಾಕ್ಯಹಚ್ಚೇವು ಕನ್ನಡದ ದೀಪಾ
ಸ್ಥಾಪನೆ15 ನವೆಂಬರ್ 2010 (4895 ದಿನ ಗಳ ಹಿಂದೆ) (2010-೧೧-15)
ಸ್ಥಾಪಿಸಿದವರುಯತೀಂದ್ರ
ಶೈಲಿಭಾಷಾ ಸಂಘಟನೆ
Purposeಸಂಘಟನೆ ಶಿಕ್ಷಣ
ಪ್ರಧಾನ ಕಚೇರಿದೊಡ್ಡಬಳ್ಳಾಪುರ
ಕಕ್ಷೆಗಳು13.292°N 77.543°E
ಅಧ್ಯಕ್ಷ
ವಿರೇಶ್ ಮುಳ್ಳೂರು

ಮುನ್ನುಡಿ[ಬದಲಾಯಿಸಿ]

ದೊಡ್ಡಬಳ್ಳಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಮಿತ್ರರು ಸೇರಿ ಸಂಜೆ ತರಗತಿಯನ್ನು ಹಾಗೂ ಅನಕ್ಷರಸ್ಥ ವಯಸ್ಕರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ತದನಂತರ ಕನ್ನಡಿಗರನ್ನು ಸಂಘಟಿತರನ್ನಾಗಿ ಮಾಡಲು ಸಂಸ್ಥೆಯ ರೂಪವನ್ನು ಪಡೆದು ಕನ್ನಡಗುರುಕುಲವಾಗಿದೆ.

ಶಿಕ್ಷಣ[ಬದಲಾಯಿಸಿ]

ಕನ್ನಡ ಕಲಿಕಾ ಕೇಂದ್ರ[ಬದಲಾಯಿಸಿ]

ಓದಲು ಬರೆಯಲು ಬಾರದ ಅನಕ್ಷರಸ್ಥ ಹಳ್ಳಿಯ ಜನರಿಗೆ ಗ್ರಾಮ ಪಂಚಾಯತ ಸಾಕ್ಷರತಾ ಸಮಿತಿಗಳ ನೆರವಿನಿಂದ ಕನ್ನಡ ಕಲಿಸಲಾಗಿದೆ.

ಸಂಜೆ ತರಗತಿ[ಬದಲಾಯಿಸಿ]

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಜೆ ತರಗತಿ 2013ರಿಂದ ಪ್ರಾರಂಭಿಸಲಾಯಿತು.