ಸಂತೆಬೆನ್ನೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಸಂತೆಬೆನ್ನೂರು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಒಂದು ಪಟ್ಟಣ. ಇದು ದಾವಣೆಗೆರೆಯಿಂದ ೪೦ ಕಿ.ಮೀ ಮತ್ತು ಶಿವಮೊಗ್ಗದಿಂದ ೬೦ ಕಿ.ಮೀ ದೂರವಿದೆ. ಚನ್ನಗಿರಿ, ತಾಲೂಕಿನ ಕೇಂದ್ರ ಕಾರ್ಯಾಲಯವಗಿದ್ದು ಸಂತೆಬೆನ್ನೂರಿಗೆ ೨೨ ಕಿ.ಮೀ ದೂರವಿದೆ.

ಇತಿಹಾಸ[ಬದಲಾಯಿಸಿ]

ಈ ಊರಿನ ವಿಶೇಷವೆಂದರೆ ಇಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿತವಾದ ಬಹು ಸುಂದರ ಪುಷ್ಕರಣಿ (Pond) ಇದೆ. ಇದಕ್ಕೆ ರಾಮತೀರ್ಥ ಪುಷ್ಕರಣಿ ಅಥವಾ ಪವಿತ್ರ ಪುಷ್ಕರಣಿ ಎಂದು ಹೆಸರಿದೆ. ಈ ಪುಷ್ಕರಣಿಯಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಒಂದು ಕಾಲದಲ್ಲಿ ಸಂತೆಬೆನ್ನೂರು ಬರಗಾಲಕ್ಕೆ ತುತ್ತದಾಗಲೂ ಈ ಕೊಳದಲ್ಲಿ ನೀರು ತುಂಬಿತ್ತೆಂದು ನಂಬಲಾಗುತ್ತದೆ. ಈ ಕಾರಣದಿಂದ ಇದಕ್ಕೆ ಅಕ್ಷಯ ಪಾತ್ರೆ ಎಂತಲೂ ಕರೆಯುತ್ತಾರೆ. ಇದಲ್ಲದೆ ಕೊಳದ ಮದ್ಯದಲ್ಲಿ ಹಿಂದೂ-ಅರಬ್ ಶೈಲಿಯಲ್ಲಿ ನಿರ್ಮಿತವಾದ ಐದು ಅಂತಸ್ತಿನ "ವಸಂತ ಮಂಟಪ" ಈ ಕೊಳಕ್ಕೆ ಅದ್ಬುತವಾದ ಶೋಬೆಯನ್ನು ಕೊಡುತ್ತದೆ.

ಇತರೆ ಮಾಹಿತಿ[ಬದಲಾಯಿಸಿ]

ಸಂತೆಬೆನ್ನೂರಿನಲ್ಲಿ ವಿಜಯ ಯುವಕ ಸಂಘದವರು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆಯನ್ನು ಸತ್ಯನಾರಾಯಣ ನಾಡಿಗ್ ಎಂಬುವವರು ಸ್ಥಾಪಿಸಿದರು. ಈಗ ಆ ಸಂಘವನ್ನು ಶ್ರೀ ಸುಮತೀಂದ್ರ ನಾಡಿಗ್'ರವರು ನೋಡಿಕೊಳ್ಳುತ್ತಿದ್ದಾರೆ.

ಸಂತೆಬೆನ್ನೂರಿನಲ್ಲಿ ಮದುವೆಯ ಮಂಟಪ ಮತ್ತು ಒಂದು ಪದವಿ ಕಾಲೇಜು ಕೂಡ ಇದೆ. ಅಲ್ಲಿ ಶ್ರೀ ರಾಮನ ದೇವ್ವಸ್ಥಾನವೂ ಇದೆ.