ವಿ. ಎಮ್. ಇನಾಮದಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವೆಂಕಟೇಶ ಮಧ್ವರಾವ ಇನಾಮದಾರ ಇವರು ೧೯೧೩ ಅಕ್ಟೋಬರ ೧ರಂದು ಬೆಳಗಾವಿ ಜಿಲ್ಲೆಯ ಹುದಲಿಯಲ್ಲಿ ಜನಿಸಿದರು.


ಎಂ.ಎ. ಪದವಿ ಪಡೆದ ಬಳಿಕ ಕೆಲ ಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿ, ಪ್ರಾಧ್ಯಾಪಕ ವೃತ್ತಿ ಕೈಗೊಂಡರು.

ಪರಿವಿಡಿ

ಕೃತಿಗಳು[ಬದಲಾಯಿಸಿ]

ಕಾದಂಬರಿಗಳು[ಬದಲಾಯಿಸಿ]

  • ಕನಸಿನ ಮನೆ
  • ಕಟ್ಟಿದ ಮನೆ
  • ಮಂಜು ಮುಸುಕಿದ ದಾರಿ
  • ಮುಗಿಯದ ಕಥೆ
  • ಈ ಪರಿಯ ಸೊಬಗು
  • ವಿಷ ಬೆಳಸು
  • ಮೂರಾಬಟ್ಟೆ
  • ಶಾಪ
  • ನವಿಲು ನೌಕೆ
  • ಬಿಡುಗಡೆ

ಅನುವಾದ[ಬದಲಾಯಿಸಿ]

  • ಎರಡು ಧ್ರುವ (ಮೂಲ ಮರಾಠಿ: ವ್ಹಿ.ಎಸ್. ಖಾಂಡೇಕರ)
  • ಯಯಾತಿ (ಮೂಲ ಮರಾಠಿ: ವ್ಹಿ.ಎಸ್.ಖಾಂಡೇಕರ)

('ಯಯಾತಿ'ಕಾದಂಬರಿಗಾಗಿ ವ್ಹಿ.ಎಸ್.ಖಾಂಡೇಕರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.)

ಇತರ[ಬದಲಾಯಿಸಿ]

  • ಪಾಶ್ಚಾತ್ಯ ಕಾವ್ಯಮೀಮಾಂಸೆ
  • ಕಾಳಿದಾಸನ ಕಥಾ ನಾಟಕಗಳು

ಪುರಸ್ಕಾರ[ಬದಲಾಯಿಸಿ]

೧೯೭೭ರಲ್ಲಿ ವಿ.ಎಂ.ಇನಾಮದಾರರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ನೀಡಲಾಯಿತು.

ನಿಧನ[ಬದಲಾಯಿಸಿ]

ವಿ.ಎಂ.ಇನಾಮದಾರರು ೧೯೮೬ ಜನೆವರಿ ೨೬ರಂದು ನಿಧನರಾದರು.


ಇನಾಮದಾರ ಪ್ರಶಸ್ತಿ[ಬದಲಾಯಿಸಿ]

ಇನಾಮದಾರರ ನಿಧನದ ನಂತರ ಸಾಹಿತ್ಯಕ್ಷೇತ್ರದಲ್ಲಿ "ವಿ.ಎಂ.ಇನಾಮದಾರ ಪ್ರಶಸ್ತಿ"ಯನ್ನು ವಾರ್ಷಿಕವಾಗಿ ನೀಡಲಾಗಿತ್ತಿದೆ.


ಚಲನಚಿತ್ರ[ಬದಲಾಯಿಸಿ]

ಇವರ "ಶಾಪ" ಕಾದಂಬರಿಯನ್ನು ಆಧರಿಸಿ "ಮುಕ್ತಿ" ಎನ್ನುವ ಚಲನಚಿತ್ರವನ್ನು ತೆಗೆಯಲಾಗಿತ್ತು. ಈ ಚಲನಚಿತ್ರದಲ್ಲಿ ಕಲ್ಪನಾ ಇವರು ನಾಯಕಿಯಾಗಿದ್ದರು.