ಹಸಲುರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಹಸಲರು ಅಥವಾ ಹಸಲರು ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಆದಿವಾಸಿಗಳಾಗಿದ್ದಾರೆ. ಸರ್ಕಾರವು ಇವರನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಿದೆ.

ಹಸಲ ಎನ್ನುವ ಪದ ಕನ್ನಡದ 'ಹೂಳೆ' ಎಂದರೆ, ಮಗು ಎಂಬ ಪದದಿಂದ ಬಂದಿದೆ. ಹಸಲರ ಮುಗ್ಧತೆ ಮತ್ತು ಸೇವಾಭಾವನೆ ಇವುಗಳಿಂದಾಗಿ ಇವರನ್ನು 'ಹಸುಲಾ' ಅಥವಾ 'ಹಸುಳೆ'ಗಳೆಂದು ಕರೆಯುತ್ತಿದ್ದರಂತೆ ಕೊನೆಗೆ ಇದು ಹಸಲರು ಎಂದು ಬದಲಾವಣೆಗೋಂಡಿದೆ [೧].

ಮೂಲ ಮತ್ತು ವಸಸ್ಥಳ:

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರದ ಬೆಟ್ಟ ಪ್ರದೇಶಗಳಿಗೆ ವಲಸೆಹೋಗಿ ನೆಲೆಸಿದ್ದಾರೆ. ಈ ಸಮುದಾಯ ಹೆಚ್ಚಾಗಿ ಪಶ್ಚಿಮ ಘಟ್ಟದ ಶಿವಮೊಗ್ಗದ ಸಾಗರ, ಹೊಸ ನಗರ ಹಾಗೂ ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಕಂಡುಬರುತ್ತಾರೆ [೨].

ಜೀವನ ಮತ್ತು ಆಹಾರ ಕ್ರಮ:

ಮೂಲತಃ ಹಸಲರು ಬೇಟೆಗಾರರಾಗಿದ್ದು, ಕಾಡು ಹಂದಿ, ಕಾಡು ಕುರಿ ಮತ್ತು ಇನ್ನಿತರ ಪ್ರಾಣಿಗಳಾನ್ನು ಬೇಟೆಯಾಡುತ್ತಿದ್ದರು, ಕ್ರಮೇಣ ನೆಡುತೋಪು ಕೆಲಸದಲ್ಲಿ ತೊಡಗಿಕೋಡು ಕೃಷಿ ಕಾರ್ಮಿಕರಾದರು. ಸಹ್ಯಾದ್ರಿ ಘಟ್ಟದ (ಪಶ್ಚಿಮ ಘಟ್ಟ) ಚಹಾ ಮತ್ತು ಕಾಫಿ ತೋಟಗಳಲ್ಲಿ ಹಸಲುರು ಪ್ರಮುಕ ಕಾರ್ಮಿಕರಾಗಿದ್ದಾರೆ. ಹಸಲರು ಬಹುತೇಕ ತಮ್ಮ ಹೆಚ್ಚಿನ ಸಮಯವನ್ನು ಗದ್ದೆ ಅಥವಾ ತೋಟಗಳಲ್ಲೇ ಕಳೆಯುತ್ತಾರೆ . ಅಡಕೆಯ ಮರ ಹತ್ತುವ ಕಲೆಯಲ್ಲಿ ನಿಪುಣರಾಗಿದ್ದಾರೆ. ಒಬ್ಬ ಜಮೀನುದಾರರೊಂದಿಗೆ ಶಾಶ್ವತವಾಗಿ ಕೆಲಸ ಮಾಡುವ ಹಸಲರನ್ನು (ಹಸಾಲಾ) ಮುಲಾಡಾ ಎಂದು ಕರೆಯುತ್ತಾರೆ. ತುಳು ಅವರ ಮಾತೃಭಾಷೆ, ಆದರೆ ಕನ್ನಡವನ್ನು ಹೆಚ್ಚಾಗಿ ಮಾತನಾಡುತ್ತಾರೆ. ಅಕ್ಕಿ ಅವರ ಪ್ರಧಾನ ಆಹಾರವಾಗಿದೆ, ಸ್ಥಳೀಯವಾಗಿಲಭ್ಯವಿರುವ ತರಕಾರಿಗಳನ್ನು ಕೆಂಪು ಇರುವೆಗಳು, ಕಾಡು ಪಕ್ಷಿಗಳ ತಿನ್ನುತ್ತಾರೆ. ತಂಬಾಕನ್ನು ತಿನಲು ಮತ್ತು ಬೀಡಿ ಸೆಯಲು ಬಳಸುತ್ತಾರೆ. ಅಕ್ಕಿ, ಗೋಡಂಬಿ ಹಣ್ಣಿನ ರಸ ಮತ್ತು ಬೈನೆ ಮರದ ರಸವನ್ನು ಹುದುಗಿಸಿ ಮಧ್ಯರಸವನ್ನು ಪಡೆದು ಸೇವಿಸುತ್ತಾರೆ. ಅವರು ಜೇನುತುಪ್ಪ ಮತ್ತು ಇತರ ಅರಣ್ಯ ಆಹಾರ ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ. ಅವರು ಕೋಲಾ ಎಂದು ಕರೆಯಲ್ಪಡುವ ಭೂತಾ ಪೂಜಾದಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೂ ಜಾತಿ ಅಚರಣೆಗಳಿಂದ ಅಂತರವನ್ನು ಬಯಸುತ್ತಾರೆ. ಹಸಲರು ಗುರಿಕಾರಾ ಎಂದು ಕರೆಯಲ್ಪಡುವ ಆನುವಂಶಿಕ ಮುಖ್ಯಸ್ಥನನ್ನು ಹೊಂದಿರುತ್ತಾರೆ. ಇತರ ಹಿರಿಯರ ಸಹಾಯದಿಂದ ಮುಖ್ಯಸ್ಥ, ವಿವಾದಗಳನ್ನು ಪರಿಹರಿಸುತ್ತದೆ. ಅಪರಾಧದ ಮೇಲೆ ಶಿಕ್ಷೆಯನು ವಿಧಿಸಲಾಗುತ್ತದೆ [೩] [೪] [೫].

ಉಡುಗೆ:

ಸಾಮಾನ್ಯವಾಗಿ ಮಹಿಳೆಯರು ಸಿರೆ ಮತ್ತು ಕುಪ್ಪಸ ಧರಿಸುತ್ತಾರೆ. ಪುರುಷರು ಪಂಚೆ ಧರಿಸುತ್ತಾರೆ. ಒಣ ಅಡಿಕೆ ಎಲೆಗಳಿಂದ ತಯಾರಿಸಿದ ಮಂಡೆ ಹಾಳೆ ಅಥವಾ ಹಾಳೆ ಟೋಪಿ ಎಂದು ಕರೆಯೂವ ಟೋಪಿಯನ್ನು ಧರಿಸುತ್ತಾರೆ. ಹೆಗಲಿಗೊಂದು ಚೀಲ, ನಡಕ್ಕೊಂದು(ನಡುವಿಗೊಂದು) ಕೂಡಗೋಲು ಧರಿಸಿ ತೋಟಗಳಲ್ಲಿ ಮತ್ತು ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ[೬].

ಜನಸಂಖ್ಯೆ:

2001 ರ ಜನಗಣತಿಯ ಪ್ರಕಾರ ಹಸಲರು ಜನಸಂಖ್ಯೆ 20,820 ಮತ್ತು 2011 ರ ಜನಗಣತಿಯ ಪ್ರಕಾರ 24,466 ರಷ್ಟು ಇದೆ. ಹಸಲರಲ್ಲಿ ಸಾಕ್ಷರತೆಯು ತುಂಬಾ ಕಡಿಮೆ ಇದೆ. ಇತ್ತೀಚೆಗೆ ಅವರು ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಕಳುಹಿಸಲು ಪ್ರಾರಂಭಿಸಿದ್ದಾರೆ [೭].

ಜನಪ್ರಿಯ ಸಂಸ್ಕೃತಿ ಮತ್ತು ಕಲೆಯಲ್ಲಿ:

ಹಸಲರು ಬುಡಕಟ್ಟು ಜನಾಂಗದ ತ್ಯಾಗ ಮತ್ತು ಶ್ರಮದ ಪ್ರತಿಫಲವಾಗಿ ಶಿವಮೊಗ್ಗ ಜಿಲ್ಲೆಯ 'ಲಿಂಗನಮಕ್ಕಿ ಅಣೆಕಟ್ಟೆಯು' ನಿರ್ಮಾಣಗೊಂಡಿದೆ ಎಂದು ಹೇಳುತ್ತರೆ. ಬಹುತೇಕ ಹಸಲರು ಸಮುದಾಯವನ್ನು 1964ರಲ್ಲಿ ಲಿಂಗನಮಕ್ಕಿ ಆಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಯಿತು. ಆದರೆ ಹಸಲರು ಹಿನ್ನಿರಿನ ನಡುಗಡ್ಡೆಯಲ್ಲಿ ಶೋಚನೀಯ ಜೀವನ ನಡೆಸುತ್ತಿದ್ದಾರೆ. ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ 'ದ್ವೀಪ' ಚಿತ್ರವು ಬುಡಕಟ್ಟು ಜನರ ಕಥನವನ್ನು ಈ ಲಿಂಗನಮಕ್ಕಿಯ ಅಣೆಕಟ್ಟಿನ ಹಿನ್ನಲೆಯಾಗಿ ಹುಟ್ಟಿಕೊಂಡ ಅವರ ಸಮಸ್ಯೆಗಳ ಕುರಿತಾಗಿ ಹೇಳುತ್ತದೆ [೮].


ಉಲ್ಲೇಖಗಳು:

  1. ಜಿ. ಎಸ್. ಭಟ್ಟ., Malenaadina Hasalaru ( ಮಲೆನಾಡಿನ ಹಸಲರು ).,https://m.dailyhunt.in/Ebooks/kannada/malenaadina-hasalaru-book-110214
  2. http://oldrol.lbp.world/UploadArticle/157.pdf
  3. http://documents.worldbank.org/curated/en/326141468260650104/text/multi0page.txt
  4. http://oldrol.lbp.world/UploadArticle/157.pdf
  5. https://joshuaproject.net/people_groups/18774/IN
  6. http://oldrol.lbp.world/UploadArticle/157.pdf
  7. https://joshuaproject.net/people_groups/18774/IN
  8. https://zeenews.india.com/kannada/culture/hasalaru-tribes-of-malenadu-region-924
"https://kn.wikipedia.org/w/index.php?title=ಹಸಲುರು&oldid=1185444" ಇಂದ ಪಡೆಯಲ್ಪಟ್ಟಿದೆ