ಪರಿಸರದ ನೀತಿನಿಯಮಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.2) (Robot: Adding hy:Էկոլոգիական էթիկա
೧೩೬ ನೇ ಸಾಲು: ೧೩೬ ನೇ ಸಾಲು:
[[fr:Éthique de l'environnement]]
[[fr:Éthique de l'environnement]]
[[hi:पर्यावरणीय नीति]]
[[hi:पर्यावरणीय नीति]]
[[hy:Էկոլոգիական էթիկա]]
[[is:Umhverfissiðfræði]]
[[is:Umhverfissiðfræði]]
[[ja:環境倫理学]]
[[ja:環境倫理学]]

೧೪:೨೮, ೨೪ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

ಅಮಾನವೀಯ ವಿಶ್ವವನ್ನು ಒಳಗೊಳ್ಳಲು ಕೇವಲ ಮಾನವರನ್ನು ಸಮಾವೇಶ ಮಾಡಿಕೊಳ್ಳುವುದರಿಂದ ಧರ್ಮ ಸಿದ್ಧಾಂತಗಳ ಪರಂಪರಾಗತ ಸೀಮೆಗಳನ್ನು ವಿಸ್ತರಿಸಲು ಪರಿಗಣಿಸುವ ವಾತಾವರಣದ ತತ್ವಶಾಸ್ತ್ರದ ಒಂದು ಭಾಗವೇ ಪರಿಸರದ ನೀತಿನಿಯಮಗಳು . ಕಾನೂನು, ಸಮಾಜಶಾಸ್ತ್ರ, ವೇದಾಂತ, ಅರ್ಥಶಾಸ್ತ್ರ, ಪರಿಸರಶಾಸ್ತ್ರ, ಹಾಗೂ ಭೂಗೋಳವನ್ನು ಒಳಗೊಂಡಂತಹ ನೀತಿ ಶಿಕ್ಷಣಗಳ ಒಂದು ವಿಶಾಲ ವ್ಯಾಪ್ತಿಯಲ್ಲಿ ಅದು ಪ್ರಭಾವವನ್ನು ಬೀರುತ್ತದೆ.

ವಾತಾವರಣಕ್ಕೆ ಸಂಬಂಧಿಸಿದಂತೆ ಮಾನವ ಜೀವಿಗಳು ಅನೇಕ ನೀತಿಶಾಸ್ತ್ರಗಳ ತೀರ್ಮಾನಗಳನ್ನು ಕೈಗೊಳ್ಳುವರು. ಉದಾಹರಣೆಗೆ:

  • ಮಾನವನ ಉಪಯೋಗಕ್ಕೊಸ್ಕರ ನಾವು ಕಾಡುಗಳನ್ನು ಸಂಪೂರ್ಣವಾಗಿ ನಾಶಗೊಳಿಸುವುದನ್ನು ಮುಂದುವರಿಸಬೇಕೆ?
  • ಹೆಚ್ಚಿಸುವುದನ್ನು ನಾವು ಮುಂದುವರಿಸಬೇಕೆ?
  • ಅನಿಲ ಕಾರ್ಯಶಕ್ತಿಯ ವಾಹನಗಳ ತಯಾರಿಕೆಯನ್ನು ನಾವು ನಿರಂತರವಾಗಿ ನಡೆಸಿಕೊಂಡು ಹೋಗಬೇಕೆ?
  • ಭವಿಷ್ಯದ ಜನಾಂಗಕ್ಕೆ ನಾವು ಪರಿಸರೆದ ಯಾವ ಋಣವನ್ನು ರಕ್ಷಿಸುವುದು ಅವಶ್ಯಕ?[೧][೨]
  • ಮಾನವತೆಯ ಅನುಕೂಲಕ್ಕಾಗಿ ಒಂದು ತಳಿಯ ಅಳಿವಿಗೆ ತಿಳಿದೂ ಕಾರಣವಾಗುವುದು ಮಾನವರಿಗೆ ಸರಿಯೇ?

ಪರಿಸರದ ಸಮಸ್ಯೆಗಳ ತತ್ವಶಾಸ್ತ್ರೀಯ ಮಗ್ಗುಲುಗಳನ್ನು ಪರಿಗಣಿಸಲು ಪರಿಸರವಾದಿಗಳು ತತ್ವಶಾಸ್ತ್ರಜ್ಞರನ್ನು ಒತ್ತಾಯಿಸಲು ಪ್ರಾರಂಭಿಸಿದಾಗ, ರ್ಯಾಚೆಲ್ ಕಾರ್ಸನ್ ಹಾಗೂ ೧೯೭೦ ರಲ್ಲಿ ಮೊದಲ ಭೂ ದಿವಸ ದಂತಹ ಘಟನೆಗಳು ವಿಜ್ಞಾನಿಗಳ ಕೆಲಸಕ್ಕೆ ಪ್ರತಿಕ್ರಯಿಸಲು ಶೈಕ್ಷಣಿಕ ಶಿಸ್ತಿನ ಕ್ಷೇತ್ರದಲ್ಲಿ ಪರಿಸರದ ನೀತಿನಿಯಮಗಳು ಉದ್ಭವಿಸಿದವು. ವಿಜ್ಞಾನದಲ್ಲಿ ಪ್ರಕಟಿಸಲ್ಪಟ್ಟ ಎರಡು ಪ್ರಬಂಧಗಳು ತೀವ್ರವಾದ ಪ್ರಭಾವವನ್ನು ಬೀರಿದವು: ಲಿನ್ ವೈಟರ "ನಮ್ಮ ಪರಿಸರ ಶಾಸ್ತ್ರದ ವಿಷಮಸ್ಥಿತಿಯ ಐತಿಹಾಸಿಕ ಬೇರುಗಳು" (ಮಾರ್ಚ್ ೧೯೬೭)[೩] ಹಾಗೂ ಗಾರ್ನೆಟ್ ಹಾರ್ಡಿನ್ಸ್ ರ "ಸಾಮಾನ್ಯರ ದುರಂತ" (ಡಿಸೆಂಬರ್ ೧೯೬೮).[೪] ಗಾರ್ನೆಟ್ ಹಾರ್ಡಿನ್ಸ್ ರ ನತರದ ಪ್ರಬಂಧ "ಉಳಿವಿಗಾಗಿ ಹೊಸ ಧರ್ಮ ಸಿದ್ಧಾಂತಗಳ ಶೋಧನ" ಎಂಬುದೂ ಸಹ ಪ್ರಭಾವಶಾಲಿಯಾದದ್ದು, ಅದೂ ಅಲ್ಲದೆ, ಪರಿಸರ ಶಾಸ್ತ್ರದ ವಿಷಮಸ್ಥಿತಿಯ ಕಾರಣಗಳು ತತ್ವಶಾಸ್ತ್ರೀಯವೆಂದು (೧೯೪೯) ಲಿಯೊ ಫೊಲ್ಡ್ ನ "ಭೂ ಧರ್ಮಸಿದ್ಧಾಂತವೆಂದು ಕರೆಯಲ್ಪಡುವ 'ಎ ಸ್ಯಾಂಡ್ ಕೌಂಟಿ ಆಲ್ಮನಕ್ ' ಎಂಬ ತನ್ನ ಪ್ರಬಂಧದಲ್ಲಿ ಅಲ್ಡೊ ಲಿಯೊಫೊಲ್ಡ್ ಸ್ಪಷ್ಟವಾಗಿ ಸಾಧಿಸಿದ್ದಾನೆ.[೫]

೧೯೭೦ ರ ಕೊನೆಯಲ್ಲಿ ಮತ್ತು ೧೯೮೦ ರ ಪ್ರಾರಂಭದಲ್ಲಿ ಉತ್ತರ ಅಮೇರಿಕಾದಿಂದ ೧೯೭೯ರಲ್ಲಿ ಯು ಎಸ್ ಆಧಾರಿತ ಪತ್ರಿಕೆ ಎನ್ವಿರೋನ್ಮೆಂಟಲ್ ಎಥಿಕ್ಸ್' ಹಾಗೂ ೧೯೮೩ ರಲ್ಲಿ ಕೆನಡಾದಲ್ಲಿ ಸ್ಥಾಪಿಸಲ್ಪಟ್ಟ ಪತ್ರಿಕೆಯುThe Trumpeter: Journal of Ecosophy ಈ ಕ್ಷೇತ್ರದಲ್ಲಿ ಮೊದಲ ಅಂತರಾಷ್ಟ್ರೀಯ ಶೈಕ್ಷಣಿಕ ಶಿಸ್ತಿನ ಸಂಚಿಕೆಗಳು ಹೊರಬಂದವು. ಮೊದಲ ಬ್ರಿಟಿಷ್ ಆಧಾರಿತ ಈ ರೀತಿಯ ನಿಯತಕಾಲಿಕ, ಎನ್ವಿರೋನ್ಎಂಟಲ್ ವ್ಯಾಲ್ಯೂಸ್' , ೧೯೯೨ ರಲ್ಲಿ ಪ್ರಾರಂಭಿಸಲ್ಪಟ್ಟಿತು.

ಮಾರ್ಷಲ್ ರ ಪರಿಸರದ ನೀತಿಶಾಸ್ತ್ರದ ವಿಭಾಗಗಳು

ಸ್ವಾಭಾವಿಕ ಪರಿಸರವನ್ನು ವಿವಿಧ ಮಾರ್ಗಗಳಲ್ಲಿ ಬೆಲೆ ಕಟ್ಟಿ ವರ್ಗೀಕರಿಸಲು ಪ್ರಯತ್ನಿಸಿದ ಅನೇಕ ವಿದ್ವಾಂಸರಿದ್ದಾರೆ. ಪೀಟರ್ ವರ್ಡಿ ಯವರು ತಮ್ಮ "ಧರ್ಮಸಿದ್ಧಾಂತಗಳ ಒಗಟುಗಳು" ನಲ್ಲಿ ತಿಳಿಸಿರುವಂತೆ ಅಲನ್ ಮಾರ್ಷಲ್ ಹಾಗೂ ಮೈಖೇಲ್ ಸ್ಮಿತ್ ರವರು ಇದಕ್ಕೆ ಇತ್ತೀಚಿನ ಎರಡು ಉದಾಹರಣೆಗಳು.[೬] ಮಾರ್ಷಲ್ಲರಿಗೆ, ಕಳೆದ ೪೦ ವರ್ಷಗಳಿಂದೀಚೆಗೆ ಮೂರು ಸಾಮಾನ್ಯ ನೀತಿಶಾಸ್ತ್ರಗಳ ಅನುಸಂಧಾನಗಳು ಹೊರಬದಿವೆ. ಮಾರ್ಷಲ್ಲರು ಅವುಗಳನ್ನು ವಿವರಿಸಲು ಈ ಕೆಳಗಿನ ವಿವರಣೆಗಳನ್ನು ಉಪಯೋಗಿಸುತ್ತಾರೆ: ಸ್ವೇಚ್ಛಾಚಾರದ ವಿಸ್ತರಣೆ, ಪರಿಸರ ಶಾಸ್ತ್ರೀಯ ವ್ಯಾಪಕತೆ ಹಾಗೂ ರಕ್ಷಣಾ ನೀತಿ ನಿಯಮಗಳು.

(ಆರ್ಷಲ್ಲರ ಪರಿಸರದ ನೀತಿಶಾಸ್ತ್ರಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ, ಇದನ್ನು ನೋಡಿರಿ: ಎ. ಮಾರ್ಷಲ್, ೨೦೦೨, ಪ್ರಕೃತಿಯ ಐಕ್ಯತೆ, ಇಂಪೀರಿಯಲ್ ಕಾಲೇಜ್ ಪ್ರೆಸ್: ಲಂಡನ್).

ಸ್ವೇಚ್ಛಾಚಾರದ ವಿಸ್ತರಣೆ

ಮಾರಷಲ್ಲರ ಸ್ವೇಚ್ಛಾಚಾರದ ವಿಸ್ತರಣೆಯು ಒಂದು ಪುರಜನರ ಅನಿರ್ಭಂಧತೆಯನ್ನು ಪ್ರತಿಧ್ವನಿಸುತ್ತದೆ. (ಅಂದರೆ, ಒಂದು ಸಮಾಜದ ಎಲ್ಲಾ ಸದಸ್ಯರಿಗೆ ಸಮಾನ ಹಕ್ಕುಗಳನ್ನು ವಿಸ್ತರಿಸುವ ಒಂದು ಕಟ್ಟುಪಾಡು). ಪರಿಸರವಾದಿತ್ವದಲ್ಲಿ, ಆದಾಗ್ಯೂ, ಸಾಮೂಹಿಕ ಒಡೆತನವು ಸಾಮಾನ್ಯವಾಗಿ ಮಾನವರೂ ಅಲ್ಲದೆ ಆ-ಮಾನವರನ್ನು ಒಳಗೊಂಡಿರುವುದೆಂದು ಯೋಜಿಸಲ್ಪಟ್ಟಿದೆ.

ಆಂಡ್ರೂ ಬ್ರೆನ್ನನ್ ರ ಪರಿಸರ ಶಾಸ್ತ್ರೀಯ ಮಾನವತ್ವದ (ಪರಿಸರ ಮಾನವೀಯತೆ) ಒಬ್ಬ ನ್ಯಾಯವಾದಿ, ಸಜೀವ ಹಾಗೂ ನಿರ್ಜೀವವಾದ, ಎಲ್ಲಾ ತತ್ವಶಾಸ್ತ್ರೀಯ ಅಸ್ತಿತ್ವವುಳ್ಳ ವಸ್ತುಗಳು, ಎಬ ಚರ್ಚೆಯು, ಅವು ಇರುವ ಆಧಾರದ ಮೇಲೆ ಸಂಪೂರ್ಣವಾಗಿ ನೀತಿಶಾಸ್ತ್ರದ ಬೆಲೆಯನ್ನು ಕೊಡಬಹುದು. "ಆಳವಾದ ಪರಿಸರಶಾಸ್ತ್ರ" ಎಂಬ ಪದವನ್ನು ಅವರು ಆಯ್ದುಕೊಂಡಾಗ್ಯೂ, ಆರ್ನೆ ನೆಸ್ಸ್ ಹಾಗೂ ಅವರ ಸಹೋದ್ಯೋಗಿ ಸೆಷೆನ್ಸ್ ರ ಕೆಲಸವು ಸಹ ಸ್ವೇಚ್ಛಾಚಾರದ ವಿಸ್ತರಣೆಯಡಿ ಸೇರುತ್ತವೆ. ಆಳವಾದ ಪರಿಸರ ಮೌಲ್ಯಕ್ಕೆ ಒಂದು ಪ್ರಮಾಣವಾಗಿದೆ - ಅದು ಸ್ವತಃ ಬೆಲೆಯುಳ್ಳದ್ದೆಂಬ ಅಭಿಪ್ರಾಯ. ಅವರ ವಾಗ್ವಾದವು ಆಕಸ್ಮಿಕವಾಗಿ, ಸ್ವೇಚ್ಛಾಚಾರದ ಹಾಗೂ ಪರಿಸರಶಾಸ್ತ್ರದ ವಿಸ್ತರಣೆ ಎರಡರಡಿಯೂ ಸಂಭವಿಸುತ್ತದೆ.

ಪೀಟರ್ ಸಿಂಗರ್ ರವರ ಕೆಲಸವನ್ನು ಮಾರ್ಷಲ್ಲರ 'ಸ್ವೇಚ್ಛಾಚಾರದ ವಿಸ್ತರಣೆಯಡಿ' ವರ್ಗೀಕರಿಸಬಹುದು. ಅವರು "ನೈತಿಕ ಬೆಲೆಯ ವಿಸ್ತರಣಾವೃತ್ತ"ವು ಅ-ಮಾನವೀಯ ಪ್ರಾಣಿಗಳ ಹಕ್ಕುಗಳನ್ನು ಸೇರಿಸಲು ಹಿಂದೆಗೆದುಕೊಳ್ಳಬೇಕು, ಮತ್ತು ಹಾಗೆ ಮಾಡದಿರುವುದು ವರ್ಗೀಕರಣದ ದೋಷವಾಗುವುದೆಂದು ತರ್ಕಿಸಿದರು. ಆ-ಜೈವಿಕ ಅಥವಾ "ಇಂದ್ರೀಯ ಜ್ಞಾನವಿಲ್ಲದ" (ಅರಿವಿಲ್ಲದ) ಸಹಜ ಬೆಲೆಯಿಂದ ಚರ್ಚೆಯನ್ನು ಒಪ್ಪಿಕೊಳ್ಳಲು ಸಿಂಗರ್ ಅದನ್ನು ಕಷ್ಟವೆಂದು ತಿಳಿದರು, ಹಾಗೂ ನೈತಿಕ ಬೆಲೆಯ ವಿಸ್ತರಣಾ ವೃತ್ತದಲ್ಲಿ ಅವುಗಳು ಒಳಗೊಳ್ಳ ಬಾರದೆದು "ವ್ಯಾವಹಾರಿಕ ನೀತಿನಿಯಮಗಳ" ತಮ್ಮ ಮೊದಲ ಪ್ರಕಟಣೆಯಲ್ಲಿ ತೀರ್ಮಾನಿಸಿದರು.[೭] ಈ ವಿಷಯಾಂಶವು ಖಂಡಿತವಾಗಿಯೂ ಹಾಗಾದರೆ, ಜೈವಿಕ-ಕೇಂದ್ರವುಳ್ಳದ್ದು. ಆದರೂ, "ಕಾರ್ಯರೂಪದ ನೀತಿಶಾಸ್ತ್ರಗಳ" ನೆಸ್ಸ್ ಹಾಗೂ ಸೆಷನ್ಸ್ ರ ಅನ್ವೇಷಣೆಯ ನಂತರ ತಮ್ಮ ಮುಂದಿನ ಮುದ್ರಣದಲ್ಲಿ, ಆಳವಾದ ಪರಿಸರ ಶಾಸ್ತ್ರದಿಂದ ಮನಗಾಣದೆ ಇದ್ದಾಗ್ಯೂ, ಅರಿವಿಲ್ಲದ ಅಸ್ತಿತ್ವವುಳ್ಳ ವಸ್ತುಗಳ ತೋರಿಕೆಯುಳ್ಳದ್ದಾದರೂ, ಅತ್ಯಂತ ಹೆಚ್ಚು ಸಮಸ್ಯಾತ್ಮಕವಾದದ್ದೆಂದು ಸಿಂಗರ್ ಒಪ್ಪಿಕೊಂಡರು. ಸಿಂಗರ್ ನಿಜವಾಗಿಯೂ ಮಾನವೀಯತೆಯ ೊಂದು ನೀತಿ ನಿಯಮವನ್ನು ವಾದಿಸಲಿಲ್ಲವೆಂದು ನಾವು ಮುಂದೆ ನೋಡೋಣ.

ಪರಿಸರ ಶಾಸ್ತ್ರೀಯ ವಿಸ್ತಾರ

ಅಲನ್ ಮಾರ್ಷಲ್ಲರ ಪರಿಸರ ಶಾಸ್ತ್ರದ ವ್ಯಾಪ್ತಿಯು ಮಾನವ ಹಕ್ಕುಗಳ ಮೇಲಲ್ಲ. ಆದರೆ ಎಲ್ಲಾ ಜೀವ ಶಾಸ್ತ್ರೀಯವಾದ (ಹಾಗೂ ಕೆಲವು ಜೀವಶಾಸ್ತ್ರೀಯವಲ್ಲದ) ಅಸ್ತಿತ್ವವುಳ್ಳ ವಸ್ತುಗಳು ಮತ್ತು ಅವುಗಳ ಅಗತ್ಯವಾದ ವಿವಿಧತೆಗಳ ಮೂಲಭೂತವಾದ ಪರಸ್ಪರ ಅವಲಂಬನೆಯ ಗುರುತಿಸುವಿಕೆಯ ಮೇಲೆ . ಸ್ವೇಚ್ಛಾಚಾರದ ವಿಸ್ತಾರವು ಸ್ವಾಭಾವಿಕ ವಿಶ್ವದ ಒಂದು ರಾಜಕೀಯ ಪ್ರತಿಬಿಂಬದಿಂದ ಹರಿಯುವಿಕೆಯಿಂದು ಯೋಚಿಸಬಹುದಾದರೆ, ಸನ್ನಿವೇಶದ ವ್ಯಾಪ್ತಿಯು ನೈಸರ್ಗಿಕ ಜಗತ್ತಿನ ವೈಜ್ಞಾನಿಕ ಪ್ರತಿಛಾಯೆಯೆಂದು ಅತ್ಯಂತ ಉತ್ತಮವಾಗಿ ಯೋಚಿಸಲ್ಪಡುತ್ತದೆ. ಪರಿಸರ ಶಾಸ್ತ್ರವು ಸುಮಾರಾಗಿ ಸ್ಮಿತ್ ರ ಪರಿಸರದ ನೀತಿಶಾಸ್ತ್ರದ ತದ್ರೂಪ ವರ್ಗೀಕರಣವಾಗಿದೆ, ಮತ್ತು ಪರಿಸರ ವ್ಯವಸ್ಥೆಗಳು ಇಲ್ಲವೇ ಜಗದ್ವ್ಯಾಪಿ ಸನ್ನಿವೇಶವನ್ನು ಒಂದು ಪೂರ್ಣ ಅಸ್ತಿತ್ವವುಳ್ಳ ವಸ್ತುವಿನಂತಹ ಸಾಮೂಹಿಕವಾದ ಪರಿಸರ ಶಾಸ್ತ್ರದ ವಸ್ತುಗಳಲ್ಲಿ ಸಹಜ ಮೌಲ್ಯದ ವಾಸ್ತವಿಕತೆಗೆ ಎಂದು ಅದು ವಾದಿಸುತ್ತದೆ. ಕೆಲವರಲ್ಲಿ ಒಬ್ಬರಾದ, ಹೋಮ್ಸ್ ರೋಲ್ಟ್ಸನ್ ಈ ಅನುಸಂಧಾನವನ್ನು ನಡೆಸಿದ್ದಾರೆ.

ಜೇಮ್ಸ್ ಲವ್ ಲಾಕ್ ರವರ ಗೈಯ ಪೂರ್ವಸಿದ್ಧಾಂತವನ್ನು ಈ ವರ್ಗವು ಒಳಗೊಂಡಿದೆ: ಸಾವಯುವ ಹಾಗೂ ಅ-ಸಾವಯುವ ವಸ್ತುವು ಕ್ರಮವಾಗಿ ಬರುವ ಒಂದು ಸಮಸ್ಥಿತಿಯ ಅಖಂಡತೆಯ ಭರವಸೆಗೆ ಕಾರಣವಾಗಿ ಹೆಚ್ಚು ಕಾಲ ಭೂ ಗ್ರಹವು ತನ್ನ ಭೂ-ಶರೀರ ವಿಜ್ಞಾನದ ರಚನೆಯನ್ನೂ ಬದಲಾಯಿಸುತ್ತದೆ ಎಂಬ ಪ್ರಮೇಯವೂ ಸೇರಿದೆ. ಕೊನೆಗೆ ಗೊತ್ತಾದ ಪ್ರಾಮುಖ್ಯತೆಯು ಇಲ್ಲದ ಮಾನವ ಜಾತಿಯ ನೀತಿನಿಯಮಗಳ ಜೊತೆಗೆ ಒಂದು ಜೊತೆಗೂಡಿದ ಪಾವನವಾದ ಅಸ್ತಿತ್ವವುಳ್ಳ ವಸ್ತುವೆಂದು ಈ ಗ್ರಹವು ವೈಶಿಷ್ಟ್ಯ ಕೊಡಲ್ಪಟ್ಟಿದೆ.

ಸಂರಕ್ಷಣಾ ನೀತಿನಿಯಮಗಳು

ಮಾನವನಲ್ಲದ ಜೀವಶಾಸ್ತ್ರೀಯವಾದ ವಿಶ್ವಕ್ಕೆ ಪ್ರಯೋಜನ ಮೌಲ್ಯದ ಒಂದು ವಿಸ್ತಾರವೇ ಮಾರ್ಷಲ್ಲರ 'ಪಾಲನೆಯ ಧರ್ಮ ಸಿದ್ಧಾಂತಗಳ' ಒಂದು ವರ್ಗೀಕರಣವಾಗಿದೆ. ಮಾನವರಿಗೆ ಅದರ ಉಪಯೋಗ ಇಲ್ಲವೇ ಪ್ರಯೋಜನಕರದ ರೀತಿಗಳಲ್ಲಿ ಸನ್ನಿವೇಶದ ಕೇವಲ ಬೆಲೆಯ ಮೇಲೆ ಅದು ಕೇಂದ್ರೀಕರಿಸುತ್ತದೆ. ಅದು 'ಆಳವಾದ ಪರಿಸರ ವಿಜ್ಞಾನದ' ಭಾವನೆಗಳ ಒಳಗಿನ ಮೌಲ್ಯದ ವ್ಯತ್ಯಾಸತೋರಿಸುತ್ತದೆ, ಆದ್ದರಿಂದ ಆಗಾಗ್ಗೆ 'ಆಳವಲ್ಲದ ಪರಿಸರ ಶಾಸ್ತ್ರವೆಂದು' ಉಲ್ಲೇಖಿಸಲ್ಪಡುತ್ತದೆ ಹಾಗೂ ಸಾಮಾನ್ಯವಾಗಿ ಮಾನವ ಜೀವಿಗಳ ಯೋಗಕ್ಷೇಮಕ್ಕೆ ಸಾಧನವೆಂದು - ಅದು ಹೊರಗಿನ ಮೌಲ್ಯವನ್ನು ಹೊಂದಿದೆಯೆಂಬ ಆಧಾರದ ಮೇಲೆ ಸನ್ನಿವೇಶದ ರಕ್ಷಣೆಗಾಗಿ ವಾದಿಸುತ್ತದೆ. ಆದ್ದರಿಂದ ಸಂರಕ್ಷಣೆಯು ಮಾನವ ಕುಲ ಮತ್ತು ಪರಸ್ಪರ ಪೀಳಿಗೆಯ ಪರಿಶೀಲನೆಗಳ ಸಹಿತ ಸಂಪೂರ್ಣವಾಗಿ ಚಿಂತಿಸುವ ಮುಕ್ತಾಯಕ್ಕೆ ಒಂದು ಸಾಧನವಾಗಿದೆ. ೧೯೯೭ ರಲ್ಲಿ ಕ್ಯೂಟೊ ಶೃಂಗಸಭೆಯಲ್ಲಿ ಹಾಗೂ ೧೯೯೨ ರಲ್ಲಿ ರಿಯೊದಲ್ಲಿ ತಲುಪಲ್ಪಟ್ಟ ಮೂರು ಒಪ್ಪಂದಗಳು ಸರ್ಕಾರದಿಂದ ಪ್ರಸ್ತಾಪಿಸಲ್ಪಟ್ಟ ಈ ಕೆಳಕಂಡ ಚರ್ಚೆಗಳು ರಚಿಸಿದ ಧರ್ಮಸಿದ್ಧಾಂತವೇ ಎಂದು ವಾದಿಸಲ್ಪಡಬಹುದು.[ಸಾಕ್ಷ್ಯಾಧಾರ ಬೇಕಾಗಿದೆ]

ಮಾನವೀಯತೆಯ ಪ್ರಮೇಯಗಳು

ಜೈವಿಕ ಕೇಂದ್ರದ ಹಾಗೂ ಪರಿಸರ-ಶುದ್ಧತೆಯ ವಿಚಾರ ಸರಣಿಯ ವಿಶೇಷ ಲಕ್ಷಣಗಳನ್ನು ಅನುಸರಿಸಿ, ಮೈಖೇಲ್ ಸ್ಮಿತ್ ಮುಂದುವರಿದು ಇಂದ್ರಿಯ ಜ್ಞಾನದಂತಹ, ನೀತಿಯ ಸ್ಥಾನಮಾನ ಮತ್ತು ನೀತಿ ನಿಯಮಗಳ ಬೆಲೆಗೆ ಒರೆಗಲ್ಲಿನ ಒಂದು ಗುಂಪು ಅಪೇಕ್ಷಿಸಿದಂತಹ ಮಾನವೀಯತೆಯ ಅಭಿಪ್ರಾಯಗಳನ್ನು ವಿಂಗಡಿಸುತ್ತಾರೆ.[ಸಾಕ್ಷ್ಯಾಧಾರ ಬೇಕಾಗಿದೆ] ತರ್ಕಕ್ಕೆ ಸಶಕ್ತತೆಯ ಮೇಲೆ ವಿಶ್ವಸವಿಡುವಂತಹ ಅರಿಸ್ಟೋಟಲ್ ನಿಂದ ಪ್ರತಿಪಾದಿಸಲ್ಪಟ್ಟ ಮೌಲ್ಯದ ತದ್ರೂಪವಾದ ಒಂದು ಕ್ರಮಾನುಗತ ವ್ಯವಸ್ಥೆಯನ್ನು ಬೆಂಬಲಿಸಿದ ಪೀಟರ್ ಸಿಂಗರ್ ನ ಕೆಲಸಕ್ಕೆ ಇದು ಅನ್ವಯಿಸುತ್ತದೆ. ತೋಟದ ಕಳೆಯಂತಹ ಒಂದು ಅರಿವಿಲ್ಲದ ಅಸ್ತಿತ್ವವುಳ್ಳ ವಸ್ತುವಿನ ಅಭಿರುಚಿಗಳನ್ನು ತೀರ್ಮಾನಿಸಲು ಪ್ರಯತ್ನಿಸುವಾಗ ಹೊರಹೊಮ್ಮುವ ಸಮಸ್ಯೆಗೆ ಇದು ಪೀಟರ್ ರವರ ಪರಿಹಾರವಾಗಿತ್ತು.

ಕಾಲಕಳೆದಂತೆ ಅವು ಕ್ಷೀಣಿಸುವುದರಿಂದ 'ಕೊರತೆಯ ಮೌಲ್ಯ' ವನ್ನು ಹೊಂದಿರುವ ಜಗತ್ತಿನ ನಾಶವಾಗದ ಭಾಗಗಳು, 'ವಿಶ್ವ ಪರಂಪರೆಯ ತಾಣಗಳ' ಸಂರಕ್ಷಣೆಯನ್ನೂ ಸಹ ಸಿಂಗರ್ ಪ್ರತಿಪಾದಿಸಿದರು. ಅವುಗಳ ರಕ್ಷಣೆಯು ಭವಿಷ್ಯದ ಪೀಳಿಗೆಗೆ ಒಂದು ಪಿತ್ರಾರ್ಜಿತ ಆಸ್ತಿಯಂತೆ, ಏಕೆಂದರೆ ಅವು ನಾವು ನಮ್ಮ ಪೂರ್ವಜರಿಂದ ಪಡೆದ ಸ್ವತ್ತು ಹಾಗೂ ಭವಿಷ್ಯತ್ತಿನ ಜನಾಂಗಕ್ಕೆ ಹಾಗೆಯೇ ಬಳುವಳಿಯಾಗಿ ಕೊಡಬೇಕಾಗಿದೆ. ಆಗ ಅವರು ಹಾಳಾಗದ ಗ್ರಾಮಾಂತರ ಪ್ರದೇಶವನ್ನೇ ಅಥವಾ ಸಂಪೂರ್ಣವಾಗಿ ಪಟ್ಟಣದ ಭೂ ರಮ್ಯ ನೋಟವನ್ನು ಕಂಡು ಸಂತೋಷಿಸಬೇಕೆ ಎಂಬುದನ್ನು ನಿರ್ಧರಿಸಲು ಸದವಕಾಶವನ್ನು ಹೊಂದಬಹುದು. ಉದ್ಭವಿಸಲು ಶತಮಾನಗಳನ್ನೇ ತೆಗೆದು ಕೊಂಡಿರುವ ಒಂದು ಬಹಳ ವಿಶೇಷತೆಯ ಪರಿಸರ ವ್ಯವಸ್ಥೆ ಅಥವಾ ವಾಯುಗುಣದ ತುಟ್ಟತುದಿಯ ಸಸ್ಯವರ್ಗವಾದ ಉಷ್ಣವಲಯದ ಮಳೆಯ ಕಾಡು ವಿಶ್ವ ಪರಂಪರಾತಾಣದ ಒಂದು ಒಳ್ಳೆಯ ಉದಾಹರಣೆಯಾಗಿದೆ. ಮಳೆಯ ಕಾಡನ್ನು ಸಾಗುವಳಿಗಾಗಿ ಸ್ವಚ್ಛಮಾಡುವುದು ಮಣ್ಣಿನ ಪರಿಸ್ಥಿತಿಯ ಕಾರಣದಿಂದ ಕೆಲವು ವೇಳೆ ಸಾಧ್ಯವಾಗುವುದಿಲ್ಲ, ಹಾಗೂ ಒಮ್ಮೆ ನಾಶಗೊಳಿಸಿದರೆ ಪುನರುಜ್ಜೀವಿತವಾಗಲು ಸಾವಿರಾರು ವರುಷಗಳನ್ನು ತೆಗೆದುಕೊಳ್ಳಬಹುದು.

ಅನ್ವಯಿಸಲ್ಪಟ್ಟ ವೇದಾಂತ ವಿದ್ಯೆ

ಕ್ರೈಸ್ತರ ವಿಶ್ವಾವಲೋಕನವು ಜಗತ್ತು ದೇವರಿಂದ ಸೃಷ್ಟಿಸಲ್ಪಟ್ಟಿದ್ದೆಂದೂ ಮತ್ತು ಮಾನವ ಜಾತಿಯು ತನಗೆ ಒಪ್ಪಿಸಿದ ಸಂಪನ್ಮೂಲಗಳ ಉಪಯೋಗಕ್ಕೆ ದೇವರಿಗೆ ಉತ್ತರದಾಯಿಯೆಂದೂ ತಿಳಿಯುತ್ತದೆ. ಅಂತಿಮವಾದ ಮೌಲ್ಯಗಳು ಭಗವಂತನಿಗೆ ಬೆಲೆಬಾಳುವುದೆಂಬ ಪ್ರಕಾಶದಲ್ಲಿ ನೋಡಲ್ಪಡುತ್ತವೆ. ಸ್ವಾರ್ಥಪರತೆ ಹಾಗೂ ವಿವೇಕಶೂನ್ಯಪರತೆಯಲ್ಲಿ ಸ್ವತಃ ತಾನೇ ತೋರಿಸುವ ಪಾಪದ ಈ ಕೆಳಕಂಡ ಆಧ್ಯಾತ್ಮಿಕ ರೋಗದ ಜೊತೆ ವ್ಯವಹರಿಸುತ್ತಾ ಹಾಗೂ ಕ್ರಿಸ್ತನು ಹತೋಟಿಗೊಳಿಸುವ ಪ್ರೀತಿ, (೨ ಕೊರಿಂಥಿಯಾನ್ಸ್ ೫.೧೪f) ಹಾಗೂ ಕ್ರಿಯಾತ್ಮಕ ಪ್ರೇರಣೆ ಮತ್ತು ಪರಿಸರದ ವಿಷಯಾಂಶಗಳು, ಉದಾ: ಪರಿಸರದ ಆರೋಗ್ಯ (ಡ್ಯುಟೆರೊನೊಮಿ ೨೨.೮; ೨೩.೧೨-೧೪) ಹಾಗೂ ವಿಶಾಲ ಅವಕಾಶದಲ್ಲಿ - ಜನಗಳಿಗೆ ಗಮನಿಸುತ್ತಾ (ಮ್ಯಾಥ್ಯು ೨೫) ಇದು ಅನ್ವಯಿಸುತ್ತದೆ. ಅನೇಕ ದೇಶಗಳಲ್ಲಿ ಸುಗ್ಗಿಯ ವಂದನಾರ್ಪಣೆಯ ಕಾಲದಲ್ಲಿ ಹೊಣೆಗಾರಿಕೆಯ ಈ ಸಂಬಂಧವು ಸಂಕೇತಗೊಳಿಸಲ್ಪಡುತ್ತದೆ. (ಬಿ,ಟಿ, ಅಡೆನೆ : ಪಾದರಿಯ ವೇದಾಂತ ಮತ್ತು ಕ್ರೈಸ್ತರ ಧರ್ಮ ಸಿದ್ಧಾಂಯದ ಹೊಸ ನಿಘಂಟಿನಲ್ಲಿ ಜಗದ್ವಾಪಿ ನೀತಿನಿಯಮಗಳು ೧೯೯೫ ಲೆಸೆಸ್ಟರ್)

ಮಾನವಕೇಂದ್ರವಾಗುಳ್ಳ ವಿಜ್ಞಾನ

ಮಾನವ ಕೇಂದ್ರವಾಗುಳ್ಳ ಶಾಸ್ತ್ರವು ಈ ವಿಶ್ವದ ಕೇಂದ್ರದಲ್ಲಿ ಕೇವಲ ಮಾನವನನ್ನು ಮಾತ್ರ ಇಡುತ್ತದೆ; ಮಾನವ ಜಾತಿ ಯಾವಾಗಲೂ ಅದರ ಸ್ವಂತ ಪ್ರಾಥಮಿಕ ಹಂಬಲವಾಗಿರಬೇಕು. ಪಾಶ್ಚಿಮಾತ್ಯ ಸಂಪ್ರದಾಯದಲ್ಲಿ ಒಂದು ಪರಿಸ್ಥಿತಿಯ ಸನ್ನಿವೇಶದ ನೀತಿನಿಯಮಗಳನ್ನು ಪರಿಗಣಿಸುವಾಗ ನಮ್ಮ ತಳಿಯನ್ನು ಗಣನೆಗೆ ತೆಗೆದುಕೊಳ್ಳುವುದು ವಾಡಿಕೆಯಾಗಿದೆ. ಆದ್ದರಿಂದ ಅಸ್ತಿತ್ವದಲ್ಲಿರುವ ಪ್ರತಿಯೊಂದರ ಪ್ರಯೋಜನವೂ ನಮಗೆ ಮಾತ್ರ ಎಂಬ ಭಾವನೆಯಲ್ಲಿ ತಳಿತನಕ್ಕೆ ವಚನಬದ್ಧರಾಗುವಂತೆ ಮೌಲ್ಯ ಮಾಪನ ಮಾಡಬೇಕು. ಎಲ್ಲಾ ಪರಿಸರದ ಅಧ್ಯಯನಗಳೂ ಮಾನವರಲ್ಲದ ಜೀವಿಗಳ ನೈಜ ಮೌಲ್ಯದ ಒಂದು ಬೆಲೆಕಟ್ಟುವಿಕೆಯು ಒಳಗೊಂಡಿರಬೇಕು. [೮]ವಾಸ್ತವವಾಗಿ, ಈ ಗೊತ್ತಾದ ಕಲ್ಪನೆಯ ಮೇಲೆಯೇ, ಒಂದು ತತ್ವಶಾಸ್ತ್ರದ ಸಂಚಿಕೆಯು ಬೇರೆ ಜೀವಿಗಳಬಗ್ಗೆ ಒಂದು ಸೂಚನೆಯಂತೆ ಮಾನವರ ಸಮ್ಮತಿಯ ಅಳಿವಿನ ಪ್ರಾಧ್ಯತೆಯನ್ನು ಇತ್ತೀಚೆಗೆ ಸಂಶೋಧಿಸಿದೆ. [೯] ಲೇಖಕರುಗಳು ಕ್ರಿಯಾತ್ಮತಗೆ ಒಂದು ಕರೆಯಂತೆ ಅದನ್ನು ಅರ್ಥೈಸಿಕೊಳ್ಳಬಾರದೆಂದೂ ಒಂದು ಆಲೋಚನಾ ಪ್ರಯೋಗವೆಂದು ಆ ಕಲ್ಪನೆಗೆ ಗಮನ ಸೆಳೆಯುತ್ತಾರೆ.

ಮಾನವ ದೃಷ್ಟಿಯಿಂದ ರಚಿಸಲ್ಪಟ್ಟ ನೀತಿನಿಯಮಗಳ ಒಂದು ವ್ಯವಸ್ಥೆಯಂತಹ ಮಾನವ ಕೇಂದ್ರವಾಗುಳ್ಳ ಪ್ರಮೇಯಗಳು ಏನನ್ನೂ ಅನುವುಮಾಡಿಕೊಡುವುದಿಲ್ಲವೋ ಎಂಬ ಸತ್ಯಾಂಶವು ಸಂಪೂರ್ಣವಾಗಿ ಸ್ಪಷ್ಟವಾಗಿರಬೇಕೆಂದೇನೂ ಇಲ್ಲ; ಮಾನವರು ಅವಶ್ಯವಾಗಿ ಸತ್ಯಸ್ಥಿತಿಯ ಕೇಂದ್ರವಾಗಿರುವುದಿಲ್ಲ. ನಮಗೆ ಅವೂಗಳ ಉಪಯೋಗತ್ವದ ನೋಟದಿಂದ ತಪ್ಪಾಗಿ ವಸ್ತುಗಳ ಬೆಲೆ ಕಟ್ಟಲು ನಾವು ಉದ್ದೇಶಿಸುತ್ತಿದ್ದೇವೆಂದು ತತ್ವಶಾಸ್ತ್ರಜ್ಞ ಬರೂಚ್ ಸ್ಪಿನೊಜ ವಾದಿಸಿದರು.[ಸಾಕ್ಷ್ಯಾಧಾರ ಬೇಕಾಗಿದೆ] ನಾವು ಪಕ್ಷಪಾತವಿಲ್ಲದ ರೀತಿಯಲ್ಲಿ ವಸ್ತುಗಳ ಕಡೆ ನೋಡಿದರೆ ಈ ವಿಶ್ವದಲ್ಲಿ ಪ್ರತಿಯೊಂದೂ ಅಪೂರ್ವವಾದ ಮೌಲ್ಯವನ್ನು ಹೊಂದಿದೆಯೆಂದು ಕಂಡುಹಿಡಿಯಬಲ್ಲವೆಂದು ಸ್ಪಿನೊಜ ಚರ್ಚಿಸಿದರು. ಅಂತೆಯೇ, ಮಾನವ ಕೇಂದ್ರೀಕೃತವಾದ ಅಥವಾ ಮಾನವ ಕೇಂದ್ರವಾಗುಳ್ಳ, ನರಭಕ್ಷಕ ಕೇಂದ್ರವಾಗುಳ್ಳ ಧರ್ಮ ಸಿದ್ಧಾಂತವು ಸತ್ಯಸ್ಥಿತಿಯ ಸ್ಪಷ್ಟವಾದ ಒಂದು ಚಿತ್ರಣವಲ್ಲ, ಹಾಗೂ ಮಾನವ ಯಥಾದೃಶ್ಯ ನೋಟದಿಂದ ನಾವು ಅರ್ಥಮಾಡಿಕೊಳ್ಳಲು ಶಕ್ತರಾಗಬಹುದು ಅಥವಾ ಇಲ್ಲವೆಂಬ ಒಂದು ವಿಶಾಲ ಚಿತ್ರಣವಿದೆ.

ಪೀಟರ್ ವರ್ದಿ ಎರಡು ಬಗೆಯ ಮಾನವ ಕೇಂದ್ರವಾಗುಳ್ಳ ವಿಜ್ಞಾನದ ಮಧ್ಯೆ ವ್ಯತ್ಯಾಸ ಕಂಡನು.[೧೦] ಬಲವಾದ ಒಂದು ವಿಚಾರ ಸರಣಿಯು ಮಾನವ ಕೇಂದ್ರವಾಗುಳ್ಳ ನೀತಿಶಾಸ್ತ್ರವು ಮಾನವರು ಸತ್ಯಸ್ಥಿತಿಯ ಕೇಂದ್ರದಲ್ಲಿದ್ದಾರೆ ಎಂದು ಪ್ರತಿಪಾದಿಸುತ್ತದೆ ಹಾಗೂ ಆ ರೀತಿ ಯೋಚಿಸುವುದು ಅದಕ್ಕೆ ಸರಿಯಿದೆ. ಬಲಹೀನ ಮಾನವ ಕೇಂದ್ರವಾಗುಳ್ಳ ಶಾಸ್ತ್ರವು, ಆದಾಗ್ಯೂ, ಮಾನವನ ದೃಷ್ಟಿಕೋನದಿಂದ ಸತ್ಯಸ್ಥಿತಿಯು ಮಾತ್ರ ಅರ್ಥ ವಿವರಿಸಬಹುದು, ಈ ರೀತಿಯಾಗಿ ಮಾನವರು ಅವು ಕಂಡಂತೆ ಅಸ್ತಿತ್ವದ ಕೇಂದ್ರದಲ್ಲಿರಬೇಕಾಗುತ್ತದೆ ಎಂದು ವಾದಿಸುತ್ತದೆ.

ಅದರ ಪ್ರಬಲ ಪ್ರವೃತ್ತಿಗಳಲ್ಲಿ ಒಂದಾದಂತಹ ಪರಿಸರದ ವಾಸ್ತವಿಕತೆ ಎನ್ನುವ ತಮ್ಮ ಪ್ರಾರಂಭದ ಮುಖಾಂತರ ಸನ್ನಿವೇಶದ ನೀತಿನಿಯಮಗಳ ಅತ್ಯಾವಶ್ಯದ ನಟರಲ್ಲಿ ಒಬ್ಬರಾದ ಬ್ರ್ಯಾನ್ ನೊರ್ಟನ್ ರಿಂದ ಮತ್ತೊಂದು ಅವಲೋಕನವು ಅಭಿವೃದ್ಧಿಗೊಳಿಸಲ್ಪಟ್ಟಿತು. ಮಾನವ ಕೇಂದ್ರವಾಗುಳ್ಳ ಧರ್ಮಸಿದ್ಧಾಂತಗಳ ರಕ್ಷಕರು ಹಾಗೂ ಮಾನವ ಕೇಂದ್ರವಾಗಿಲ್ಲದೆಯಿರುವ ನೀತಿಶಾಸ್ತ್ರಗಳ ಬೆಂಬಲಿಗರ ನಡುವಿನ ವ್ಯಾಜ್ಯದಲ್ಲಿ ನಿಷ್ಠೆಯನ್ನು ತೋರಿಸಲು ಸನ್ನಿವೇಶದ ವ್ಯಾವಹಾರಿಕತೆಯು ನಿರಾಕರಿಸುತ್ತದೆ. ಬದಲಿಗೆ, ಬಲವಾದ ಮಾನವ ಕೇಂದ್ರವಾಗುಳ್ಳ ವಿಜ್ಞಾನ ಮತ್ತು ಬಲಹೀನ - ಅಥವಾ ವಿಸ್ತರಿಸಿದ ಮಾನವ ಕೇಂದ್ರವಾಗುಳ್ಳ ಶಾಸ್ತ್ರದ ಮಧ್ಯೆ ನಾರ್ಟನ್ ವ್ಯತ್ಯಾಸ ಕಾಣಲು ಬಯಸುತ್ತಾರೆ ಹಾಗೂ ಮಾನವರು ನೈಸರ್ಗಿಕ ವಿಶ್ವದಿಂದ ಹೊಂದಬಹುದಾದ ಸಾಧನದ ಮೌಲ್ಯಗಳ ವಿವಿಧತೆಯನ್ನು ಅಲ್ಪವಾಗಿ ತಿಳಿಯದಂತೆ ಭಾವನೆಯನ್ನು ಸುಧಾರಿಸುವುದನ್ನು ಕೇವಲ ಎರಡನೆಯದು ಮಾತ್ರ ಶಕ್ತವಾಗಿದೆ.[೧೧]

ಕ್ಷೇತ್ರದ ಸ್ಥಾನಮಾನ

೧೯೭೦ ರ ಸಮಯದಲ್ಲಿ, ನಿರ್ವಹಿಸಿದ ಶೈಕ್ಷಣಿಕ ವೈಶಿಷ್ಟ್ಯದ ತತ್ವಶಾಸ್ತ್ರದ ಪ್ರತಿಬಿಂಬದ ಒಂದು ವಿಷಯವು ಪರಿಸರದ ನೀತಿನಿಯಮಗಳಾದವು. ೧೯೮೦ ರ ಉದ್ದಕ್ಕೂ ಅದು ವಿಶ್ವದಾದ್ಯಂತ ಹರಡಿರುವ ಆಲೋಚಕರ ಸಾಕಷ್ಟು ಒಂದು ಚಿಕ್ಕ ತಂಡದ ಗಮನವನ್ನು ಸೆಳೆಯುತ್ತಾ, ತತ್ವಶಾಸ್ತ್ರದ ನೀತಿ ಶಿಕ್ಷಣದೊಳಗೆ ಪಕ್ಕದಲ್ಲಿ ಬರೆದಂತೆಯೇ ಉಳಿಯಿತು.

ಕೇವಲ ೧೯೯೦ ರ ನಂತರ ಮಾತ್ರ ಕೊಲೆರಡೊ ರಾಜ್ಯ, ಮೊಂಟನಾ ವಿಶ್ವವಿದ್ಯಾಲಯ, ಬೌಲಿಂಗ್ ಗ್ರೀನ್ ರಾಜ್ಯ, ಹಾಗೂ ನಾರ್ತ ಟೆಕ್ಸಾಸ್ ವಿಶ್ವವಿದ್ಯಾಲಯ ದಂತಹ ಕಾರ್ಯಕ್ರಮಗಳಲ್ಲಿ ಈ ಕ್ಷೇತ್ರವು ಒಂದು ಸಂಸ್ಥೆಗೆ ಸಂಬಂಧಪಟ್ಟ ಸಮ್ಮತಿಯನ್ನು ಗಳಿಸಿದವು. ೧೯೯೧ ರಲ್ಲಿ, ಇಂಗ್ಎಂಡಿನ ಡಾರ್ಲಿಂಗ್ಟನ್ ನ ಶುಮೆಚರ್ ಕಾಲೇಜು ಸ್ಥಾಪಿಸಲ್ಪಟ್ಟು, ಈಗ ವೇದಾಂತ ವಿಜ್ಞಾನದಲ್ಲಿ ಎಂಎಸ್ ಸಿ ಯನ್ನು ಒದಗಿಸುತ್ತದೆ.

ಪರಿಸರದ ನೀತಿನಿಯಮಗಳು/ತತ್ವಶಾಸ್ತ್ರದಲ್ಲಿ ಒಂದು ವಿಶೇಷತೆಯ ಸಹಿತ ಸ್ನಾತಕೋತ್ತರ ಪದವಿಯನ್ನೂ ಈ ಕಾರ್ಯಕ್ರಮಗಳು ಕೊಡಲು ಪ್ರಾರಂಭಿಸಿದವು. ೨೦೦೫ ರಲ್ಲಿ ಪ್ರಾರಂಭಿಸಲ್ಪಟ್ಟ ತತ್ವಶಾಸ್ತ್ರ ಹಾಗೂ ನೀತಿಶಾಸ್ತ್ರದ ಅಧ್ಯಯನಗಳ ಿಲಾಖೆಯು ನಾರ್ತ ಟೆಕ್ಸಾಸ್ ನ ವಿಶ್ವವಿದ್ಯಾಲಯದಲ್ಲಿ ಪರಿಸರದ ಧರ್ಮಸಿದ್ಧಾಂತಗಳ/ತತ್ವಶಾಸ್ತ್ರದಲ್ಲಿ ಕೇಂದ್ರೀಕರಣದ ಸಹಿತ ಪಿಹೆಚ್ ಡಿ ಪದವಿಯನ್ನು ಕೊಟ್ಟಿತು.

ಉಲ್ಲೇಖಗಳು

  1. ಕ್ರಿಸ್ಚಿಯನ್ ಸಹಾಯದಿಂದ ವಾತಾವರಣದ ಬದಲಾವಣೆಯಿಂದಾದ ಬಲಿಪಶುಗಳ ಸಂಖ್ಯೆಯು ಹತ್ತಿರದೆ ಭವಿಷ್ಯದಲ್ಲಿ ಮಿಲಿಯನ್ ಗಳಾಗುತ್ತವೆಂದು ಅಂದಾಜು ಮಾಡಲಾಗಿದೆ
  2. ಆಗಲೇ ವಾತಾವರಣದ ಬದಲಾವಣೆಯಿಂದ 150000 ಜನರು ಕೊಲ್ಲಲ್ಪಟ್ಟಿದ್ದಾರೆ
  3. White, Lynn (1967). "The Historical Roots of our Ecologic Crisis". Science. {{cite journal}}: External link in |title= (help); Unknown parameter |month= ignored (help)
  4. Hardin, Garrett (1968). "The Tragedy of the Commons". Science. 162 (859): 1243. doi:10.1126/science.162.3859.1243. PMID 5699198. {{cite journal}}: Unknown parameter |month= ignored (help)
  5. Leopold, Aldo (1949). "The Land Ethic". A Sand County Almanac.
  6. Vardy, Peter. The Puzzle of Ethics.
  7. Singer, Peter. Practical Ethics (1 ed.).
  8. ಸಿಂಗರ್, ಪೀಟರ್. " ಪರಿಸರದ ಮೌಲ್ಯಗಳು. ದಿ ಆಕ್ಸಫರ್ಡ್ ಬುಕ್ ಆಫ್ ಟ್ರಾವೆಲ್ ಸ್ಟೋರೀಸ್. ಸಂಪಾದಕರು. ಐಯಾನ್ ಮಾರ್ಶ್. ಮೆಲ್ಬೊರ್ನ್, ಆಸ್ಟ್ರೇಲಿಯಾ: ಲೋಂಗ್ಮಾನ್ ಚೆಸೈರ್, ೧೯೯೧. ೧೨-೧೬.
  9. ತಾರಿಕ್ ಕೊಚಿ & ನೊಯಾಮ್ ಓರ್ಡಾನ್, “ಆನ್ ಅರ್ಗುಮೆಂಟ್ ಫಾರ್ ದಿ ಗ್ಲೋಬಲ್ ಸೂಯಿಸೈಡ್ ಆಫ್ ಹುಮ್ಯಾನಿಟಿ”. ಬೊರ್ಡರ್ ಲ್ಯಾಂಡ್ಸ್, 2008, ಸಂಪುಟ. 3, 1-21.
  10. ಪೀಟರ್ ವರ್ಡಿ ಮತ್ತು ಪೌಲ್ ಗ್ರೊಸ್ಚ್(೧೯೯೪, ೧೯೯೯), 'ನೀತಿ ನಿಯಮಗಳ ಒಗಟು', ಪುಟ.೨೩೧
  11. ಅಫೈಸ್ಸಾ, ಹೆಚ್. ಎಸ್. (2008) “ದಿ ಟ್ರಾಸ್ಫೊರ್ಮೇಟಿವ್ ವಾಲ್ಯು ಆಫ್ ಎಕಲಾಜಿಕಲ್ ಪ್ರಾಗ್ಮಾಟಿಸಮ್. ಆನ್ ಇನಟ್ರೊಡಕ್ಷನ್ ಟು ದಿ ವರ್ಕ್ಸ್ ಆಫ್ ಬ್ರಯಾನ್ ಜಿ. ನಾರ್ಟನ್”. S.A.P.I.EN.S. 1 (1)

ಇವನ್ನೂ ಗಮನಿಸಿ

ಬಾಹ್ಯ ಕೊಂಡಿಗಳು