ಸಿ.ಪಿ. ಕೃಷ್ಣಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಿ.ಪಿ.ಕೆ ಇಂದ ಪುನರ್ನಿರ್ದೇಶಿತ)
ಸಿ. ಪಿ. ಕೃಷ್ಣಕುಮಾರ್
ಜನನಏಪ್ರಿಲ್ ೮. ೧೯೩೯
ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಚಿಕ್ಕನಾಯಕನ ಹಳ್ಳಿ
ವೃತ್ತಿಅಧ್ಯಾಪಕರು, ಸಂಶೋಧಕರು
ವಿಷಯಕನ್ನಡ ಸಾಹಿತ್ಯ

ಸಿ.ಪಿ. ಕೃಷ್ಣಕುಮಾರ್ (ಸಿ.ಪಿ.ಕೆ.) ಅಂದರೆ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡರ ಮಗ ಕೃಷ್ಣಕುಮಾರ್ ಅವರು ೧೯೩೯ ಎಪ್ರಿಲ್ ೮ ರಂದು ಜನಿಸಿದರು. ತಾಯಿ ಚಿಕ್ಕಮ್ಮ; ತಂದೆ ಪುಟ್ಟೇಗೌಡರು ಮೋಜಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಸಿ.ಪಿ.ಕೆ. ೯ ತಿಂಗಳ ಕೂಸಿದ್ದಾಗ ತಾಯಿ ತೀರಿಕೊಂಡರು.

ಶಿಕ್ಷಣ ಹಾಗು ಉದ್ಯೋಗ[ಬದಲಾಯಿಸಿ]

ಸಿ.ಪಿ.ಕೆ.ಯವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ) ಪದವಿಯನ್ನು ಪಡೆದರು.೧೯೬೧ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು. ಅಲ್ಲದೆ ಭಾರತೀಯ ವಿದ್ಯಾ ಭವನದ ಸಂಸ್ಕೃತ ಕೋವಿದ ಪದವಿಯನ್ನು ಸಹ ಪಡೆದರು. ಅದೇ ವರ್ಷ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ೧೯೬೨ರಲ್ಲಿ ಸಿ.ಪಿ.ಕೆ.ಯವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. ೧೯೬೪ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು. ೧೯೬೭ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. ೧೯೬೯ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾದರು. ೧೯೭೪ರಲ್ಲಿ ಪಿ.ಎಚ್.ಡಿ. ಪಡೆದ ಬಳಿಕ ೧೯೮೦ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿಯೇ ಪ್ರಾಧ್ಯಾಪಕರಾದರು. ಆನಂತರ ಆ ಸಂಸ್ಥೆಯ ನಿರ್ದೇಶಕರೂ ಆದರು.

ವಿವಿಧ ಜವಾಭ್ಧಾರಿ ನಿರ್ವಹಣೆ[ಬದಲಾಯಿಸಿ]

ಸಿ.ಪಿ.ಕೆ ಅವರು ನಿವೃತ್ತಿಯ ನಂತರವೂ ಹೊತ್ತ ಜವಾಬ್ದಾರಿಗಳು ಹಲವಾರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾಗಿ, ಮೈಸೂರು ವಿ.ವಿ.ದ ಪ್ರಸಾರಾಂಗದ ಗ್ರಂಥ ಪ್ರಕಟಣಾ ಸಮಿತಿ ಅಧ್ಯಕ್ಷರಾಗಿ, ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ, ಸಮಗ್ರವಚನ ಸಂಪುಟಗಳ ಸಂಪಾದಕ ಮಂಡಲಿ, ರಾಜ್ಯ ಗ್ರಂಥಾಲಯ ಇಲಾಖೆಯ ಗ್ರಂಥ ಖರೀದಿ ಅಯ್ಕೆ ಸಮಿತಿ, ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಮುಂತಾದವುಗಳಲ್ಲೂ ತಮ್ಮ ಅತ್ಯಮೂಲ್ಯ ಸಲಹೆ, ಸಹಕಾರಗಳನ್ನು ನೀಡಿದ್ದಾರೆ.

ಸಮ್ಮೇಳನಾಧ್ಯಕ್ಷತೆ[ಬದಲಾಯಿಸಿ]

ಸಿ. ಪಿ. ಕೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ವಿಚಾರ ಸಂಕಿರಣಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗೆಯಲ್ಲಿ ನಡೆದ ಅಖಿಲ ಭಾರತ 49ನೆಯ ಕನ್ನಡ ಸಮ್ಮೇಳನದ ಭಾಷಾಂತರ ಗೋಷ್ಠಿಯ ಅಧ್ಯಕ್ಷತೆ, 1971ರಲ್ಲಿ ನಾಗಮಂಡಲದಲ್ಲಿ ನಡೆದ ಜಾನಪದ ಸಮ್ಮೇಳನದ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ, ಟಿ. ನರಸೀಪುರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1994ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, 1994ರಲ್ಲಿ ಲಕ್ನೋದಲ್ಲಿ ನಡೆದ ಗಣರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಕೆ, 2011ರಲ್ಲಿ ಗಂಗಾವತಿಯಲ್ಲಿ ನಡೆದ 78ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ – ಹೀಗೆ ಹಲವಾರು ಗೌರವಗಳು ಪ್ರೊ. ಸಿ.ಪಿ. ಕೃಷ್ಣಕುಮಾರ್ ಅವರಿಗೆ ಸಂದಿವೆ.

ಪ್ರಶಸ್ತಿಗಳು[ಬದಲಾಯಿಸಿ]

ಸಿ.ಪಿ.ಕೆ ಅವರ ಸಾಹಿತ್ಯದ ಬಹುಮುಖ ಕೊಡುಗೆಗಳಿಗಾಗಿ ಸಂದ ಪ್ರಶಸ್ತಿಗಳು ಹಲವಾರು. ‘ವಚನ ವಿಲೋಕನ’ ಕೃತಿಗೆ ಬಸವ ವೇದಿಕೆಯು ‘ಬಸವ ಸಾಹಿತ್ಯಶ್ರೀ’ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಚಿತ್ರದುರ್ಗದ ಬೃಹನ್ಮಠದ ‘ವಿದ್ವತ್‌ ಶಿರೋಮಣಿ’ ಪ್ರಶಸ್ತಿ, ಮುಕ್ತಕ ಅಕಾಡಮಿಯಿಂದ ‘ಹನಿಗವನ ಹರಿಕಾರ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಎಚ್.ಎಲ್. ನಾಗೇಗೌಡ ‘ಜಾನಪದ ತಜ್ಞ’ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಎಸ್.ವಿ.ಪಿ. ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ಇನ್ನೂ ಮುಂತಾದ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಪ್ರೊ. ಸಿ.ಪಿ. ಕೃಷ್ಣಕುಮಾರ್ ಅವರಿಗೆ ಅಭಿಮಾನಿಗಳು ಅರ್ಪಿಸಿರುವ ಗೌರವ ಗ್ರಂಥ ‘ಸಾರ್ಥಕ’.

ಸಾಹಿತ್ಯ ರಚನೆ[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  • ಅಂತರತಮ (ವಚನಗಳು)
  • ಅನಂತ-ಪೃಥ್ವೀ
  • ಒಳದನಿ
  • ತಾರಾಸಖ
  • ನೀವೆ ನಮಗೆ ದಿಕ್ಕು
  • ನೂರೊಂದು (ವಚನ, ಕವನ)
  • ಪ್ರಕೃತಿ
  • ಬೊಗಸೆ
  • ವರ್ತಮಾನ
  • ಹನಿಮಿನಿ

ಪ್ರಬಂಧಗಳು[ಬದಲಾಯಿಸಿ]

  • ಚಿಂತನಬಿಂದು
  • ಮೆಲುಕು
  • ವಿಚಾರನಿವಿಷ

ವಿಮರ್ಶೆ/ವಿಚಾರ/ಸಂಶೋಧನೆ[ಬದಲಾಯಿಸಿ]

  • ಅಧ್ಯಯನ
  • ಅಲೋಚನ
  • ಉಪಚಯ
  • ಎರಡು ಜೈನ ಪುರಾಣಗಳು
  • ಐವರು ವಚನಕಾರರು
  • ಕನ್ನಡ ಕಾವ್ಯ : ಹತ್ತು ವರ್ಷ
  • ಕನ್ನಡ ಚತುರ್ಮುಖ
  • ಕರ್ನಾಟಕ ಕಾದಂಬರಿ
  • ಕಲಾಪ
  • ಕಾವ್ಯಗೌರವ
  • ಕಾವ್ಯತತ್ವ : ಕೆಲವು ಮುಖಗಳು
  • ಕಾವ್ಯವಿವೇಕ
  • ಕಾವ್ಯಾರಾಧನ
  • ಕಾವ್ಯಾಲಾಪ
  • ಕುಮಾರವ್ಯಾಸ ಭಾರತ : ಒಂದು ನೋಟ
  • ಕುವೆಂಪು ಕಾವ್ಯ ಮೀಮಾಂಸೆ
  • ಕುವೆಂಪು ಕಿರಣಗಳು
  • ಕುವೆಂಪು ಸಾಹಿತ್ಯ : ಕೆಲವು ಮುಖಗಳು (೧,೨)
  • ಜನ್ನ
  • ಜನ್ನ ಮತು ಅವನ ಕೃತಿಗಳು
  • ಜನ್ನ (ಇತರರೊಡನೆ)
  • ಟಾಲ್ಸ್ಟಾಯ್ ಕಲಾಮೀಮಾಂಸೆ
  • ನಾಗಚಂದ್ರ
  • ನೂರಾರು ವಿಮರ್ಶೆಗಳು
  • ಪಂಪ : ಕೆಲವು ಮುಖಗಳು
  • ಪರಾಮರ್ಶೆ
  • ಪರಿಭಾವನೆ
  • ಪರಿವೀಕ್ಷಣ
  • ಪು.ತಿ.ನ. ಕಾವ್ಯಮೀಮಾಂಸೆ
  • ಬರೆದ ಭಾಷಣಗಳು
  • ಬಸವಭಾವನೆ
  • ಭಾಸ್ಕರಕವಿ
  • ಮುನ್ನುಡಿಮಾಲೆ
  • ರನ್ನ
  • ರನ್ನಪರೀಕ್ಷೆ
  • ಶೋಧನ
  • ಶ್ರೀ ರಾಮಾಯಣ ದರ್ಶನಂ
  • ಶ್ರೀ ರಾಮಕೃಷ್ಣರು ಮತ್ತು ಯುಗಧರ್ಮ
  • ಸಪ್ತಸಮಾಲೋಕ
  • ಸಭಾಪರ್ವ ಸಂತುಲನ
  • ಸಮಾವೇಶ
  • ಸಮಾಹಾರ
  • ಸಮ್ಮೇಳ
  • ಸಾಹಿತ್ಯಮನನ
  • ಸಾಹಿತ್ಯ ಸಂಗತಿ

ಜಾನಪದ[ಬದಲಾಯಿಸಿ]

  • ಜನಪದಗೀತೆ
  • ಜನಪದ ಸಾಹಿತ್ಯ ಪ್ರವೇಶಿಕೆ
  • ಜಾನಪದ ಜಾಗರ
  • ಜಾನಪದ ಪ್ರತಿಭೆ
  • ಜಾನಪದ ಸರಸ್ವತಿ

ಜೀವನ ಚಿತ್ರ[ಬದಲಾಯಿಸಿ]

  • ರತ್ನತ್ರಯ
  • ಸಾಕ್ರೆಟೀಸ್
  • ಸ್ವಾಮಿ ವಿವೇಕಾನಂದ
  • ಹಿರಿಯರ ಗೆರೆಗಳು

ಸಂಪಾದನ[ಬದಲಾಯಿಸಿ]

  • ಅರಣ್ಯಪರ್ವ
  • ಅಂತಃಕರಣ (ಇತರರೊಡನೆ)
  • ಆಯ್ದ ಕುವೆಂಪು ಕವನಗಳು
  • ಇಕ್ಷುಕಾವೇರಿ (ಇತರರೊಡನೆ)
  • ಕಟ್ಟೀಮನಿ : ಬದುಕು-ಬರಹ (ಇತರರೊಡನೆ)
  • ಕನ್ನಡ ಛಂದಸ್ಸಿನ ಚರಿತ್ರೆ (೧,೨)
  • ಕನ್ನಡ ವಿಮರ್ಶೆ (ಇತರರೊಡನೆ)
  • ಕಾಮಳ್ಳಿ
  • ಕಾವ್ಯನಂದನ
  • ಚುಂಚನಗಿರಿ
  • ಮಾರ್ಗದರ್ಶಕರು (ಇತರರೊಡನೆ)
  • ಮುತ್ತ ತುಂಬೇವ ಕಣಜಕೆ (ಇತರರೊಡನೆ)
  • ಯದುಗಿರಿ (ಇತರರೊಡನೆ)
  • ಯದುಗಿರಿಯ ವೀಣೆ (ಇತರರೊಡನೆ)
  • ಶ್ರೀಗಂಧ
  • ಸಹ್ಯಾದ್ರಿ (ಇತರರೊಡನೆ)
  • ಸಾಹಿತ್ಯವಿಮರ್ಶೆ ೧೯೮೦
  • ಸಾಹಿತ್ಯಸೌಧ (ಇತರರೊಡನೆ)
  • ಸಾಹಿತ್ಯಾರಾಧನೆ (ಇತರರೊಡನೆ)
  • ಸುರನದಿಯ ತೀರ್ಥ
  • ಸುರುಚಿ : ನೂರು
  • ಸ್ವಸ್ತಿ ( ಇತರರೊಡನೆ )
  • ಹಬ್ಬಲಿ ಅವರ ರಸಬಳ್ಳಿ
  • ಹರಿಶ್ಚಂದ್ರ ಸಾಂಗತ್ಯ (ರಾಮರಸ ವಿರೂಪಾಕ್ಷ )
  • ಹರಿಶ್ಚಂದ್ರ ಸಾಂಗತ್ಯ (ಹಲಗ)

ಸಂಕೀರ್ಣ[ಬದಲಾಯಿಸಿ]

  • ಅಹಿಂಸೆ
  • ಕುಮಾರವ್ಯಾಸನ ಹತ್ತು ಚಿತ್ರಗಳು
  • ಗಂಧದ ಕೋಟೆ ಗಮಗಮ
  • ಚೆಲುವಯ್ಯ-ವರನಂದಿ
  • ಮಹಾಕವಿಯೊಡನೆ ಮಾತುಕತೆ
  • ವಸುಭೂತಿ ಕಥೆ
  • ಶೃಂಗಾರಲಹರಿ

ಸಂಸ್ಕೃತ ಭಾಷಾಂತರ[ಬದಲಾಯಿಸಿ]

  • ಅಭಿಜ್ಞಾನ ಶಾಕುಂತಲ
  • ಊರುಭಂಗ
  • ಕನ್ನಡ ಉತ್ತರರಾಮಚರಿತ
  • ಕನ್ನಡ ನಾಗಾನಂದ
  • ಕನ್ನಡ ಪ್ರಿಯದರ್ಶಿಕಾ
  • ಕನ್ನಡ ಯಶೋಧರಚರಿತ
  • ಕನ್ನಡ ರತ್ನಾವಳಿ
  • ಕನ್ನಡ ವೇಣೀಸಂಹಾರ
  • ಕನ್ನಡ ಸೌಂದರ್ಯಲಹರಿ
  • ಬೆಳಕಿನ ಹನಿಗಳು
  • ಭಾಸನ ಎರಡು ನಾಟಕಗಳು
  • ರಾಮಾಯಣ : ಬಾಲಕಾಂಡ ( ಇತರರೊಡನೆ)
  • ಶ್ರೀಕೃಷ್ಣ ಕರ್ಣಾಮೃತಸಾರ
  • ಸಂಗ್ರಹ ಭಾಗವತ
  • ಸಂಗ್ರಹ ಮಹಾಭಾರತ
  • ಸಂಗ್ರಹ ರಾಮಾಯಣ

ಇಂಗ್ಲಿಷ್ ಭಾಷಾಂತರ[ಬದಲಾಯಿಸಿ]

  • ಇತಿಹಾಸ, ಪುರಾಣಗಳು
  • ಎಲಿಯಟ್ಟನ ಮೂರು ಉಪನ್ಯಾಸಗಳು
  • ಕಲಾತತ್ವ
  • ಕಲೆ ಎಂದರೇನು?
  • ಕಾಡಿನ ಹಾಡುಗಳು
  • ಕಾವ್ಯ ವಿಚಾರಸಾರ
  • ಗಾಂಧೀ ಕಾಣ್ಕೆ
  • ಠಾಕೂರ್ ವಚನಾಂಜಲಿ
  • ನೋವಿನ ದೇವತೆಗೆ
  • ಪಂಡಿತ ಗೋವಿಂದ ವಲ್ಲಭ ಪಂತ್: ವಿಚಾರಧಾರೆ
  • ಪಾಶ್ಚಾತ್ಯ ಕಾವ್ಯಚಿಂತನ
  • ಪುರಾತನ ನಾವಿಕ
  • ಪ್ರೇಮತತ್ವ
  • ಭಾರತೀಯ ಶಾಸನಶಾಸ್ತ್ರ ಪರಿಚಯ
  • ಭಾಷಾ ಮಾಧ್ಯಮವನ್ನು ಕುರಿತು
  • ಮಹತ್ಕಾವ್ಯ ಕಲ್ಪನೆ
  • ಮಹಾತ್ಮ (ಇತರರೊಡನೆ)
  • ವಿದ್ಯಾಪತಿ
  • ಸಂಕಲನ
  • ಸಾಹಿತ್ಯಪ್ರವೇಶ
  • ಸಾಹಿತ್ಯ ಮತ್ತು ಮನೋವಿಜ್ಞಾನ
  • ಸಾಹಿತ್ಯವಿಮರ್ಶೆಯ ತತ್ವಗಳು
  • ಹನ್ನೊಂದು ಹೊರಗಿನ ಕತೆಗಳು
  • ಹಿಪ್ಪೊಲಿಟಸ್