ಭತೃಹರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭಾತೃ ಹರಿ ಇಂದ ಪುನರ್ನಿರ್ದೇಶಿತ)

....ಭತೃಹರಿಯ ಕಥೆ.....

ಭತೃಹರಿಯು ನಾಡಿನ ಪ್ರಸಿದ್ದ ಕವಿ,ಜ್ಞಾನಿ,ಅನುಭವಿ,ಸಂತ ಈತನು ಮೊದಲು ರಾಜನಾಗಿದ್ದ.ಈತ ಶೂರ ಸಶಕ್ತ ಸ್ಪುರದ್ರೂಪಿಯಾಗಿದ್ದ ಅವನ ಸತಿಯೂ ಅಷ್ಟೇ ರೂಪವತಿಯಾಗಿದ್ದಳು.ಅವಳಿಗೆ ಯಾವುದಕ್ಕೆನೂ ಕೊರತೆ ಇರಲಿಲ್ಲ. ಒಂದು ದಿನ ರಾಜನು ವಿಹಾರಕ್ಕೆಂದು ಅರಣ್ಯಕ್ಕೆ ಹೋದ.ಬ್ರಹದಾಕಾರದ ವೃಕ್ಷ ಹಸಿರು ಹಾಸಿದ ಭೂಮಿ.ಗಿರಿ,ಹರಿಯುವ ತೋರೆಗಳಿಂದ ಅರಣ್ಯ ಅಲಂಕಾರ ಮಾಯವಾಗಿತ್ತು.ವಾತಾವರಣ ಪ್ರಶಾಂತವಾಗಿತ್ತು. ಮದ್ಯದಲ್ಲಿ ಒಂದು ಕುಟೀರ,ಅದರಲ್ಲಿ ಓರ್ವ ಹಿರಿಯ ತಪಸ್ವಿ. ರಾಜನು ಅವರಿಗೆ ಅಭಿನಂದಿಸಿ ಕೈ ಮುಗಿದನು. ಪೂಜ್ಯರು ಆಶಿರ್ವದಿಸಬೇಕು ಎಂದು ಪ್ರಾರ್ಥಿಸಿದ ರಾಜನ ನಯ ವಿನಯ ಕಂಡು ತಪಸ್ಸಿಯು ಸಂತುಷ್ಟನಾಗಿ ಒಂದು ಹಣ್ಣನ್ನು ಕೊಡುತ್ತಾ ರಾಜನಿಗೆ ಹೇಳಿದರು, ಇದನ್ನು ಸೇವಿಸು ನೀನು ನೂರು ವರುಷ ಸುಂದರ ತರುಣನಾಗಿ ಇರುತ್ತಿ ಎಂದರು.ರಾಜನು ಹಣ್ಣನ್ನು ಸ್ವೀಕರಿಸಿ ಸಂತಸದಿಂದ ತಪಸ್ವಿಗೆ ವಂದಿಸಿ ಹಿಂತುರಿಗಿದ. ಅರಮನೆಗೆ ಬರುತ್ತಾ ರಾಜನು ಮನದಲ್ಲಿ ಅಂದುಕೊಂಡ 'ನಾನು ತರುಣನಾಗಿ ರಾಣಿಯರು ಮುಪ್ಪಾಗಿ ಇರುವುದು ಸರಿಯಲ್ಲ.' ಅರಮನೆಗೆ ಬರುತ್ತಲೇ ಆ ಹಣ್ಣನ್ನು ರಾಣಿಯ ಕೈಗೆ ಕೊಟ್ಟು ಅದರ ಮಹತ್ವವನ್ನು ತಿಳಿಸಿದ. ರಾಣಿ ಸಂತುಷ್ಟಳಾಗಿ ಈ ಹಣ್ಣನ್ನು ನಾನು ನಂತರ ಸೇವಿಸುತ್ತೇನೆ ಎಂದಳು, ರಾಜ ಆಗಬಹುದು ಎಂದು ಸಮ್ಮತಿಸಿದ. ಮರುದಿನ ಒಬ್ಬ ರಾಜ ನರ್ತಕಿ ರಾಜದರ್ಬಾರಕ್ಕೆ ಬಂದಳು ಸಿಂಹಾಸನದಲ್ಲಿದ್ದ ರಾಜನಿಗೆ ಒಂದು ಹಣ್ಣನ್ನು ಕೊಡುತ್ತಾ ಹೇಳಿದಳು. ಇದು ಅಮೃತ ಫಲ ಇದನ್ನು ಸೇವಿಸಿದವರು ಚಿರ ಯವ್ವನ ಪಡೆಯುತ್ತಾರೆ.ನಾನು ಸೇವಿಸುವುದರಿಂದ ಯವ್ವನ ಪಡೆದರೆ ಈ ಸಮಾಜಕ್ಕೆ ಇನ್ನಷ್ಟು ಹಾನಿ,ತಾವೇ ಇದನ್ನು ಸ್ವೀಕರಿಸಿ ದೇಶ ಸಂರಕ್ಷಿಸಿ ಎಂದಳು,ಆಶ್ಚರ್ಯ ಚಕಿತನಾದ ರಾಜ ನಿನ್ನ ಕೈಗೆ ಈ ಹಣ್ಣು ಹೇಗೆ ಬಂದಿತು ?ಎಂದು ಕೇಳಿದ ಆಗ ಇದನ್ನು ನಮ್ಮ ಅರಮನೆಯ ಒಬ್ಬ ಸೇವಕ ತರುಣ ಕೊಟ್ಟ ಎಂದಳು ನರ್ತಕಿ. ತಕ್ಷಣ ರಾಜನಿಗೆ ಆ ಹಣ್ಣಿನ ಹಿಂದೆ ನಡೆದ ಹಗರಣವೆಲ್ಲ ಹೊಳೆಯಿತು.ಅನ್ಯಾಸಕ್ತಿಯಿಂದ ನಡೆದ ಅನಾಹುತ ತಿಳಿದು ರಾಜನ ಹೃದಯ ವಿಹ್ವಲ ಗೊಂಡಿತು. 'ಯಾರನ್ನು ನಾನು ಸತತ ನೆನೆಯುವೇನೋ ಅಂಥ ಮಹಾರಾಣಿ ನನ್ನಲ್ಲಿ ವಿರಕ್ತಳು,ಇನ್ನೊಬ್ಬನಲ್ಲಿ ಆಸಕ್ತಳು. ಆ ಇನ್ನೋಬ್ಬನಾದರೋ ಮತ್ತೊಬ್ಬಳಲ್ಲಿ ಆಸಕ್ತನು, ಆ ಮತ್ತೊಬ್ಬಳಾದರೋ ನನ್ನ ಒಳಿತನ್ನು ಹಂಬಲಿಸುವಲ್ಲಿ ಆಸಕ್ತಳು. ಅವಳಿಗೆ, ಅವನಿಗೆ, ಇವಳಿಗೆ, ಕಾಮನಿಗೆ ಕೊನೆಗೂ ನನಗೂ ದಿಕ್ಕಾರವಿರಲಿ. ಈ ಒಂದು ಘಟನೆಯಿಂದ ಮಹಾರಾಜನು ಜಾಗೃತನಾದ 'ತಪಸ್ವಿಯೂ ಈ ಹಣ್ಣನ್ನು ಕೊಟ್ಟು ನನ್ನ ಕಣ್ಣು ತೆರೆಸಿದ ಎಂದು ಮನಸ್ಸಿನಲ್ಲಿಯೇ ನೆನೆದು ಈ ಲೌಕಿಕ ಸುಖದ ವ್ಯಾಮೋಹ ತೊರೆದು ವೈರಾಗ್ಯ ತಾಳಿ ಅರಮನೆ ಬಿಟ್ಟು ಪರಮ ಸತ್ಯ ಅರಸಿಕೊಂಡು ಹೋರಾಟ. ರಾಜ ಮಹಾ ಸಂತನಾದ. ಅವನೇ ಭತೃಹರಿ...

"https://kn.wikipedia.org/w/index.php?title=ಭತೃಹರಿ&oldid=616307" ಇಂದ ಪಡೆಯಲ್ಪಟ್ಟಿದೆ