ವಿಷಯಕ್ಕೆ ಹೋಗು

ಕುರುಂಜಿ ವೆಂಕಟ್ರಮಣ ಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕುರುಂಜಿ ವೆಂಕಟರಮಣ ಗೌಡ ಇಂದ ಪುನರ್ನಿರ್ದೇಶಿತ)
ಕುರುಂಜಿ ವೆಂಕಟ್ರಮಣ ಗೌಡ
ಹೆಸರುಕುರುಂಜಿ ವೆಂಕಟ್ರಮಣ ಗೌಡ
ಜನನ26 ಡಿಸೆಂಬರ್ 1928[]
ಸುಳ್ಯ, ದಕ್ಷಿಣ ಕನ್ನಡ, ಕರ್ನಾಟಕ, ಭಾರತ
ನಿಧನ7 ಆಗಸ್ಟ್ 2013[]
ಖ್ಯಾತಿಗೆ ಕಾರಣಶಿಕ್ಷಣ ಬ್ರಹ್ಮ

ಕುರುಂಜಿ ವೆಂಕಟ್ರಮಣ ಗೌಡ (26 ಡಿಸೆಂಬರ್ 1928 – 7 ಆಗಸ್ಟ್ 2013) ರವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಆಧುನಿಕ ಸುಳ್ಯದ ಭವ್ಯ ಶಿಲ್ಪಿ ಎಂದೇ ಪ್ರಸಿದ್ದರಾಗಿರುವ ಇವರು ಸುಳ್ಯ ಎಂಬ ಪುಟ್ಟ ತಾಲೂಕನ್ನು ಇಡೀ ದೇಶಕ್ಕೆ ಪರಿಚಯಿಸಿದವರು. ಅಂಗನವಾಡಿ ಕೇಂದ್ರದಿಂದ ಪ್ರಾರಂಭವಾಗಿ ಮೆಡಿಕಲ್ ಕಾಲೇಜಿನವರೆಗೆ ಎಲ್ಲ ರೀತಿಯ ವಿದ್ಯಾ ಸಂಸ್ಥೆಗಳನ್ನು ಈ ಪುಟ್ಟ ಊರಲ್ಲಿ ಸ್ಥಾಪಿಸಿ ಶಿಕ್ಷಣ ಬ್ರಹ್ಮ ಎಂದು ಖ್ಯಾತರದವರು.

ಕುರುಂಜಿಯವರ ಚಿಂತನೆಗಳು[]

[ಬದಲಾಯಿಸಿ]
  • ಕಠಿಣ ದುಡಿಮೆ, ಸಮಗ್ರತೆ, ಪ್ರಾಮಾಣಿಕತೆ, ಸಮಯಕ್ಕೆ ಮಹತ್ವ ಮತ್ತು ತ್ಯಾಗ - ಇವು ಯಶಸ್ಸಿನ ಪಂಚಸೂತ್ರಗಳು.
  • ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಮತ್ತು ಆಲಸ್ಯ ಮಾನವನ ಸಪ್ತ ಶತ್ರುಗಳು.
  • ನಾನು ಬರುವಾಗ ಏನನ್ನೂ ತರಲಿಲ್ಲ. ಹೋಗುವಾಗ ಏನನ್ನೂ ಕೊಂಡೊಯ್ಯಲಾಗುವುದಿಲ್ಲ. ಇಲ್ಲಿ ಗಳಿಸಿದ್ದನ್ನು ಇಲ್ಲಿಯೇ ವ್ಯಯಿಸಿದ್ದೇನೆ.
  • ದಲಿತರು, ಸ್ತ್ರೀಯರು ಮತ್ತು ಶೂದ್ರರು ವಿದ್ಯಾವಂತರಾಗುವವರೆಗೆ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ.
  • ಹತ್ತು ಜನ ನಾಲ್ಕು ದಿನ ನೆನಪಿಟ್ಟುಕೊಳ್ಳುವಂತಹ ಕಾರ್ಯ ಮಾಡದವರ ಜೀವನ ವ್ಯರ್ಥ.
  • ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ಶ್ರೇಷ್ಠವಾದದ್ದು.
  • ದಲಿತೋದ್ಧಾರ ಎನ್ನುವುದು ಕೃತಿಯಲ್ಲಿ ಬರಬೇಕು; ಮಾತಿನಲ್ಲಿ ಅಲ್ಲ.
  • ಸತಿಪತಿಯರು ೬೩ರಂತಿರಬೇಕು, ೩೬ರಂಥಲ್ಲ.
  • ಹಾಡಲಾಗದ ಕವಿತೆ ಬರೆದರೇನು ಸುಖ?
  • ಯಕ್ಷಗಾನಕ್ಕೆ ಕನ್ನಡ ಬಿಟ್ಟರೆ ಬೇರಾವ ಭಾಷೆಯೂ ಒಗ್ಗುವುದಿಲ್ಲ.
  • ಕಾಣದ ಬೆಳಕನ್ನು ತೋರುವವನೆ ನಿಜವಾದ ಗುರು.

ಉಲ್ಲೇಖಗಳು

[ಬದಲಾಯಿಸಿ]
  1. "A Tribute of Homage to Dr. Kurunji Venkatramana Gowda on 07/08/2021 – KVG Medical College & Hospital | Best Medical College & Hospital in Karnataka, India".
  2. "Kurunji Venkataramana Gowda no more". coastaldigest.com - The Trusted News Portal of India (in ಇಂಗ್ಲಿಷ್).
  3. "ಇರುಳ ಕಳೆದ ಬೆಳಕು" - ಡಾ. ಬಿ. ಪ್ರಭಾಕರ ಶಿಶಿಲ