ಕುರುಂಜಿ ವೆಂಕಟ್ರಮಣ ಗೌಡ
ಗೋಚರ
(ಕುರುಂಜಿ ವೆಂಕಟರಮಣ ಗೌಡ ಇಂದ ಪುನರ್ನಿರ್ದೇಶಿತ)
ಕುರುಂಜಿ ವೆಂಕಟ್ರಮಣ ಗೌಡ | |
|---|---|
![]() | |
| ಹೆಸರು | ಕುರುಂಜಿ ವೆಂಕಟ್ರಮಣ ಗೌಡ |
| ಜನನ | 26 ಡಿಸೆಂಬರ್ 1928[೧] ಸುಳ್ಯ, ದಕ್ಷಿಣ ಕನ್ನಡ, ಕರ್ನಾಟಕ, ಭಾರತ |
| ನಿಧನ | 7 ಆಗಸ್ಟ್ 2013[೨] |
| ಖ್ಯಾತಿಗೆ ಕಾರಣ | ಶಿಕ್ಷಣ ಬ್ರಹ್ಮ |
ಕುರುಂಜಿ ವೆಂಕಟ್ರಮಣ ಗೌಡ (26 ಡಿಸೆಂಬರ್ 1928 – 7 ಆಗಸ್ಟ್ 2013) ರವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಆಧುನಿಕ ಸುಳ್ಯದ ಭವ್ಯ ಶಿಲ್ಪಿ ಎಂದೇ ಪ್ರಸಿದ್ದರಾಗಿರುವ ಇವರು ಸುಳ್ಯ ಎಂಬ ಪುಟ್ಟ ತಾಲೂಕನ್ನು ಇಡೀ ದೇಶಕ್ಕೆ ಪರಿಚಯಿಸಿದವರು. ಅಂಗನವಾಡಿ ಕೇಂದ್ರದಿಂದ ಪ್ರಾರಂಭವಾಗಿ ಮೆಡಿಕಲ್ ಕಾಲೇಜಿನವರೆಗೆ ಎಲ್ಲ ರೀತಿಯ ವಿದ್ಯಾ ಸಂಸ್ಥೆಗಳನ್ನು ಈ ಪುಟ್ಟ ಊರಲ್ಲಿ ಸ್ಥಾಪಿಸಿ ಶಿಕ್ಷಣ ಬ್ರಹ್ಮ ಎಂದು ಖ್ಯಾತರದವರು.
- ಕಠಿಣ ದುಡಿಮೆ, ಸಮಗ್ರತೆ, ಪ್ರಾಮಾಣಿಕತೆ, ಸಮಯಕ್ಕೆ ಮಹತ್ವ ಮತ್ತು ತ್ಯಾಗ - ಇವು ಯಶಸ್ಸಿನ ಪಂಚಸೂತ್ರಗಳು.
- ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಮತ್ತು ಆಲಸ್ಯ ಮಾನವನ ಸಪ್ತ ಶತ್ರುಗಳು.
- ನಾನು ಬರುವಾಗ ಏನನ್ನೂ ತರಲಿಲ್ಲ. ಹೋಗುವಾಗ ಏನನ್ನೂ ಕೊಂಡೊಯ್ಯಲಾಗುವುದಿಲ್ಲ. ಇಲ್ಲಿ ಗಳಿಸಿದ್ದನ್ನು ಇಲ್ಲಿಯೇ ವ್ಯಯಿಸಿದ್ದೇನೆ.
- ದಲಿತರು, ಸ್ತ್ರೀಯರು ಮತ್ತು ಶೂದ್ರರು ವಿದ್ಯಾವಂತರಾಗುವವರೆಗೆ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ.
- ಹತ್ತು ಜನ ನಾಲ್ಕು ದಿನ ನೆನಪಿಟ್ಟುಕೊಳ್ಳುವಂತಹ ಕಾರ್ಯ ಮಾಡದವರ ಜೀವನ ವ್ಯರ್ಥ.
- ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ಶ್ರೇಷ್ಠವಾದದ್ದು.
- ದಲಿತೋದ್ಧಾರ ಎನ್ನುವುದು ಕೃತಿಯಲ್ಲಿ ಬರಬೇಕು; ಮಾತಿನಲ್ಲಿ ಅಲ್ಲ.
- ಸತಿಪತಿಯರು ೬೩ರಂತಿರಬೇಕು, ೩೬ರಂಥಲ್ಲ.
- ಹಾಡಲಾಗದ ಕವಿತೆ ಬರೆದರೇನು ಸುಖ?
- ಯಕ್ಷಗಾನಕ್ಕೆ ಕನ್ನಡ ಬಿಟ್ಟರೆ ಬೇರಾವ ಭಾಷೆಯೂ ಒಗ್ಗುವುದಿಲ್ಲ.
- ಕಾಣದ ಬೆಳಕನ್ನು ತೋರುವವನೆ ನಿಜವಾದ ಗುರು.
ಉಲ್ಲೇಖಗಳು
[ಬದಲಾಯಿಸಿ]- ↑ "A Tribute of Homage to Dr. Kurunji Venkatramana Gowda on 07/08/2021 – KVG Medical College & Hospital | Best Medical College & Hospital in Karnataka, India".
- ↑ "Kurunji Venkataramana Gowda no more". coastaldigest.com - The Trusted News Portal of India (in ಇಂಗ್ಲಿಷ್).
- ↑ "ಇರುಳ ಕಳೆದ ಬೆಳಕು" - ಡಾ. ಬಿ. ಪ್ರಭಾಕರ ಶಿಶಿಲ
