ಹೊಳಲ್ಕೆರೆ
ಹೊಳಲ್ಕೆರೆ ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿಂದ ಚಿತ್ರದುರ್ಗಕ್ಕೆ ೨೦ ಮೈಲಿ, ದಾವಣಗೆರೆಗೆ ೩೭ ಕಿ. ಮೀ. ದೂರವಿದೆ.
| ಹೊಳಲ್ಕೆರೆ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಚಿತ್ರದುರ್ಗ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
12.2 km² - 710 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
14574 - 1194.59/ಚದರ ಕಿ.ಮಿ. |
| ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 577 526 - +08191 - KA-16 |
ಪರಿವಿಡಿ |
ಪ್ರಸನ್ನಗಣಪತಿ ದೇವಾಲಯ [ಬದಲಾಯಿಸಿ]
ಇಲ್ಲಿನ ಭಾರಿ ಗಣಪತಿಯ ದೇವಾಲಯವನ್ನು ಚಿತ್ರದುರ್ಗದ ಪಾಳೆಯಗಾರ ಗುತ್ಯೆಪ್ಪನಾಯಕನು ೧೭೭೫ ರಲ್ಲಿ, ಕಟ್ಟಿಸಿದನೆಂದು ಶಾಸನಗಳು ತಿಳಿಸುತ್ತವೆ. ಕುಳಿತಿರುವ ಭಂಗಿಯಲ್ಲಿರುವ ಗಣಪತಿ,೨೦ ಅಡಿ [೬ಮಿ] ಎತ್ತರವಿದೆ.
ಹಿಂದೆ ಬಯಲು ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟ ಈ ಗಣಪತಿಯನ್ನು, ,ಸುಮಾರು ೪೫ ವರ್ಷಗಳ ಹಿಂದೆ, ಸಿಡಿಲುಹೊಡೆದುಗಣಪತಿಯ ಹಿಂದಿದ್ದ ಬೃಹದಾಕಾರದ ಬೇವಿನಮರ ನಾಶಗೊಂಡನಂತರ , ಹೊಸದಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಲಾಯಿತು. ಈ ಗಣಪತಿಗೆ ತೂಗುತಲೆ ಗಣಪ ಎಂದೂ ಕರೆಯಲಾಗುತ್ತಿತ್ತು. ಭಕ್ತರ ಆಣತಿಗೆ ಓಗೊಟ್ಟು, ತಲೆತೂಗುತ್ತಿದ್ದ ಎಂಬ ನಂಬಿಕೆಯಿಂದ ಈ ಹೆಸರು ಬಂದಿದೆ.
ಗಣಪತಿಯ ತಲೆಯ ಹಿಂಭಾಗದಲ್ಲಿ ಉದ್ದವಾದ ಜಡೆಯಿದ್ದು, ಅದಕ್ಕೆ ಭಕ್ತರು ಬೆಣ್ಣೆ ಹಚ್ಚುತ್ತಾರೆ. ಆ ಬೆಣ್ಣೆಯನ್ನು ಪ್ರಸಾದವಾಗಿ ತಲೆಗೆ ಸವರಿಕೊಂಡರೆ, ಕೂದಲು ಚೆನ್ನಾಗಿ ಬೆಳೆಯುವುದೆಂಬ ನಂಬಿಕೆಯಿದೆ.
ಮಳೆ, ಬೆಳೆ [ಬದಲಾಯಿಸಿ]
ಇಲ್ಲಿಯ ಮುಖ್ಯ ಬೆಳೆ ರಾಗಿ. ಮಳೆ ಇಲ್ಲಿ ಬಹಳ ಕಡಿಮೆ. ೧೨ ವರ್ಷಕ್ಕೊಮ್ಮೆ ಮಳೆ ಆದದ್ದುಂಟು. ಆದಕಾರಣ ನೀರಿನ ಅಭಾವ ಹೆಚ್ಚು.
ಮುಖ್ಯ ನೀರಿನ ಮೂಲವಾಗಿ ೩ ಕೆರೆಗಳಿವೆ.
- ಹಿರಿಕೆರೆ
- ಹೊನ್ನೆಕೆರೆ
- ಕೆಸರು ಕಟ್ಟೆ
ಹಿರಿಕೆರೆ ಹೆಸರಿಗೆ ತಕ್ಕಹಾಗೆ, ದೊಡ್ಡಕೆರೆ. ಸುಮಾರು ಒಂದೂವರೆ ಮೈಲಿಗಿಂತ ಹೆಚ್ಚು ವಿಸ್ತೀರ್ಣವಿದೆ. ಒಮ್ಮೆ ತುಂಬಿದರೆ, ಸುಮಾರು ವರ್ಷವೆಲ್ಲಾ ತೊಂದರೆ ಇಲ್ಲ. ಹೊನ್ನೆಕೆರೆ,ಚಿಕ್ಕದು.ಮರಳಿನಿಂದ ಆವ್ರುತವಾದ್ದ್ದರಿಂದ ನೀರು ಇಂಗಿಹೋಗುತ್ತದೆ. ಕೆಸರು ಕಟ್ಟೆ, ಹೆಸರಿಗೆ ತಕ್ಕಂತೆ ಚಿಕ್ಕ ಕೆಸರುತುಂಬಿದ ಕೆರೆ. ಆಳವಿಲ್ಲ. ಯಾವಕೆರೆಯ ನೀರೂ ಕುಡಿಯಲು ಯೋಗ್ಯವಿಲ್ಲ. ಕೇವಲ ಕುಡಿಯುವ ನೀರಿನ ಅಭಾವಕ್ಕಾಗಿಯೇ ಊರನ್ನು ಬಿಟ್ಟು, ವಲಸೆ ಹೋದವರು ಹಲವು ಮಂದಿ.
ಸಂಸ್ಥೆಗಳು [ಬದಲಾಯಿಸಿ]
- ಮಲ್ಲಾಡಿಹಳ್ಳಿ ಮಾದಣ್ಣನವರ ಮ್ಯುನಿಸಿಪಲ್ ಹೈಸ್ಕೂಲು (M.M.M.High School)
- ಜೂನಿಯರ್ ಕಾಲೇಜ್
- ಸರ್ಕಾರಿ ಪದವಿ ಕಾಲೇಜು
- ಪೋಸ್ಟ್ ಆಫೀಸ್'
- ತಾಲ್ಲೂಕ್ ಕಛೇರಿ
- ಪ್ರಾಥಮಿಕ ಆರೋಗ್ಯ ಕೇಂದ್ರ
- ಖಾಸಗಿ ಬ್ಯಾಂಕ್
ಬೇರೆ ಯಾವ ದೊಡ್ಡ ಉದ್ಯಮಗಳಿಲ್ಲ. ರೈಲ್ವೆ ಸ್ಟೇಷನ್ ೫ ಕಿ.ಮಿ.ದೂರದಲ್ಲಿದೆ. ಪ್ರತಿ ಭಾನುವಾರ ಸಂತೆ ನಡೆಯುತ್ತದೆ.
ಲೀಲಾ ತಪೋವನ [ಬದಲಾಯಿಸಿ]
೮, ಆಗಸ್ಟ್ ೧೯೯೪ ರಲ್ಲಿ, ಶ್ರೀ. ಮಲ್ಲಿಕಾರ್ಜುನ ಮರುಘರಾಜೇಂದ್ರಸ್ವಾಮಿಗಳು ಶಿವೈಕ್ಯರಾದರು. ಅವರ ಅಂತಿಮ ಇಚ್ಛೆಯಂತೆ ಹೊಳಲ್ಕೆರೆಯ ಹತ್ತಿರದ ಒಂಟಿಕಲ್ಲುಮಠದ ಬಳಿ, ಲೀಲಾ ತಪೋವನ ಎಂಬ ಹೆಸರಿನಲ್ಲಿ ಸ್ವಾಮಿಗಳ ಸಮಾಧಿ ರಚಿಸಿದ್ದಾರೆ. ಒಂದು ಹಣ್ಣಿನತೋಟವನ್ನು, ೪೦ ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಒಂದು ಅಂದಾಜಿನ ಪ್ರಕಾರ, ಲೀಲಾ ತಪೋವನಕ್ಕೆ ಸುಮಾರು ೫ ಕೋಟಿ ರೂಪಾಯಿ ಹಣವನ್ನು ಖರ್ಚುಮಾಡಲಾಗುವುದು. ಶರಣರ ಶೈಲಿಯಲ್ಲಿ ವಿಧಿಪೂರ್ವಕವಾಗಿ,ಚಿತ್ರದುರ್ಗದ ಶ್ರೀ. ಶಿವಮೂರ್ತಿಶರಣರಿಂದ ಇವೆಲ್ಲಾ ಕಾರ್ಯಕ್ರಮಗಳು ಜರುಗಿವೆ. ಪ್ರತಿವರ್ಷವೂ ಜವವರಿ ತಿಂಗಳಿನಲ್ಲಿ, ದಿವಂಗತ. ಮರುಘರಾಜೇಂದ್ರ ಸ್ವಾಮಿಯವರ ಶರಣ ಸ್ಮರಣೋತ್ಸವವನ್ನು ಆಚರಿಸುವ ಪರಿಪಾಠವನ್ನು ಬೆಳೆಸಲಾಗುವುದು.
ಹತ್ತಿರದ ದೇವಾಲಯಗಳು [ಬದಲಾಯಿಸಿ]
೧ ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಪಾಳೆಯಗಾರರಿಂದ ಕಟ್ಟಿಸಲ್ಪಟ್ಟಿದ್ದು, ವಿಶಾಲವಾದ ಕಂಭಗಳು ಹಜಾರಗಳಿಂದ ಕೂಡಿದ್ದು ಒಟ್ಟಿಗೆ ೫೦೦ ಜನ ಭಕ್ತರುಗಳು ಭೋಜನ ಮಾಡಬಹುದು.
೨. ರಾಮದೇವರ ದೇವಾಲಯ.
೩. ಬಂಡಮ್ಮನವರ ದೇವಾಲಯ. ಊರಿನ ಗ್ರಾಮದೇವತೆ. ಪ್ರತಿ ವರ್ಷವೂ ತೇರು, ಅಥವಾ ಸಿಡಿ, ನಡೆಯುತ್ತದೆ.
೪. ಆಂಜನೇಯಸ್ವಾಮಿ ದೇವಾಲಯ. ಕೋಟೆಯ ದ್ವಾರದಲ್ಲೇ ಇದೆ.
೬. ಈಶ್ವರ ದೇವಾಲಯ.
೮. ಜೈನ ಬಸದಿ.
೧೦. ಶ್ರೀ ಕೊಲ್ಲಪುರದಮ್ಮ ಮಹಾಲಕ್ಶ್ಮಿ ದೇವಾಲಯ,ಆಂಜನೇಯಸ್ವಾಮಿ ದೇವಾಲಯ,ಭೊತಪ್ಪ ದೇವರು, ವನೆತವ್ವ ದೇವತೆ, ಉಪ್ಪರಿಗೇನಹಳ್ಳಿ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
೧೧. ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ/ರ೦ಗಸ್ವಾಮಿ ದೇವಾಲಯ, ಹೊರಕೆರೆದೇವಪುರ,ಹೊಳಲ್ಕೆರೆ , ಚಿತ್ರದುರ್ಗ ಜಿಲ್ಲೆ.
೧೨. ತಿಮ್ಮಪ್ಪನ ದೇವಸ್ಥಾನ, ಕೆರೆಯಾಗಲಹಳ್ಳಿ,ಉಪ್ಪರಿಗೇನಹಳ್ಳಿ ವಿಭಾಗ, ರ್ಹೊಳಲ್ಕೆರೆ.
೧೩. ಶ್ರೀ ಕೆ೦ಚಾಮ್ಮ ದೇವಾಲಯ, ಹನುಮನಕಟ್ಟೆ (ಊರಿನ ಗ್ರಾಮದೇವತೆ. ಪ್ರತಿ ವರ್ಷವೂ ತೇರು ಮತ್ತು ಸಿಡೆ ನಡೆಯುತ್ತದೆ), ಹೊಳಲ್ಕೆರೆ , ಚಿತ್ರದುರ್ಗ ಜಿಲ್ಲೆ.
೧೪. ಶ್ರೀ ಪಾಂಡುರಂಗ ರುಕ್ಕುಮಾಯಿ ದೇವಾಲಯ ಹೊಂಡದ ಮುಂಭಾಗದಲ್ಲಿಯೇ ಇದೆ.ಹೊಳಲ್ಕೆರೆ , ಚಿತ್ರದುರ್ಗ ಜಿಲ್ಲೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿ ೪ ಹೋಬಳಿಗಳಿವೆ [ಬದಲಾಯಿಸಿ]
ಆಡನೂರು, ಹೊದಿಗ್ಗೆರೆ, ಚಿಕ್ಜಾಜೂರು, ಹೊಸದುರ್ಗ, ಹತ್ತಿರದ ಪಟ್ಟಣಗಳು. ಹನುಮನಕಟ್ಟೆ, ಮೇಗಳ ಕೊಟ್ಟಿಗೆ, ಕೆಳಗಿನ ಕೊಟ್ಟಿಗೆ, ಕಬ್ಬಲು, ನುಲೇನೂರು, ನಾಗರಕಟ್ಟೆ, ತೂಬಿನಗೆರೆ, ಬೀಸನಹಳ್ಳಿ, ವಡ್ರಹಟ್ಟಿ, ಆರ್. ನುಲೆನೂರು, ಬಸಾಪುರ, ರಂಗಾಪುರ, ತಾಳಕಟ್ಟ ,ತಾಲ್ಲೂಕಿನ ಹಳ್ಳಿಗಳು .
ಹೊಳಲ್ಕೆರೆಯ ಕಾರ್ಯನಿಷ್ಠರು : [ಬದಲಾಯಿಸಿ]
- ಶ್ರೀ. ಸೂರ್ದಾಸ್ ಜಿ, ಯವರು. ಅಂತಹವರಲ್ಲಿ, ಪ್ರಮುಖರು, ಇವರು, ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳುಗಳ ನಿಕಟವರ್ತಿಗಳಾಗಿದ್ದವರು. ಅವರೂ ಮಲ್ಲಾಡಿಹಳ್ಳಿಯಲ್ಲೇ ತಮ್ಮ ಜೀವನದ ಅಂತ್ಯವನ್ನು ಕಂಡವರು. ಅವರ ಸಮಾಧಿ ರಾಘವೇಂದ್ರ ಸ್ವಾಮೀಜಿಯವರ ಸಮಾಧಿಯ ಬದಿಯಲ್ಲೇ ಇದೆ.
- ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಕರ್ನಾಟಕದ ಸುಪ್ರಸಿದ್ಧ ಕವಿಗಳಲ್ಲೊಬ್ಬರು. ಸಮರ್ಥ ಬರಹಗಾರ, ಚಿಂತಕ, ಹಾಗೂ ಒಳ್ಳೆಯ ಮಾತುಗಾರ, ಹೊಳಲ್ಕೆರೆಯ ಎಮ್.ಎಮ್,ಎಮ್,ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸಮಾಡಿದವರು.
- ಶ್ರೀ. ಬಾಬೂರಾವ್ ರವರು ಆಡನೂರಿನಲ್ಲಿ ಸ್ವಂತ ಇಚ್ಛೆಯಿಂದ ಆಶ್ರಮಜೀವನವನ್ನು ನಡೆಸುತ್ತಿದ್ದಾರೆ. ಅವರ ಜೀವನದ ಅನುಭವಗಳನ್ನು ಕುರಿತ, ಒಂದು ಪುಸ್ತಕವನ್ನೂ ಬರೆದಿದ್ದಾರೆ.
- ಪ್ರೊ.ಎಚ್. ಆರ್. ರಾಮಕೃಷ್ಣ ರಾವ್, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಕೆಲಸಮಾಡಿ ನಿವೄತ್ತರಾದ ಖ್ಯಾತ ಭೌತಶಾಸ್ತ್ರದ ಪ್ರಾಧ್ಯಾಪಕ. ವಿಜ್ಞಾನವನ್ನು ಪ್ರಸಿದ್ಧಿಪಡಿಸಲು ನಿರಂತರವಾಗಿ ದುಡಿಯುತ್ತಿರುವ, ನಕ್ಷತ್ರಗಳು, ಗ್ರಹಗಳ ಬಗ್ಗೆ, ಆಕಾಶವಾಣಿ, ದೂರದರ್ಶನ ಗಳ ಮಾಧ್ಯಮದಲ್ಲಿ ಬೋಧಿಸುವುದರಲ್ಲಿ,ತಮ್ಮನ್ನು ತೊಡಗಿಸಿಕೊಂಡಿರುವ, ಕರ್ನಾಟಕದ ಮನೆ-ಮನೆಗಳಲ್ಲಿ ಪ್ರಖ್ಯಾತರಾಗಿರುವ, ಅವರು ಹೊಳಲ್ಕೆರೆಯಲ್ಲಿ ಕಳೆದ, ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ.
- ಡಾ.ಎಚ್.ಆರ್.ಚಂದ್ರಶೇಖರ್, ಅಂತರಾಷ್ಟ್ರೀಯ ವಿಖ್ಯಾತ ಭೌತಶಾಸ್ತ್ರ ವಿಜ್ಞಾನಿ, ಅಮೆರಿಕದ ಮಿಸ್ಸೂರಿ ವಿಶ್ವವಿದ್ಯಾಲಯದ ದ ಗ್ರಾಜುಯೇಟ್ ಸ್ಟಡೀಸ್ ನ ಮುಖ್ಯಸ್ಥರು, ಹಾಗೂ ನಿರ್ದೇಶಕರು, ಹೊಳಲ್ಕೆರೆಯ ಮಣ್ಣಿನಲ್ಲಿ ಹುಟ್ಟಿ, ಆಟವಾಡಿದವರು. ಭಾರತಕ್ಕೆ ಬಂದಾಗಲೆಲ್ಲಾ, ತಮ್ಮ ಪರಿವಾರದ ಒಟ್ಟಿಗೆ, ಹೊಳಲ್ಕೆರೆಗೆ ಬಂದು, ಗಣೇಶನ ದರ್ಶನವನ್ನು ಪಡೆಯುತ್ತಾರೆ. ಇವರ, ಮಕ್ಕಳಿಗಾಗಿಯೇ ಬರೆದು ಪ್ರಕಟಿಸಿರುವ ಪ್ರಖ್ಯಾತ ಪುಸ್ತಕ, " Tales from Indian Epics, " ಎಲ್ಲ ವಯೋ-ವರ್ಗದ ಜನರಿಗೂ ಮುದಕೊಡುವ ಅತ್ಯುಪಯೋಗಿ ಪುಸ್ತಕ ವೆಂದು ಪ್ರಸಿದ್ಧಿಯಾಗಿದೆ. ಆಮೆರಿಕದ ಮಕ್ಕಳು, ಈ ಪುಸ್ತಕವನ್ನು ತುಂಬಾ ಹಚ್ಚಿಕೊಂಡಿದ್ದಾರೆ. ಡಾ. ಚಂದ್ರಶೇಖರ್ ಸಂಪಾದಿಸಿ ಬರೆದ, ಇನ್ನೊಂದು ಬೃಹತ್ ಕೃತಿ, 'ಕರ್ಣಾಟಕ ಭಾಗವತ', ಇತ್ತೀಚೆಗೆ, ಅಮೆರಿಕದ 'ಹೂಸ್ಟನ್ ಕನ್ನಡ ವೃಂದ' ದವರ ಬೆಳ್ಳಿಹಬ್ಬದ ಸಮಾರಂಭದಂದು, ಏಪ್ರಿಲ್, ೧೨ ನೆಯ ತಾರೀಖು, ೨೦೦೮ ರಂದು, ಬಿಡುಗಡೆಯಾಗಿದೆ. ಇದು ಎರಡು ಸಂಪುಟಗಳಲ್ಲಿದ್ದು, ವಿಸ್ತಾರವಾಗಿ ರಚಿಸಲ್ಪಟ್ಟಿದೆ. ಸಂಶೋಧಕರಿಗೆ, ತೀವ್ರವಾಗಿ ಸಾಹಿತ್ಯಾಭ್ಯಾಸಮಾಡುವ ವ್ಯಕ್ತಿಗಳಿಗೆ ಅತ್ಯಂತ ಉಪಯುಕ್ತವಾದ ಮಾಹಿತಿಗಳನ್ನು ಒಳಗೊಂಡಿದ್ದು, 'ಮೂಲ ತಾಳೆಗರಿಗಳ ಮಾಹಿತಿ ಸಂಗ್ರಹ'ವನ್ನು ನಾವು ಕಾಣಬಹುದಾಗಿದೆ. ಪುಸ್ತಕದ ಕೊನೆಯಲ್ಲಿ ಪದಗಳ ಅರ್ಥವನ್ನು ವಿವರವಾಗಿ ಕೊಡಲಾಗಿದೆ.
- ಶ್ರೀ.ವೆಂಕಟಾಚಲಯ್ಯ, ಉಪಾಧ್ಯಾಯರು,ಮತ್ತು ಅವರ ಪರಿವಾರ, ಇದೇ ಕಾರಣಕ್ಕಾಗಿ, ಹೊಳಲ್ಕೆರೆಯನ್ನು ಬಿಟ್ಟುಹೋಗಿದ್ದಾರೆ.
- ಶ್ರೀ. ಸತೀಶ್ ನಾಯಕ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೊಳಲ್ಕೆರೆಯ ಲಂಬಾಣಿ ಹಟ್ಟಿಯಲ್ಲಿ ಮುಗಿಸಿ, ಪ್ರೌಡ ಶಿಕ್ಷಣವನ್ನು 'ಚಿತ್ರದುರ್ಗದ ಏ.ಭೀಮಪ್ಪ ನಾಯಕ ಸಂಯುಕ್ತ ಪ್ರೌಡ ಶಾಲೆ'ಯಲ್ಲಿ ಮುಗಿಸಿದರು. 'ಹೊಳಲ್ಕೆರೆಯ ಬಿ. ಪರಮೇಶ್ವರಪ್ಪ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ'ದಲ್ಲಿ ಅರ್ಥಶಾಸ್ತ್ರ ಪದವಿಯನ್ನು ಪಡೆದ ಇವರು, 'ಕುವೆಂಪು ವಿಶ್ವವಿಧ್ಯಾವಿಲಯ'ದಲ್ಲಿ ಎಂ ಎಸ್ಸಿ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) ಸ್ನಾತಕೋತ್ತರ ಪದವಿಯನ್ನು ಮುಗಿಸಿ. ಬೆಂಗಳೂರಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ 'ಮಾಹಿತಿ ಅಧಿಕಾರಿ'ಯಾಗಿ ಕೆಲಸ ಮಾಡುತಿದ್ದಾರೆ.
- ಡಾ.ಎಚ್. ಆರ್. ಶ್ರೀಪಾದ್ ಈಗ ಮಂಡ್ಯದ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾರೆ.
- [[೧]]
