ಹಾರ್ನಹಳ್ಳಿ ರಾಮಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾ.ರಾ. ಎನ್ನುವ ಹೆಸರಿನಲ್ಲಿ ಅನೇಕ ಹಾಸ್ಯಲೇಖನಗಳನ್ನು ಬರೆದು ಹಾಸ್ಯಸಾಹಿತ್ಯದಲ್ಲಿ ಪ್ರಸಿದ್ಧರಾದ ಹಾರ್ನಹಳ್ಳಿ ರಾಮಸ್ವಾಮಿಯವರು ತಮ್ಮ ದೇಶಸೇವೆಯಿಂದ ಇನ್ನೂ ಹೆಚ್ಚು ಖ್ಯಾತರಾಗಿದ್ದಾರೆ.

ಕೌಟಂಬಿಕ[ಬದಲಾಯಿಸಿ]

ಇವರ ತಾಯಿ ಭವಾನಮ್ಮ; ತಂದೆ ಅನಂತರಾಮಯ್ಯ. ಶೈಶವದಲ್ಲೆ ತಂದೆ, ತಾಯಿಯರನ್ನು ಕಳೆದುಕೊಂಡ ಹಸುಗೂಸನ್ನು ಸಲಹಿದವರು ಗಿರಿಯಮ್ಮ ಹಾಗು ದಾಸಪ್ಪ ದಂಪತಿಗಳು.

ಚಿಕ್ಕಂದಿನಿಂದಲೆ ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿತರಾದ ರಾಮಸ್ವಾಮಿಯವರ ಅತ್ತೆ ಗೌರಮ್ಮ ಹಾಗು ಮಾವ ಸರದಾರ ವೆಂಕಟರಾಮಯ್ಯನವರೂ ಸಹ ಸ್ವಾತಂತ್ರ್ಯ ಹೋರಾಟಗಾರರೇ. ಲಲಿತಾ ಇವರ ಹೆಂಡತಿ.


ರಾಜಕೀಯ[ಬದಲಾಯಿಸಿ]

೧೯೪೨ ರಿಂದ ೧೯೪೭ರವರೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡು,ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್ ಹಾಗು ಏ.ಐ.ಸಿ.ಸಿ. ಗಳಲ್ಲಿ ದುಡಿದರು; ಶಾಸನಸಭಾ ಸದಸ್ಯರಾದರು; ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಯ ಸಚಿವರಾಗಿ ಕರ್ನಾಟಕ ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.


ಸಾಮಾಜಿಕ[ಬದಲಾಯಿಸಿ]

ಹಾರ್ನಹಳ್ಳಿ ರಾಮಸ್ವಾಮಿಯವರು ಮಲ್ನಾಡ ಇಂಜನಿಯರಿಂಗ್ ಕಾಲೇಜು, ಕಾಂತಮ್ಮ ಮಹಿಳಾ ಕಾಲೇಜು ಮೊದಲಾದ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಪ್ರಸಾರಕ್ಕಾಗಿ ಶ್ರಮಿಸಿದ್ದಾರೆ.

ಪ್ರಸ್ತುತ ಲೋಕಶಿಕ್ಷಣ ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ. (ಈ ಟ್ರಸ್ಟ್‍ನಿಂದ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಕರ್ಮವೀರ ವಾರಪತ್ರಿಕೆ ಹಾಗೂ ಕಸ್ತೂರಿ ಮಾಸಿಕಗಳು ಪ್ರಕಟವಾಗುತ್ತಿವೆ.


ಸಾಹಿತ್ಯ[ಬದಲಾಯಿಸಿ]

ಹಾ.ರಾ. ಅನೇಕ ಬಿಡಿ ಹಾಸ್ಯ ಲೇಖನಗಳನ್ನು ಬರೆದಿದ್ದಾರೆ. ತಮ್ಮ ವಕೀಲಿ ವೃತ್ತಿಯಲ್ಲಿ ಕಂಡ ಹಾಸ್ಯಾನುಭವಗಳ ಸಂಕಲನ ‘ಮೈ ಲಾರ್ಡ್’ ಸಹ ಪ್ರಕಟಿಸಿದ್ದಾರೆ.