ಕರ್ಮವೀರ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸಂಯುಕ್ತ ಕರ್ನಾಟಕ ಬಳಗಕ್ಕೆ ಸೇರಿದ ಕರ್ಮವೀರ ವಾರಪತ್ರಿಕೆಯ ಜನನ ೧೯೨೧ರ ಫೆಬ್ರುವರಿ ೧೫ ರಂದು ಧಾರವಾಡದಲ್ಲಾಯಿತು.ದಿವಾಕರ ರಂಗನಾಥರಾಯರು,ಹುಕ್ಕೇರಿಕರರು ಈ ವಾರಪತ್ರಿಕೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ರಾಷ್ಟ್ರಾಭಿಮಾನಿ ಲೇಖನಗಳಿಂದ ಸರ್ಕಾರದ ಕಾಕದೃಷ್ಟಿಗೆ ಗುರಿಯಾದರೂ,೧೯೪೨ ರವರೆಗೆ ಕುಂಟುತ್ತಾ ಪತ್ರಿಕೆ ನಡೆದುಕೊಂಡು ಬಂತು.ನಂತರದಲ್ಲಿ ಡಿ.ವಿ.ಜಿ., ಕಾರ್ನಾಡ ಸದಾಶಿವರಾವ್ ಮೊದಲಾದವರ ಸಹಕಾರ ಹಾಗು ಸಾರ್ವಜನಿಕರ ದೇಣಿಗೆಯ ಸಹಾಯದಿಂದ ಮುಂದುವರೆದು, ಕರ್ನಾಟಕ ಸ್ಥಾಪನೆಯ ಆಂದೋಲನದ ಪ್ರಸಾರಕ್ಕೆ ಬೆಂಬಲ ನೀಡಿತು.

ವೈಯಕ್ತಿಕ ಉಪಕರಣಗಳು