ಸದಸ್ಯ:Preethi 1910366/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈ. ಸುಬ್ರಹ್ಮಣ್ಯ ರಾಜು
Born೩ ಡಿಸೆಂಬರ್‌ ೧೯೦೭
Died24 September 1995(1995-09-24) (aged 87)
ಬೆಂಗಳೂರು, ಕರ್ನಾಟಕ, ಭಾರತ
Nationalityಭಾರತೀಯ
Educationಸರ್‌ ಜೆ. ಜೆ. ಸ್ಕೂಲ್‍ ಆಫ್ ಆರ್ಟ್ಸ್‌
Spouseಶ್ರೀಮತಿ ಶಾರದಮ್ಮ (ವಿವಾಹ 1930)
Awardsರಾಷ್ಟ್ರೀಯ ಪ್ರಶಸ್ತಿ ೧೯೮೭
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೭೨

ವೈ.ಸುಬ್ರಮಣ್ಯ ರಾಜು (೧೯೦೭ - ೧೯೯೫) ಮೈಸೂರು ಶೈಲಿಯ ಸಾಂಪ್ರದಾಯಿಕ ಕಲೆಯನ್ನು ಪೋಷಿಸಿದ ಭಾರತೀಯ ಕಲಾವಿದ. ಅವರು ಮೈಸೂರು ಸಂಸ್ಥಾನದ ಆಸ್ಥಾನ ವರ್ಣಚಿತ್ರಕಾರರ ಕುಟುಂಬದಲ್ಲಿ ಜನಿಸಿದರು. ಮೈಸೂರು ಅರಮನೆಯ ಕಲ್ಯಾಣ ಮಂಟಪದ ಗೋಡೆಗಳನ್ನು ಅಲಂಕರಿಸುವ ಮೈಸೂರು ದಸರಾ ಮೆರವಣಿಗೆಯ ವರ್ಣಚಿತ್ರಗಳು ಅವರ ಕೆಲವು ಸೊಗಸಾದ ಕೃತಿಗಳಾಗಿವೆ. ನಂತರದ ವರ್ಷಗಳಲ್ಲಿ, ರಾಜು ಅವರು ಕರ್ನಾಟಕ ಚಿತ್ರಕಲಾ ಪರಿಷತ್ತಿನೊಂದಿಗೆ ರಾಜ್ಯದ ಲಲಿತಕಲೆ ಮತ್ತು ಕಲಾವಿದರನ್ನು ಉತ್ತೇಜಿಸಲು ತಮ್ಮನ್ನು ತೊಡಗಿಸಿಕೊಂಡರು. ರಾಜು ತಮ್ಮ ಹೆಚ್ಚಿನ ವರ್ಷಗಳನ್ನು ಮೈಸೂರು ಶೈಲಿಯ ಕಲೆಯನ್ನು ಕಲಿಸಲು ಮತ್ತು ಜನಪ್ರಿಯಗೊಳಿಸಲು ಕಳೆದರು, ಇದನ್ನು ಗುರುತಿಸಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಎಮೆರಿಟಸ್ ಫೆಲೋಶಿಪ್ ಅನ್ನು ನೀಡಿತು ಮತ್ತು ಸಾಂಪ್ರದಾಯಿಕ ಮೈಸೂರು ಚಿತ್ರಕಲೆಯಲ್ಲಿ ಅವರ ಶ್ರೇಷ್ಠತೆಗಾಗಿ ಭಾರತ ಸರ್ಕಾರವು ತನ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿತು.

ಆರಂಭಿಕ ಜೀವನ ಮತ್ತು ಕುಟುಂಬ[ಬದಲಾಯಿಸಿ]

ವೈ. ಸುಬ್ರಹ್ಮಣ್ಯ ರಾಜುರವರು ೩ ನೇ ಡಿಸೆಂಬರ್ ೧೯೦೭, ಮೈಸೂರಿನಲ್ಲಿ ಜನಿಸಿದರು. ರಾಜು ಅವರ ಕುಟು೦ಬದವರು ಸೋಮವಂಶ ಆರ್ಯ ಕ್ಷತ್ರಿಯ ಪಂಥಕ್ಕೆ ಸೇರಿದವರು. ಅವರ ಪೂರ್ವಜರು ಮೈಸೂರು ಶೈಲಿಯ ಕಲೆಯ ಪ್ರತಿಪಾದಕರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ, ಅವರ ಪೂರ್ವಜರು ಹಿಂದಿನ ಮೈಸೂರು ರಾಜ್ಯಕ್ಕೆ ವಲಸೆ ಬಂದರು. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ದರಿಯಾ ದೌಲತ್ ಅರಮನೆಯಲ್ಲಿ ವಿಶ್ವಪ್ರಸಿದ್ಧ ಭಿತ್ತಿಚಿತ್ರಗಳನ್ನು ರಚಿಸಿದ ಕೀರ್ತಿ ಇವರ ಕುಟುಂಬಕ್ಕೆ ಸೇರಿದೆ.

ಅಂದಿನಿಂದ ವೈ. ಸುಬ್ರಮಣ್ಯ ರಾಜು ಅವರ ಪೂರ್ವಜರು ಮೈಸೂರು ಅರಮನೆಯ ಸೇವೆಯಲ್ಲಿದ್ದರು. ಈ ಸೇವೆಯನ್ನು ವೈ. ಸುಬ್ರಮಣ್ಯ ರಾಜು ಅವರಿಗಿಂತ ಕನಿಷ್ಠ ಮೂರು ತಲೆಮಾರುಗಳ ಹಿಂದೆ ಗುರುತಿಸಬಹುದು. ಇವರ ಅಜ್ಜ ಸುಂದರಯ್ಯ ಅರಮನೆಯಲ್ಲಿ ಬಣ್ಣ ಬಳಿಯುವವರಾಗಿದ್ದರು ಮತ್ತು ಅವರ ತ೦ದೆ ಯಲ್ಲಪ್ಪ ವಾಸ್ತು ಶಿಲ್ಪಿಯಾಗಿದ್ದರು. ರಾಜು ಅವರ ಸಹೋದರ ವೈ. ನಾಗರಾಜು ಮತ್ತು ಚಿಕ್ಕಪ್ಪ ಶಂಕರ ರಾಜು ಕೂಡ ಅರಮನೆಯಲ್ಲಿ ಕಲಾವಿದರಾಗಿದ್ದರು.

ಅವರು ಸುಮಾರು ಹತ್ತು ವರ್ಷರಾಗಿದ್ದಾಗ ಅವರಿಗೆ ಒ೦ದು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರೆಯಿತು. ಅವರ ತಂದೆ ಸೂಕ್ತ ವಿನ್ಯಾಸವನ್ನು ತಯಾರಿಸಲು ಅರಮನೆಯಲ್ಲಿರುವ ಲಲಿತಕಲೆಗಳ ಹಳೆಯ ಗ್ರಂಥವಾದ ಶ್ರೀ ತತ್ವ ನಿಧಿಯನ್ನು ಉಲ್ಲೇಖಿಸುವಂತೆ ಹೇಳಿದರು. ಈ ಸ್ಪರ್ಧೆ ಅವರಿಗೆ ಅಖಿಲ ಭಾರತ ಪ್ರಶಸ್ತಿಯನ್ನು ತ೦ದಿತು. ಅ೦ದಿನಿ೦ದ ಅವರನ್ನು ಯುವ ಕಲಾವಿದ ಎ೦ದು ಗುರುತಿಸಲಾಯಿತು.[೧]

ವಿದ್ಯಾಭ್ಯಾಸ[ಬದಲಾಯಿಸಿ]

ವೈ. ಸುಬ್ರಮಣ್ಯ ರಾಜು ಅವರು ಮುಮ್ಮಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ರಾಜಾ ಶಾಲೆ ಎಂದು ಕರೆಯಲ್ಪಡುವ ಆಂಗ್ಲೋ ಕನ್ನಡ ಶಾಲೆಗೆ ಪ್ರವೇಶ ಪಡೆದರು. ಅವರು ತಮ್ಮ ಪಾಠಗಳಲ್ಲಿ ನಿಯಮಿತರಾಗಿದ್ದರು, ಆದರೆ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

ರಾಜು ಅವರು ಆಗಾಗ ತನ್ನ ತಂದೆ ಅಥವಾ ಸಹೋದರನೊಂದಿಗೆ ಅರಮನೆಗೆ ಹೋಗುತ್ತಿದ್ದರಿಂದ, ಅವನು ಸರ್ ಚಾರ್ಲ್ಸ್ ಟಾಡ್ಹಂಟರ್ ಅವರ ಗಮನಕ್ಕೆ ಬಂದಿದ್ದನು. ಮಹಾರಾಜರಿಗೆ ಆಶ್ಚರ್ಯಕರ ಕ್ರಿಸ್‍ಮಸ್ ಉಡುಗೊರೆಯನ್ನು ನೀಡುವ ಉದ್ದೇಶದಿಂದ ದೀಪಸ್ತಂಭದ ವಿನ್ಯಾಸವನ್ನು ತಯಾರಿಸಲು ರಾಜುವನ್ನು ಕೇಳಿದನು. ಇದರ ವಿನ್ಯಾಸವು ಪ್ರಸಿದ್ಧ ಮೈಸೂರು ದಸರಾ ಮೆರವಣಿಗೆಯ ಒಂದು ಅನುಕ್ರಮವಾಗಿತ್ತು. ವಿನ್ಯಾಸದಿಂದ ತುಂಬಾ ಪ್ರಭಾವಿತರಾದ ಅವರು, ಉಡುಗೊರೆಯನ್ನು ಮಹಾರಾಜರಿಗೆ ಅರ್ಪಿಸಿದಾಗ, ಅವರು ವಿನ್ಯಾಸದಿಂದ ಸಂತೋಷಪಟ್ಟರು ಮಾತ್ರವಲ್ಲದೆ, ಕಲಾವಿದ ಯಾರು ಎಂದು ವಿಚಾರಿಸಿದರು. ಈ ರೀತಿಯಿ೦ದ ಮುಮ್ಮಡಿ ಕೃಷ್ಣರಾಜ ಒಡೆಯರ ಗಮನಕ್ಕೆ ಬ೦ದರು. ಮಹಾರಾಜರ ಆಸೆಯ೦ತೆ, ರಾಜು ಅವರು ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಸೇರಿದರು. ಅಲ್ಲದೆ ಮಹಾರಾಜರು ಅವರಿಗೆ ತಿಂಗಳಿಗೆ ನಾಲ್ಕು ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಿದರು. ನಂತರ ಅದನ್ನು ಆರು ರೂಪಾಯಿಗೆ ಏರಿಸಲಾಯಿತು.

ಸಿಟಿಐನಲ್ಲಿ, ರಾಜು ದೃಷ್ಟಿಕೋನ, ಸಮತೋಲನ, ಅಂಗರಚನಾಶಾಸ್ತ್ರ ಮತ್ತು ಅನುಪಾತದ ತತ್ವಗಳನ್ನು ಪರಿಚಯಿಸಿದರು. ಕೇಶವಯ್ಯ ಅವರ ಮೇಲ್ವಿಚಾರಣೆಯಲ್ಲಿ, ರಾಜು ಟಂಕಸಾಲೆಯಿಂದ ಭೂದೃಶ್ಯ ಚಿತ್ರಕಲೆ ಮತ್ತು ಯಲವಟ್ಟಿಯಿಂದ ಚಿತ್ರಕಲೆಯ ತಂತ್ರವನ್ನು ಕಲಿತರು. ೧೯೨೬ ರಲ್ಲಿ ಮದ್ರಾಸ್‌ನ ತಾಂತ್ರಿಕ ಸಂಸ್ಥೆಯಿಂದ ಚಿತ್ರಕಲೆ ಮತ್ತು ವಿನ್ಯಾಸದಲ್ಲಿ ಡಿಪ್ಲೊಮವನ್ನು ಪಡೆದರು.

ಪ್ರತಿಷ್ಠಿತ ಜೆ. ಜೆ. ಶಾಲೆಗೆ ಸೇರಿದ ನಂತರ, ರಾಜು ಚಿತ್ರಕಲೆಯಲ್ಲಿ ತನ್ನ ಪ್ರಾಥಮಿಕ ಪರೀಕ್ಷೆಯಲ್ಲಿ ವಿಶಿಷ್ಟವಾಗಿ ಉತ್ತೀರ್ಣರಾದರು. ಒಮ್ಮೆ ರಾಜು ಅವರನ್ನು ಜೆ. ಜೆ. ಸ್ಕೂಲ್ ವಿದ್ಯಾರ್ಥಿಗಳ ಬ್ಯಾಚ್‍ನಲ್ಲಿ ಬರೋಡಾಗೆ ಗಾಯಕ್‍ವಾಡ್ ಅರಮನೆಯ ಛಾವಣಿಯ ಅಲಂಕಾರವನ್ನು ಸಿದ್ಧಪಡಿಸಲು ಮತ್ತು ಕಾರ್ಯಗತಗೊಳಿಸಲು ಕಳುಹಿಸಲಾಯಿತು. ನಂತರ, ಈ ವಿನ್ಯಾಸಗಳನ್ನು ಲಂಡನ್‍ನಲ್ಲಿ ಭಾರತೀಯ ಕಲಾ ನಿಧಿಗಳ ಪ್ರತಿನಿಧಿ ಎಂಬ ಶೀರ್ಷಿಕೆಯಡಿಯಲ್ಲಿ ಪ್ರದರ್ಶಿಸಲಾಯಿತು. ಅವರು ೧೯೩೦ ರಲ್ಲಿ ತಮ್ಮ ಶಿಕ್ಷಣವನ್ನು ಇಲ್ಲಿ ಪೂರ್ಣಗೊಳಿಸಿದರು.[೧]

ಕಲಾ ವೃತ್ತಿ[ಬದಲಾಯಿಸಿ]

೧೯೨೬ ರಲ್ಲಿ ವೈ.ಸುಬ್ರಮಣ್ಯ ರಾಜು ಅವರು ವೇದಾ೦ತ ದೇಶಿಕ ಅವರ ಭಾವಚಿತ್ರವನ್ನು ಮಾಡಲು ಪರಕಲಾ ಮಠದಿಂದ ಒಂದು ನಿಯೋಜನೆಯನ್ನು ಪಡೆದರು. ಈ ನಿಯೋಜನೆಯ ನಂತರ, ರಾಜು ಅವರಿಗೆ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಶಿಕ್ಷಕರಾಗುವ ನೇಮಕಾತಿ ದೊರೆಯಿತು. ಶಾರದ ಅವರ ಜೊತೆ ವಿವಾಹವಾದ ನ೦ತರ ರಾಜು ಅವರಿಗೆ ಮೈಸೂರು ನಗರಕ್ಕೆ ಯೋಜನೆ ಸಿದ್ಧಪಡಿಸುವ ಅವಕಾಶ ದೊರೆಯಿತು. ಈ ಯೋಜನೆಯಿ೦ದಾಗಿ ಅವರಿಗೆ ಬಹಳ ಗೌರವ ದೊರಕಯಿತು. ರಾಜು ಅವರ ಅತ್ಯಂತ ಮೆಚ್ಚುಗೆ ಪಡೆದ ಕೃತಿಗಳು ಮೈಸೂರು ಅರಮನೆಯ ಕಲ್ಯಾಣ ಮಂಟಪದಲ್ಲಿವೆ. ಕಲ್ಯಾಣ ಮಂಟಪದಲ್ಲಿ ಚಿತ್ರಿಸಿದ ೨೮ ಗೋಡೆ ಫಲಕಗಳಲ್ಲಿ ೬ ಗೋಡೆಗಳನ್ನು ರಾಜು ಅವರೇ ಚಿತ್ರಿಸಿದ್ದು. ಕಲ್ಯಾಣ ಮಂಟಪದಲ್ಲಿನ ಎಲ್ಲಾ ೨೮ ವರ್ಣಚಿತ್ರಗಳ ಪ್ರಮುಖ ರೇಖಾಚಿತ್ರಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಇವರ ಪಾಲಾಗಿದೆ.

ಸಂಖ್ಯೆ ೫: III ಮೈಸೂರು ಬೆಟಾಲಿಯನ್.

ಸಂಖ್ಯೆ ೧೦: ಆನೆ ಪಟ್ಟಾಭಿಷೇಕ, ಕುದುರೆ ಮತ್ತು ಪಲ್ಲಕ್ಕಿ.

ಸಂಖ್ಯೆ ೧೮: ರಾಮನು ಚಾಮುಂಡೇಶ್ವರಿ ದೇವಿಯ ಎದುರು ಶಸ್ತ್ರಾಸ್ತ್ರಗಳನ್ನು ಪೂಜಿಸುವ ಚಿತ್ರ.

ಸಂಖ್ಯೆ ೨೪: ನೌಪಾತ್ ಆನೆ.

ಸಂಖ್ಯೆ ೨೫: ರಿಯರ್ಗಾರ್ಡ್ ಕುದುರೆ.

ಸಂಖ್ಯೆ ೨೮: ಆನೆ - ಎಳೆದ ಗಾಡಿ ಮತ್ತು ಆಂಬುಲೆನ್ಸ್.

ದಾಸರ ಉತ್ಸವದ ಸಂದರ್ಭದಲ್ಲಿ, ಆಯುಧ ಪೂಜೆಯ ದಿನ, ಮೈಸೂರು ರಾಜಮನೆತನದ ಮುಖ್ಯಸ್ಥರು ಮೈಸೂರು ಅರಮನೆಯಲ್ಲಿ ರಾಜರ ಶಸ್ತ್ರಾಸ್ತ್ರಗಳನ್ನು ಪೂಜಿಸುತ್ತಾರೆ. ಈ ಕಾರ್ಯಕ್ರಮ ವೈ.ಸುಬ್ರಮಣ್ಯ ರಾಜು ಅವರ ವರ್ಣಚಿತ್ರದ (ಶ್ರೀ ರಾಮನು ಚಾಮುಂಡೇಶ್ವರಿ ದೇವಿಯ ಮುಂದೆ ಶಸ್ತ್ರಾಸ್ತ್ರಗಳನ್ನು ಪೂಜಿಸುವ ಚಿತ್ರ) ಮುಂದೆ ನಡಿಯುತಿತ್ತು. ೧೯೭೦ರಲ್ಲಿ ರಾಜು ಅವರ ವಿದ್ಯಾರ್ಥಿ ಎಂ.ಎಸ್.ನಂಜುಂಡ ರಾವ್ ಮತ್ತು ಸ್ನೆಹಿತ ಎಂ. ಆರ್ಯ ಮೂರ್ತಿ ಚಿತ್ರಕಲ ಪರಿಷತ್ (ಈಗ ಕರ್ನಾಟಕ ಚಿತ್ರಕಲ ಪರಿಷತ್) ಎ೦ಬ ಕಲಾ ಸಂಕೀರ್ಣವನ್ನು ಸ್ಥಾಪಿಸಿದರು.ರಾಜ್ಯದ ಲಲಿತಕಲೆ ಮತ್ತು ಕಲಾವಿದರ ಪ್ರಚಾರಕ್ಕಾಗಿ ಕೆಲಸ ಮಾಡಲು ಅವರೊಂದಿಗೆ ಸೇರಲು ರಾಜು ಅವರನ್ನು ಸಂಪರ್ಕಿಸಿದರು. ಅಲ್ಲಿ ರಾಜು ಅವರು ಅನೇಕ ಕಲಾವಿದರಿಗೆ ಸಾಂಪ್ರದಾಯಿಕ ತಂತ್ರವನ್ನು ಹೇಳಿಕೊಡುತಿದ್ದರು.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

•೧೯೩೧ ರಲ್ಲಿ "ದಸರಾ ಎಕ್ಸಿಬಿಷನ್ ಪೋಸ್ಟರ್" ಗಾಗಿ ಚಿನ್ನದ ಪದಕ

• ೧೯೩೧ ರಲ್ಲಿ "ಲ್ಯಾಂಡ್ಸ್ಕೇಪ್" ವಿಭಾಗದಲ್ಲಿ ಬೆಳ್ಳಿ ಪದಕ

• ೧೯೩೧ ರಲ್ಲಿ"ನೀರಿನ ಬಣ್ಣ" ವಿಭಾಗದಲ್ಲಿ ಬೆಳ್ಳಿ ಪದಕ

• ೧೯೩೧ ರಲ್ಲಿ ಮೈಸೂರು ಫೈನ್ ಆರ್ಟ್ ಸೊಸೈಟಿಯಿಂದ "ಹುಸ್ಕೂರ್ ಚನ್ನಾ ಬಸಪ್ಪ” ಅವರ ಬಹುಮಾನ.

• ೧೯೩೧ ರಲ್ಲಿ ಮದ್ರಾಸ್ ಫೈನ್ ಆರ್ಟ್ ಸೊಸೈಟಿ ಪ್ರಶಸ್ತಿ

• ೧೯೩೨ ರಲ್ಲಿ ಸಿಮ್ಲಾ ಫೈನ್ ಆರ್ಟ್ ಸೊಸೈಟಿ ಪ್ರಶಸ್ತಿ.

• ೧೯೫೩ ರಲ್ಲಿ ಎಣಿಕೆದಾರರಾಗಿ ಜನಗಣತಿಗಾಗಿ ಭಾರತ ಸರ್ಕಾರವು ಬೆಳ್ಳಿ ಪದಕ ನೀಡಿತು.

• ೧೯೬೨ ರಲ್ಲಿ ಮೈಸೂರು ರಾಜ್ಯ ಲಲಿತಕಲಾ ಅಕಾಡೆಮಿ ಬಹುಮಾನ.

• ೧೯೭೧ ರಲ್ಲಿ ಕರ್ನಾಟಕ ಚಿತ್ರಕಲೆ ಗೌರವ ಪ್ರಶಸ್ತಿ.

•೧೯೭೨ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

•೧೯೭೩ ರಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದವರು "ಚಿತ್ರಕಲ ಪ್ರವೀಣ" ಎಂಬ ಬಿರುದನ್ನು ನೀಡಿದರು.

•೧೯೭೭ ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ.

•೧೯೮೫ ರಲ್ಲಿ ಆಲ್ ಇಂಡಿಯಾ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೊಸೈಟಿ ಪ್ರಶಸ್ತಿ.

ಉಲ್ಲೆಖನಗಳು[ಬದಲಾಯಿಸಿ]

<r>https://en.wikipedia.org/wiki/Y._Subramanya_Raju</r>

<r>https://www.deccanherald.com/content/552162/tracing-artistic-journey.html</r>

<r>https://timesofindia.indiatimes.com/city/bengaluru/rare-jain-paintings-to-be-displayed-at-chitrakala-parishath/articleshow/62563139.cms</r>

  1. ೧.೦ ೧.೧ Y. Subramanya Raju. Karnataka: Karnataka Lalithakala Academy. 1987.