ಸದಸ್ಯ:Pradeejeeva/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಸ್ತಕ ಮಾಹಿತಿ[ಬದಲಾಯಿಸಿ]

ನೇಮಿಚಂದ್ರರ ಬದುಕು ಬದಲಿಸಬಹುದು ಪುಸ್ತಕ[ಬದಲಾಯಿಸಿ]

ಮೂರು ಆವೃತ್ತಿಗಳಲ್ಲಿ ಬದುಕು ಬದಲಿಸಬಹುದು ಪುಸ್ತಕ[ಬದಲಾಯಿಸಿ]

ಹಲವು ಮರುಮುದ್ರಣಗಳನ್ನು ಕಂಡಿರುವ ಪುಸ್ತಕ[ಬದಲಾಯಿಸಿ]

ಬದುಕು ಬದಲಿಸಬಹುದು[ಬದಲಾಯಿಸಿ]

ಇದು ಕನ್ನಡದ ಜನಪ್ರಿಯ ಬರಹಗಾರ್ತಿ ನೇಮಿಚಂದ್ರನೇಮಿಚಂದ್ರ,ಕನ್ನಡ ಬರಹಗಾರ್ತಿ ಬರೆದಿರುವ ಪುಸ್ತಕ. ಇದನ್ನು ೨೦೧೫ ರಲ್ಲಿ ನವಕರ್ನಾಟಕ ಪ್ರಕಾಶನ ಮುದ್ರಿಸಿ ಹೊರತಂದಿದೆ. ನೇಮಿಚಂದ್ರ ಉದಯವಾಣಿಉದಯವಾಣಿ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹವೇ ಈ ಪುಸ್ತಕ. 'ಬದುಕು ಭರವಸೆ' ಎಂಬ ಶೀರ್ಷಿಕೆಯಡಿ ಪತ್ರಿಕೆಯಲ್ಲಿ ಬರೆದ ಅಂಕಣಗಳು 'ಬದುಕು ಬದಲಿಸಬಹುದು' ಪುಸ್ತಕ ರೂಪದಲ್ಲಿ ಹೊರಬಂದಿದೆ.

ನೇಮಿಚಂದ್ರ[ಬದಲಾಯಿಸಿ]

ನೇಮಿಚಂದ್ರ ಕನ್ನಡದ ಜನಪ್ರಿಯ ಲೇಖಕಿ, ಹವ್ಯಾಸಿ ಬರಹಗಾರ್ತಿ. ಶಾಲಾ ದಿನಗಳಿಂದಲು ಬರಹದಲ್ಲಿ ಆಸಕ್ತಿ ಮೂಡಿಸಿಕೊಂಡು ಬರೆಯುತ್ತಲೇ ಬಂದಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್. ಪ್ರವೃತ್ತಿಯಿಂದ ಬರಹಗಾರ್ತಿ. ಇವರು 'ಬದುಕು ಬದಲಿಸಬಹುದು ಪುಸ್ತಕ'(ಮೂರು ಆವೃತ್ತಿಗಳು), 'ಪೆರುವಿನ ಪವಿತ್ರ ಕಣಿವೆಯಲ್ಲಿ'ಪೆರು, 'ಯಾದ್ ವಶೇಮ್', 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ'ಮೇರಿ ಕ್ಯೂರಿ, 'ದುಡಿವ ಹಾದಿಯಲಿ ಜೊತೆಯಾಗಿ', 'ನೋವಿಗದ್ದಿದ ಕುಂಚ' ಇವರು ಬರೆದಿರುವ ಪುಸ್ತಕಗಳಾಗಿವೆ.

ಮೂರು ಆವೃತ್ತಿಗಳಲ್ಲಿ ಬದುಕು ಬದಲಿಸಬಹುದು[ಬದಲಾಯಿಸಿ]

ಈ ಪುಸ್ತಕವು ಒಂದೇ ಶೀರ್ಷಿಕೆಯಡಿ ಮೂರು ಆವೃತ್ತಿಗಳಲ್ಲಿ ಪ್ರಕಟಣೆಯಾಗಿದೆ. ಮೊದಲನೆಯದು 'ಬದುಕು ಬದಲಿಸಬಹುದು'[ಅಂಕಣ ಬರಹಗಳ ಸಂಗ್ರಹ], ಎರಡನೆಯದು 'ಸಾವೇ ಬರುವುದಿದ್ದರೆ ನಾಳೆ ಬಾ'[ಅಂಕಣ ಬರಹಗಳ ಸಂಗ್ರಹ], ಮೂರನೆಯದು 'ಸೋಲೆಂಬುದು ಅಲ್ಪವಿರಾಮ'[ಅಂಕಣ ಬರಹಗಳ ಸಂಗ್ರಹ],

ಮರುಮುದ್ರಣಗಳನ್ನು ಕಂಡಿರುವ ಪುಸ್ತಕ[ಬದಲಾಯಿಸಿ]

ಈ ಪುಸ್ತಕವು ಹಲವು ಮರು ಮುದ್ರಣಗಳನ್ನು ಕಂಡಿದೆ. ಮೊದಲು ೨೦೧೫ರಲ್ಲಿ ಪ್ರಕಟಣೆಯಾಯಿತು. ನಂತರದಲ್ಲಿ ೨೦೧೬, ೨೦೧೭ ರಲ್ಲೂ ಹಲವು ಮುದ್ರಣಗಳನ್ನು ಕಂಡಿರುವ ಪುಸ್ತಕ.

ಪಠ್ಯದಲ್ಲೂ ಈ ಲೇಖನಗಳ ಅಳವಡಿಕೆ[ಬದಲಾಯಿಸಿ]

ಬದುಕು ಬದಲಿಸಬಹುದು ಪುಸ್ತಕದಲ್ಲಿರುವ ಕೆಲವು ಲೇಖನಗಳನ್ನು ಶಾಲಾ ಕಾಲೇಜು ಪುಸ್ತಕಗಳ ಪಠ್ಯದಲ್ಲೂ ಸೇರಿಸಲಾಗಿದೆ. ದ್ವಿತೀಯ ಪಿಯುಸಿ ಯ ಕನ್ನಡ ಪಠ್ಯದಲ್ಲೂ ಇವರ 'ಆಯ್ಕೆಯಿದೆ ನಮ್ಮ ಕೈಯ್ಯಲ್ಲಿ' ಲೇಖನವನ್ನು ಸೇರಿಸಲಾಗಿದೆ.