ನನ್ನ ಹೆಸರು ತೀರ್ಥ.ಎಮ್.ಶೆಟ್ಟಿ, ನನ್ನ ತಂದೆ ಮಧುಕರ್ ಶೆಟ್ಟಿ,ನನ್ನ ತಾಯಿ ಜಯಲಕ್ಷ್ಮಿ ಶೆಟ್ಟಿ.ನಾನು ನನ್ನತಂದೆ ತಾಯಿಗೆ ಒಬ್ಬಳೆ ಮಗಳು,ನಾನು ಮೂಲತ ಉಡುಪಿ ಜಿಲ್ಲೆಯವಳು.ನಾನು ಮುಂದೆ ಚೆನ್ನಾಗಿ ಓದಿ ಸರ್ಕಾರಿ ಕೆಲಸಕ್ಕೆ ಸೇರಿಕ್ಕೋಳ್ಳಬೇಕೆಂಬುವುದು ನನ್ನ ಕನಸು,ಈ ಕೆಲಸದಿಂದ ಸಮಾಜ ಸೇವೆಮಾಡಿ ಒಳ್ಳೆಯ ಹೆಸರುಗಳಿಸಬೇಕೆಂಬುವುದು ನನ್ನ ಗುರಿಯಾಗಿರುತ್ತದೆ.
ನನ್ನ ಪ್ರಾಥಮಿಕ ಶಿಕ್ಷಣವನ್ನು ಬಿ.ಎಮ್.ಹೇಚ್.ಶಾಲೆ ಬೆಂಗಳೂರು,ಹಾಗು ನನ್ನ ದ್ವಿತೀಯ ಪಿಯುಸಿಯನ್ನು ಸಂತ ಜೋಸೆಫ್ ಇಂಡಿಯನ್ ಸಮ್ಮಿಶ್ರ ಪ್ರಿ ಯೂನಿವರ್ಸಿಟಿ ಕಾಲೇಜು,ಬೆಂಗಳೂರಿನಲ್ಲಿ ಸಂಪೂರ್ಣಗೊಳಿಸಿ,ಪ್ರಸ್ತುತ ಕ್ರಿಸ್ತ ವಿಶ್ವವಿದ್ಯಾನಿಲಯದಲ್ಲಿ,ಬಿ.ಎಸ್.ಸಿ.ಅಧ್ಯಯನ ಮಾಡುತ್ತಿದ್ದೇನೆ.ನನ್ನ ಪ್ರಾಥಮಿಕ ಶಿಕ್ಷಣದಲ್ಲಿ ನಮ್ಮ ಶಾಲೆಯಲ್ಲಿ ನಡೆದ ನಾಟಕ,ನೃತ್ಯಯ,ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ,ಭಾಗವಹಿಸಿ ಬಹುಮಾನವನ್ನುಸ್ವೀಕರಿಸಿದ್ದೇನೆ.ನನ್ನ ದ್ವಿತೀಯ ಪಿಯುಸಿ ವ್ಯಾಸಂಗದಲ್ಲಿ ರಾಜ್ಯ ಮಟ್ಟದ ಕಬ್ಬಡ್ಡಿಯಲ್ಲಿ ಭಾಗವಹಿಸಿದ್ದೇನೆ.
ವರ್ಷಕ್ಕೊಮ್ಮೆ ಉಡುಪಿಗೆ ತೆರಳಿದಾಗ ಕುಟುಂಬದ ಸದಸ್ಯರೆಲ್ಲ ಸೇರಿ ಪ್ರವಾಸಕ್ಕೆ ಹೋಗುತ್ತೇವೆ.ಈ ಭಾರಿ ನಾವೆಲ್ಲ ಹಂಪಿ,ಜೋಗ ಜಲಪಾತ,ಹಾಗು ಮುಂತಾದ ಪ್ರಮುಖ
ದೇವಾಲಯಗಳಿಗೆ ತೆರಳಿ ಅಲ್ಲಿನ ವಿಶೇಷತೇಗಳನ್ನು ತೀಳಿದಿರುತ್ತೇವೆ.ನಮ್ಮ ಉಡುಪಿಯ ಜಾನಪದ ಕಲೆಗಳಾದ ಯಕ್ಷಗಾನ,ಕಂಬಳ,ಭೂತಕೋಲ,ಮುಂತಾದ ಕಲೆಗಳಿಗೆ ಪ್ರಸಿದ್ದವಾಗಿದೆ.ನಾನು ಕೂಡ ಅದರಲ್ಲಿ ಭಾಗವಹಿಸಿದ್ದೇನೆ.ಬಾಲ್ಯದಲ್ಲಿ ನಾವು ಸ್ನೇಹಿತರು ಸೇರಿ ಕಳೆದ ದಿನಗಳು,ಆಡಿದ ಆಟಗಳು,ಜಗಳ,ಇವುಗಳನ್ನೆಲ್ಲ ನೆನಪಿಸಿಕೊಂಡರೆ ಮನಸ್ಸಿಗೆ ತುಂಬ ಸಂತೋಷವಾಗುತ್ತದೆ.ಇತ್ತೀಚೆಗೆ ನಾವು ಸ್ನೇಹಿತರೆಲ್ಲ ಸೇರಿ ಕೊಡಗಿಗೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಿ,ಅಲ್ಲಿ ಆಟವಾಡಿ ನಮ್ಮ ಬಾಲ್ಯದ ಸವಿನೆನಪುಗಳನ್ನು,ಹಾಗೇಯೆ ನಮ್ಮ ಕಪಿಚೇಷ್ಟೆಗಳನ್ನು ನೆನೆದು ಸಂತೋಷಪಟ್ಟೇವು.
ನನಗೆ ನಮ್ಮ ಊರಾದ ಉಡುಪಿಯ ಆಹಾರ ಪದ್ದತಿಯೆಂದರೆ,ನನಗೆ ಬಹಳ ಇಷ್ಟ ಅದರಲ್ಲಿ ಪ್ರಮುಖವಾಗಿ ಮೀನು ಎಂದರೆ ನನಗೆ ಪಂಚಪ್ರಾಣ,ಇನ್ನೂ ಪ್ರಮುಕವಾದ ತಿನಿಸುಗಳೆಂದರೆ,ನೀರ್ ದೋಸೆ ಪತ್ರೋಡೆ,ಬನ್ಸ್,ಮಂಗಳೂರಬಜ್ಜಿ ಕಡುಬು,ಪುಂಡಿ,ಇವೆಲ್ಲವೂ ನನಗೆ ತುಂಬ ಇಷ್ಟ ಹೀಗಾಗಿ ನಾನು ಊರಿಗೆ ಹೋದಾಗ ಅಜ್ಜಿಯ ಕೈಯಿಂದ ಮಾಡಿಸಿ ತ್ತಿನ್ನುತ್ತೇನೆ.ಅವರ ಕೈ ರುಚಿ ಎಂದರೆ ನನಗೆ ತುಂಬ ಇಷ್ಟ.ನಾನು ಒಬ್ಬಳ್ಳೆ ಮಗಳಾಗಿರುವುದರಿಂದ ನನ್ನನ್ನು ಬಹಳ ಮುದ್ದಿನಿಂದ ಸಾಕಿರುತ್ತಾರೆ.ಹಾಗೆಯೇ ನನ್ನ ಬೇಕು ಬೇಡಗಳನ್ನು ಪ್ರೀತಿಯಿಂದ ನೆರವೇರಿಸುತ್ತಾರೆ.ಹೀಗಾಗಿ ನಾನು ಬಹಳ ಸಂತೊಷವಾಗಿದ್ದೇನೆ ಮುಂದೆ ನಾನು ಕೂಡ ಅವರನ್ನು ಹೀಗೆಯೆ ನೋಡಿಕೋಳ್ಳಬೇಕೇಂಬುದು ನನ್ನ ಆಸೆ.ನನ್ನ ಶಿಕ್ಷಣವನ್ನುಉನ್ನತ್ತಮಟ್ಟದಲ್ಲಿ ಮುಗಿಸಿ,ನನ್ನ ಆಸೆಗಳನ್ನೆಲ್ಲ ನೆರವೇರಿಸಿಕೊಂಡು,ತಂದೆ-ತಾಯಿಯನ್ನು,ಚೆನ್ನಾಗಿ ನೋಡಿಕೊಳ್ಳಬೇಕೆಂಬುವುದೆ ನನ್ನ ಜೀವನದ ಪ್ರಮುಖ ಗುರಿ.