ವಿದ್ಯಾಶಂಕರ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿದ್ಯಾಶಂಕರ ದೇವಾಲಯವು ತುಮಕೂರು ಜಿಲ್ಲೆ ತುಮಕೂರು ತಾಲೂಕಿನಲ್ಲಿ ಇದೆ. ಇದು ತುಮಕೂರು ನಗರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಲ್ಲಿ ಪುರಾತನವಾದ ವಿದ್ಯಾಶಂಕರ ದೇವಾಲಯವಿದೆ. ತುಮಕೂರಿನಿಂದ ದೇವರಾಯನದುರ್ಗ ಮಾರ್ಗದಲ್ಲಿ ಚಲಿಸಿದರೆ ನಾಮದ ಚಿಲುಮೆಯಿಂದ ಮುಂದಕ್ಕೆ ೧ ಕಿ.ಮೀ ಚಲಿಸಿದ ಮೇಲೆ ಎಡಕ್ಕೆ ತಿರುಗಿ ೧ ಕಿ.ಮೀ ಹೋದರೆ ವಿದ್ಯಾಶಂಕರ ದೇವಾಲಯವನ್ನು ತಲುಪಬಹುದು. ದೇವರಾಯನದುರ್ಗಕಾದಿಟ್ಟ ಅರಣ್ಯದ ಸೆರಗಿನಲ್ಲಿ ಇದ್ದು, ಸುತ್ತ ಮುತ್ತ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಇತ್ತೀಚೆನವರೆಗೂ ಪಾಳು ಬಿದ್ದಿದ್ದ ಈ ದೇವಾಲಯವನ್ನು ಬೆಂಗಳೂರಿನ ಪ್ರಖ್ಯಾತ ಸಾರ್ವಜನಿಕ ಸಂಸ್ಥೆಯೊಂದು ಜೀರ್ಣೋದ್ದಾರ ಮಾಡಿದೆ. ದೇವರಾಯನದುರ್ಗ ಬೆಟ್ಟದಿಂದ ಕೂಡ ಈ ದೇವಾಲಯದ ನೋಟ ಲಬ್ಯವಿದೆ.

ಸುತ್ತ ಮುತ್ತ ಇರುವ ಇತರ ಪ್ರಮುಖ ಸ್ಥಳಗಳೆಂದರೆ ದೇವರಾಯನದುರ್ಗ, ನಾಮದ ಚಿಲುಮೆ, ಜಿಂಕೆ ವನ, ಸಿದ್ದಗಂಗೆ ಮಠ, ಮಂದರಗಿರಿ. ಗೊರವನಹಳ್ಳಿ ಲಕ್ಷ್ಮಿ ದೇವಾಲಯವು ಇಲ್ಲಿಂದ ಬಹಳವೇನು ದೂರವಿಲ್ಲ.