ಲೋಕನಾಥ್ ಬಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೋಕನಾಥ್ ಬಾಲ್

ಕಲ್ಕತ್ತಾ ಕಾರ್ಪೊರೇಷನ್‌ನ ಎರಡನೇ ಉಪ ಆಯುಕ್ತ
ಅಧಿಕಾರ ಅವಧಿ
೧ ಮೇ ೧೯೫೨ ರಿಂದ ೧೯ ಜುಲೈ ೧೯೬೨
ಪೂರ್ವಾಧಿಕಾರಿ ಪ್ರಾಣಕೃಷ್ಣ ಬಾಲ್
ವೈಯಕ್ತಿಕ ಮಾಹಿತಿ
ಜನನ (೧೯೦೮-೦೩-೦೮)೮ ಮಾರ್ಚ್ ೧೯೦೮
ಚಿತ್ತಗಾಂಗ್, ಪೂರ್ವ ಬಂಗಾಳ ಮತ್ತು ಅಸ್ಸಾಂ, ಬ್ರಿಟಿಷ್ ಭಾರತ (ಈಗ ಚಿತ್ತಗಾಂಗ್), ಬಾಂಗ್ಲಾದೇಶ)
ಮರಣ 4 September 1964(1964-09-04) (aged 56)
ಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಲೋಕನಾಥ್ ಬಾಲ್ (೮ ಮಾರ್ಚ್ ೧೯೦೮ - ೪ ಸೆಪ್ಟೆಂಬರ್ ೧೯೬೪) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ . ಇವರು ಸೂರ್ಯ ಸೈನ ನೇತೃತ್ವದ ಸಶಸ್ತ್ರ ಪ್ರತಿರೋಧ ಚಳುವಳಿಯ ಸದಸ್ಯರಾಗಿದ್ದರು. ಇದು ೧೯೩೦ ರಲ್ಲಿ ಚಿತ್ತಗಾಂಗ್ ಶಸ್ತ್ರಾಸ್ತ್ರ ದಾಳಿಯನ್ನು ನಡೆಸಿತು ನಂತರ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಭಾರತದ ಸ್ವಾತಂತ್ರ್ಯದ ನಂತರ, ಅವರು ತಮ್ಮ ಮರಣದವರೆಗೂ ಕಲ್ಕತ್ತಾ ಕಾರ್ಪೊರೇಶನ್‌ನಲ್ಲಿ ಆಡಳಿತ ಅಧಿಕಾರಿಯಾಗಿ ಕೆಲಸ ಮಾಡಿದರು. [೧]

ಆರಂಭಿಕ ಜೀವನ ಮತ್ತು ಸ್ವಾತಂತ್ರ್ಯ ಚಳುವಳಿ[ಬದಲಾಯಿಸಿ]

ಲೋಕನಾಥ್ ಬಾಲ್ ಅವರು ಬ್ರಿಟಿಷ್ ಭಾರತದ ಬಂಗಾಳ ಪ್ರಾಂತ್ಯದ ಚಿತ್ತಗಾಂಗ್ ಜಿಲ್ಲೆಯ ಧೋರ್ಲಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಪ್ರಾಣಕೃಷ್ಣ ಬಾಲ್. ೧೮ ಏಪ್ರಿಲ್ ೧೯೩೦ ರಂದು, ಅವರ ನೇತೃತ್ವದ ಕ್ರಾಂತಿಕಾರಿಗಳ ಗುಂಪು ಎ‌ಎಫ್‌ಐ ನ ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಂಡಿತು. ನಂತರ, ೨೨ ಏಪ್ರಿಲ್ ೧೯೩೦ ರಂದು, ಅವರು ಬ್ರಿಟಿಷ್ ಸೈನ್ಯ ಮತ್ತು ಬ್ರಿಟಿಷ್ ಪೊಲೀಸರನ್ನು ಒಳಗೊಂಡಿರುವ ಸಂಯೋಜಿತ ಪಡೆಗಳೊಂದಿಗೆ ಮತ್ತೊಂದು ಗುಂಡಿನ ಚಕಮಕಿಯನ್ನು ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಅವರ ಕಿರಿಯ ಸಹೋದರ ಹರಿಗೋಪಾಲ್ ಬಾಲ್ (ಟೆಗ್ರಾ) ಮತ್ತು ಇತರ ೧೧ ಕ್ರಾಂತಿಕಾರಿಗಳು ಸತ್ತರು. ಅವರು ತಪ್ಪಿಸಿಕೊಂಡು, ಫ್ರೆಂಚ್ ಪ್ರದೇಶವಾದ ಚಂದರ್‌ನಾಗೂರ್ ಅನ್ನು ತಲುಪಿದರು. ೧೯೩೦ ರ ಸೆಪ್ಟೆಂಬರ್ ೧ ರಂದು ಬ್ರಿಟಿಷ್ ಪೋಲೀಸರೊಂದಿಗಿನ ಗುಂಡಿನ ಚಕಮಕಿಯ ನಂತರ ಅವರನ್ನು ಮತ್ತು ಗಣೇಶ್ ಘೋಷ್ ಅವರನ್ನು ಬಂಧಿಸಲಾಯಿತು. ಈ ಗುಂಡಿನ ಚಕಮಕಿಯಲ್ಲಿ ಜಿಬನ್ ಘೋಷಾಲ್ ಅಲಿಯಾಸ್ ಮಖಾನ್ ಎಂಬಾತನ ಯುವ ಸಹಚರ ಸಾವನ್ನಪ್ಪಿದ್ದಾನೆ. ಮಾರ್ಚ್ ೧, ೧೯೩೨ ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ಸೆಲ್ಯುಲಾರ್ ಜೈಲಿಗೆ ಕಳುಹಿಸಲಾಯಿತು. ೧೯೪೬ ರಲ್ಲಿ ಬಿಡುಗಡೆಯಾದ ನಂತರ, ಅವರು ಮನಬೇಂದ್ರ ನಾಥ್ ರಾಯ್ ಸ್ಥಾಪಿಸಿದ ರಾಡಿಕಲ್ ಡೆಮಾಕ್ರಟಿಕ್ ಪಕ್ಷವನ್ನು ಸೇರಿದರು. ನಂತರ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. [೧]

ಸ್ವಾತಂತ್ರ್ಯದ ನಂತರ[ಬದಲಾಯಿಸಿ]

ಬಾಲ್ ಅವರು ೧ ಮೇ ೧೯೫೨ ರಿಂದ ೧೯ ಜುಲೈ ೧೯೬೨ ರವರೆಗೆ ಕಲ್ಕತ್ತಾ ಕಾರ್ಪೊರೇಶನ್‌ನ ಎರಡನೇ ಉಪ ಆಯುಕ್ತರಾಗಿದ್ದರು. ಅವರು ೨೦ ಜುಲೈ ೧೯೬೨ ರಂದು ಅದರ ಮೊದಲ ಡೆಪ್ಯುಟಿ ಕಮಿಷನರ್ ಆಗಿ ಬಡ್ತಿ ಪಡೆದರು ಮತ್ತು ೪ ಸೆಪ್ಟೆಂಬರ್ ೧೯೬೪ ರಂದು ಕಲ್ಕತ್ತಾದಲ್ಲಿ ಅವರ ಮರಣದವರೆಗೂ ಕಚೇರಿಯಲ್ಲಿ ಇದ್ದರು. ಅವರ ಮಗ ಡಾ. ಹಿಮಾದ್ರಿ ಬಾಲ್ ಕೋಲ್ಕತ್ತಾದಿಂದ ಎಮ್.ಬಿ.ಬಿ.ಎಸ್ ಪದವಿ ಪಡೆದು ಭಾರತೀಯ ಸೇನೆಗೆ ಸೇರಿದರು. ಅವರು ಭಾರತೀಯ ಸಶಸ್ತ್ರ ಪಡೆಗಳ ಹೆಸರಾಂತ ಸ್ತ್ರೀರೋಗತಜ್ಞರಾದರು ಮತ್ತು ಪುಣೆಯ ಪ್ರತಿಷ್ಠಿತ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ಸೇರಿದಂತೆ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ ಹಲವಾರು ಬೋಧನಾ ಆಸ್ಪತ್ರೆಗಳಿಗೆ ನಿಯೋಜಿಸಲ್ಪಟ್ಟರು. ಅವರು ೨೦೧೫ ರಲ್ಲಿ ಸೇನೆಯಲ್ಲಿ ಕರ್ನಲ್ ಆಗಿ ನಿವೃತ್ತರಾದರು ಮತ್ತು ಪುಣೆಯ ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿ ಬೋಧಿಸುತ್ತಿದ್ದಾರೆ.


ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Sengupta, Subodh Chandra (ed.) (1988) Sansad Bangali Charitabhidhan (in Bengali), Kolkata: Sahitya Sansad, p.503