ಭಟ್ಟಾಕಳಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಟ್ಟಾಕಳಂಕನ ಸಂಗೀತ ಪುರ  ಹಾಡವಳ್ಳಿ

ಲೇಖನ- ಉಮೇಶ ಮುಂಡಳ್ಳಿ ಭಟ್ಕಳ

   

ಭಟ್ಕಳ ತಾಲೂಕು ಮೆಲ್ನೋಟಕ್ಕೆ ಕಾಂಕ್ರೀಟ್ ಕಾಡು ಅಂತ ಅನ್ನಿಸಿದ್ದರೂ ಐತಿಹಾಸಿಕ ಹಿನ್ನೆಲೆಯಲ್ಲಿ ನೋಡಿದಾಗ ಅನೇಕ ಸ್ಮರಣೀಯ ಸ್ಮಾರಕಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿರುವಂತದ್ದನ್ನು ನಾವು ಕಾಣಬಹುದಾಗಿದೆ. ಮೂಡಭಟ್ಕಳದ ಕೇತಪ್ಪಯ್ಯ ನಾರಾಯಣ ದೇವಾಲಯ, ಭಟ್ಕಳದ ಹೃದಯ ಭಾಗದಲ್ಲಿರುವ ಮೋಹಿನಿ ಬಸದಿ, ಸೋನಾರಕೇರಿಯಲ್ಲಿನ ವಿರುಪಾಕ್ಷ ದೇವಾಲಯ, ಚೋಳೇಶ್ವರ ದೇವಾಲಯ ಹೀಗೆ ಹತ್ತು ಹಲವು ಇಂತಹ ಅನೇಕ ಸ್ಮಾರಕಗಳ ನಡುವೆ ಅತ್ಯಂತ ಗಮನಸೆಳೆಯುವಂತದ್ದು ಹಾಡವಳ್ಳಿಯ ಸ್ಮಾರಕಗಳು.ಹಾಡವಳ್ಳಿ ಎಂಬ ಪ್ರದೇಶ ಆ ಕಾಲದಲ್ಲಿ ಸಂಗೀತ, ಸಾಹಿತ್ಯ ನೃತ್ಯ ಶಿಲ್ಪಕಲೆಗಳ ಭದ್ರ ನೆಲೆಯಾದಂತದ್ದು. ಅಲ್ಲದೇ ‘ಸಂಗೀತಪುರ’ ಎಂಬ ಹೆಸರನ್ನು ಪಡೆದ ಐತಿಹಾಸಿಕ ಸ್ಥಳ. ಹಾಗೂ ಜೈನರ ಪ್ರಮುಖ ಕೇಂದ್ರವೂ ಹೌದು.  

ಹಾಡವಳ್ಳಿಯನ್ನು ಹಿಂದೆ ಸಾಳ್ವರು ತಮ್ಮ ಎರಡನೇ  ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು ಎಂದು ಹೇಳಲಾಗುತ್ತದೆ.  ಇಲ್ಲಿ ಗತಕಾಲದ ಕುರುಹುಗಳಾಗಿ 24 ತೀರ್ಥಂಕರರಿರುವ ಜೈನ ಬಸದಿ ಆಕರ್ಷಣೆಯಾಗಿ ಉಳಿದುಕೊಂಡಿರುವುದನ್ನು ಇಂದಿಗೂ ಕಾಣಬಹುದು. ಈ ಮೂರ್ತಿಗಳು ಕಾಲವನ್ನೂ ಲೆಕ್ಕಿಸದೇ ನಿರ್ಲಿಪ್ತವಾಗಿ, ಧ್ಯಾನಾಸಕ್ತವಾಗಿ ಕುಳಿತಿರುವಂತೆ ಭಾಸವಾಗುತ್ತವೆ. ಸುಮಾರು 500 ವರ್ಷಗಳ ಹಿಂದೆ ಹಾಡವಳ್ಳಿ ಇದೊಂದು ಪ್ರತಿಷ್ಠಿತ ನಗರವಾಗಿತ್ತೆಂದು. ಕನ್ನಡ ಪ್ರಥಮ ವಯ್ಯಾಕರಣಿ ಖ್ಯಾತಿಯನ್ನು ಗಳಿಸಿದ್ದ ಜೈನಮುನಿ ಭಟ್ಟಾಕಳಂಕ ಇಲ್ಲಿ ವಾಸವಾಗಿದ್ದ ಎನ್ನುವುದಕ್ಕೆ ಇತಿಹಾಸದಲ್ಲಿ ಉಲ್ಲೇಖಗಳು ಕಾಣಸಿಗುತ್ತದೆ.

ಈತನ ಶಬ್ಧಾನುಶಾಸನ ಕೇಶಿರಾಜನ ಶಬ್ದಮಣಿದರ್ಪಣ ಕ್ಕೂ ಮೂಲ ಎನ್ನುವುದಕ್ಕೆ ಅನೇಕ ಸಾಕ್ಷಿಗಳು ದೊರೆತಿವೆ ಹಾಗೂ ಕೇಶಿರಾಜನ ಶಬ್ದಮಣಿದರ್ಪಣ ದಲ್ಲಿ ಇದರ ಉಲ್ಲೇಖ ವನ್ನು ಕಾಣಬಹುದು. ಅಂಕನಕಟ್ಟೆಯಲ್ಲಿ ರಾಣಿಯ ಅರಮನೆಯೂ ಇದ್ದೀತು  ಎಂಬ ಪ್ರತೀತಿ ಕೂಡ ಇದೆ.

ಹಾಡವಳ್ಳಿಯ ಮದ್ಯಭಾಗದಲ್ಲಿ ಎರಡು ಗುಡ್ಡಗಳಿದ್ದು ಚಂದ್ರಗಿರಿ ಮತ್ತು ಇಂದ್ರಗಿರಿ ಎಂದು ಕರೆಯಲಾಗುತ್ತದೆ. ಇವೆರಡೂ ಈ ಹಿಂದೆ ಪ್ರಮುಖ ಜೈನ ಕೇಂದ್ರಗಳಾಗಿದ್ದವು. ಇಂದ್ರಗಿರಿಯಲ್ಲಿ ಜಿನಾದ ಎರಡು ಹೆಜ್ಜೆಗುರುತುಗಳನ್ನು ಹೊತ್ತ ಕಲ್ಲುಗಳನ್ನು ಕಾಣಬಹುದಾದರೆ,ಚಂದ್ರಗಿರಿಯ ಮೇಲೆ ದೇವಾಲಯಕ್ಕಿಂತ ಭಿನ್ನವಾದ ಅತ್ಯಂತ ಆಕರ್ಷಕವಾದ ಚಂದ್ರನಾಥ ಬಸದಿಯನ್ನು ನೋಡಬಹುದಾಗಿದೆ. ವಿಜಯನಗರ ಸಾಮ್ರಾಜ್ಯದ ಶೈಲಿಯನ್ನೇ ಹೋಲುವ ಚಂದ್ರನಾಥ ಬಸದಿಯನ್ನು 24 ಸ್ತಂಭಗಳು ಬೆಂಬಲಿಸುತ್ತವೆ, ಒಳಗೆ ಸುಂದರವಾದ ಕೆತ್ತನೆಗಳನ್ನು ಹೊಂದಿರುವ ಬಾಗಿಲುಗಳು ಮತ್ತು ಸ್ತಂಭಗಳಿವೆ.ಬೆಟ್ಟದ ನೆತ್ತಿಯ ಭಾಗದಲ್ಲಿರುವ ಈ ಬಸದಿ ಈಗ ಪಾಳು ಬಿದ್ದಿದ್ದು ಸಹಸ್ರಾರು ಬಾವಲಿಗಳ ವಾಸಸ್ಥಾನವಾಗಿ ಮಾತ್ರ ಉಳಿದಂತಿದೆ. ಔನತ್ಯದ ವಾಸ್ತುಶಿಲ್ಪವೊಂದು ಎಕಾಂಗಿಯಾಗಿ  ತನ್ನ ಗತವೈಬವ ನೆನೆದು ಕಣ್ಣಿರಿಡುವಂತೆ ಭಾಸವಾಗುತ್ತದೆ. ಸಾಹಸಿಯಾಗಿ ಮೆರೆದು ಆಳಿದಂತ ಮಹಾರಾಣಿ ಚೆನ್ನಬೈರಾದೇವಿಯ ವಿಗ್ರಹ ಹಾಗೂ ಶಾಸನಗಳು ಪುನರುತ್ಥಾನಕ್ಕಾಗಿ ಕಾಯುತ್ತಿದೆ. ಈ ಬೆಟ್ಟದ ಮೇಲಿನಿಂದ ಸುತ್ತಲೂ ಕಣ್ಣಾಡಿಸಿದರೆ ಎತ್ತಲು ಹಸಿರು ಅಡಿಕೆ ತೆಂಗು ಬೆಟ್ಟ ಕಣ್ಣಿಗೆ ಮುದನೀಡುವುದರ ಜೊತೆಗೆ ಮನಸ್ಸಿಗೂ ಆನಂದ ನೀಡುತ್ತದೆ.

ಇಂದು ಈ ಚಂದ್ರಗಿರಿ, ಇಂದ್ರಗಿರಿಯ ಬೆಟ್ಟಗಳ ಸೌಂದರ್ಯ ಪ್ರಕೃತಿ ಸವಿಯುವವರಿಗೆ  ಪ್ರಮುಖ ಆಕರ್ಷಣೆ. ಚಾರಣಿಗರಿಗಂತೂ ಸ್ವರ್ಗ ಸುಖ.ಒಂದು ನಂಬುಗೆಯ ಪ್ರಕಾರ ಚಂದ್ರಗಿರಿಯ ಮೇಲೆ ಕುಳಿತು ಹಾಡುತ್ತಿದ್ದ ತತ್ವಪದಗಳ ಮೇಲೆ ಇಂದ್ರಗಿರಿಯಲ್ಲಿ ಕುಳಿತ ವಿದ್ವಾಂಸರು ವ್ಯಾಖ್ಯಾನ ಮಾಡುತ್ತಿದ್ದರು ಎಂದೂ ಸಹ ಹೇಳಲಾಗುತ್ತದೆ. ಇದಕ್ಕೆಲ್ಲ ಗುಮ್ಮಟದಂತಹ ವಿಶೇಷ ಧ್ವನಿ ವ್ಯವಸ್ಥೆಯನ್ನು ಬೆಟ್ಟದ ಮೇಲೆ ನಿರ್ಮಿಸಿರುವುದು ಕಾರಣವಿರಬಹುದು ಎಂದು ಹೇಳಲಾಗುತ್ತದೆ.

ಬೆಟ್ಟದ ಕೆಳಭಾಗದಲ್ಲಿ ಅನತಿ ದೂರದಲ್ಲಿ

ಶ್ರೀ  ಪದ್ಮಾವತಿ ಅಮ್ಮನವರ ದೇವಾಲಯವಿದೆ.ಇಲ್ಲಿನ ಗ್ರಾಮದೇವತೆ ಪದ್ಮಾವತಿ ಅಮ್ಮನವರ  ನವೀಕರಿಸಿದ ದೇವಸ್ಥಾನದಲ್ಲಿ ಐತಿಹಾಸಿಕ 24 ತೀರ್ಥಂಕರ ಪ್ರತಿಮೆಗಳನ್ನು ಪ್ರದರ್ಶಿಸಲಾಗಿದೆ. ಈ ಪ್ರತಿಮೆಗಳನ್ನು ಉತ್ತಮವಾದ ಕಪ್ಪು ಹೊಳಪು ಕಲ್ಲಿನಲ್ಲಿ ಕೆತ್ತಲಾಗಿದೆ, ಪ್ರತಿಯೊಂದೂ ಅರ್ಧ ಮೀಟರಿನಷ್ಟು ಎತ್ತರವಿದೆ. ತೀರ್ಥಂಕರರ ಪ್ರತಿಮೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಇಲ್ಲಿನ ಜೈನಕೇರಿ ಎಂಬಲ್ಲಿ ಕಾಳುಮೆಣಸಿನ ಸಂಗ್ರಹಣೆಗಾಗಿ 900 ಬಾವಿಗಳನ್ನು ರಾಣಿ  ಚೆನ್ನಭೈರಾದೇವಿ ತನ್ನ ಆಳ್ವಿಕೆಯಲ್ಲಿ ನಿರ್ಮಿಸಿದ್ದಳು ಎಂಬುದಕ್ಕೆ ಆಧಾರಗಳು ಇವೆ. ಇಂದಿಗೂ ಕೆಲವು ಬಾವಿಗಳನ್ನು ನಾವು  ಕಾಣಬಹುದಾಗಿದೆ. ಅವು ಕುರುಹುಗಳಾಗಿ ಪರಿವರ್ತನೆಗೊಂಡಿವೆ.

ಇವೆಲ್ಲವುಗಳ ನಡುವೆ ಈ ಹಳ್ಳಿಯನ್ನು ಭೇಟಿ ಮಾಡಿದಾಗ ಗತಕಾಲದ ಇತಿಹಾಸದ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಸಾಗುತ್ತವೆ. ಇಂದು ಇದೊಂದು‌  ಸಾಮಾನ್ಯ ಹಳ್ಳಿಯಾಗಿ ಇದ್ದರೂ ಸಹ ಅನೇಕ ಇತಿಹಾಸದ ಅಧ್ಯಯನಕಾರರು ಚಾರಣಪ್ರಿಯರು ಜೈನ ಧರ್ಮದ ಬಗ್ಗೆ ಶೃದ್ದೆಯುಳ್ಳವರು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ.

ಭಟ್ಕಳ- ಸಾಗರ ರಸ್ತೆಯಲ್ಲಿ ಭಟ್ಕಳದಿಂದ ಸುಮಾರು 16ಕಿ.ಮೀ. ದೂರದಲ್ಲಿದೆ ಈ ಹಾಡುವಳ್ಳಿ. ಮುರುಡೇಶ್ವರ ದೇವಾಲಯದಿಂದ ರಸ್ತೆ ಮಾರ್ಗವಾಗಿ ೩೦ ಕಿ.ಮೀ.ಮಾತ್ರ. ಹಾಗಿದ್ದ ಮೇಲೆ ಸಂಗೀತ ಸಾಂಸ್ಕೃತಿಕ ಐತಿಹಾಸಿಕ ನೆಲೆಯಾದ ಈ ಹಾಡವಳ್ಳಿಗೆ ತಾವೂ ಒಮ್ಮೆ ಭೇಟಿ ನೀಡಬಹುದಲ್ಲವೇ.

ಲೇಖನ – ಉಮೇಶ ಮುಂಡಳ್ಳಿ ಭಟ್ಕಳ

ಸಾಹಿತಿಗಳು, ಬರಹಗಾರರು

9945840552


ೀವಿಸಿದ್ದನು. ಈತನು ದಕ್ಷಿಣ ಕನ್ನಡ ಜಿಲ್ಲೆಯ ಅಕಳಂಕದೇವನ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ಮಹಾವಿದ್ವಾಂಸನಾದ ಈತನು ೮ ಭಾಷೆಗಳಲ್ಲಿ ಪಂಡಿತನು. “ಕರ್ಣಾಟಕ ಶಬ್ದಾನುಶಾಸನ” ಇದು ಈತ ರಚಿಸಿದ ವ್ಯಾಕರಣ ಗ್ರಂಥ. ಇದರಲ್ಲಿ ೫೬೨ ಸೂತ್ರಗಳಿವೆ. ಇದು ಕೇಶಿರಾಜನ “ಶಬ್ದಮಣಿ ದರ್ಪಣ”ದ ನಂತರ ರಚಿತವಾದ ಪ್ರಮಾಣ ಗ್ರಂಥ. ಈತನು ಭಟ್ಕಳದ ಹಾಡವಳ್ಳಿಯನ್ನು ತನ್ನ ಕೆಂದ್ರ ಸ್ಥಾನವನ್ನ್ನಾಗಿಸಿಕೊಂಡಿದ್ದನು.