ಕೆ.ಎಸ್.ನಾರಾಯಣಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ಎಸ್.ನಾರಾಯಣಸ್ವಾಮಿ ಇವರು ೧೯೨೯ ಮಾರ್ಚ ೨ರಂದು ಅರಸೀಕೆರೆಯಲ್ಲಿ ಜನಿಸಿದರು. ಇವರ ತಾಯಿ ಶಂಕರಮ್ಮ; ತಂದೆ ಸೀತಾರಾಮಯ್ಯ.


ಪತ್ರಿಕೋದ್ಯಮ[ಬದಲಾಯಿಸಿ]

ಹಂಗರಿಯ ಬುಡಾಪೆಸ್ಟ ನಗರದಲ್ಲಿ ಪತ್ರಿಕೋದ್ಯಮದಲ್ಲಿ ವಿಶೇಷ ತರಬೇತಿ ಪಡೆದು ಬಂದ ಇವರು ೧೯೬೭ರ ವರೆಗೆ ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸಿದರು. ಆನಂತರ ಕನ್ನಡ ಪ್ರಭ ಪತ್ರಿಕೆಯಲ್ಲಿ ಸೇರಿದರು. ಅಲ್ಲದೆ ‘ನಾಂದಿ’, ‘ಸಾಹಿತ್ಯವಾಹಿನಿ’ ಚಲನಚಿತ್ರ ಪತ್ರಿಕೆಗಳ ಸಂಪಾದಕ ಮಂಡಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ.


ಸಾಹಿತ್ಯ[ಬದಲಾಯಿಸಿ]

  • ಕರುಣಾಳು ಬಾ ಬೆಳಕೆ (ಕಾದಂಬರಿ)
  • ನಾಗೇಶರಾಯರು (ಜೀವನ ಚರಿತ್ರೆ)
  • ಮಂಜು ಹೂವಿನ ಮದುವಣಿಗ (ಹಂಗೇರಿಯನ್ ಕಥೆಗಳ ಅನುವಾದ)


ಇತರ[ಬದಲಾಯಿಸಿ]

  • ಇವರು ನಿರ್ಮಿಸಿದ ನಾಂದಿ ಚಲನಚಿತ್ರಕ್ಕೆ ಕರ್ನಾಟಕ ಸರಕಾರದ ಪ್ರಶಸ್ತಿ ಲಭಿಸಿದೆ.
  • ಇವರು ‘ಕರ್ನಾಟಕ ಚಲನಚಿತ್ರ ಪತ್ರಕಾರರ ಪರಿಷತ್’ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು.
  • ಇವರು ‘ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟಿನಲ್ಲಿ ಉಪನ್ಯಾಸಕರಾಗಿದ್ದರು.
  • ಇವರು ಕರ್ನಾಟಕ ಡಾಕ್ಯುಮೆಂಟರಿ ಅವಾರ್ಡ ಕಮಿಟಿಯಲ್ಲಿ ಜ್ಯೂರಿ ಆಗಿದ್ದರು.