ಪ್ರಜಾವಾಣಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪ್ರಜಾವಾಣಿ (ದಿನಪತ್ರಿಕೆ)
ಪ್ರಕಟಣೆ: ಬೆಂಗಳೂರು
ಈಗಿನ ಸಂಪಾದಕರು: ಕೆ.ಎನ್.ತಿಲಕ್ ಕುಮಾರ್
ಇವನ್ನೂ ನೋಡಿ Category:ಕನ್ನಡ ಪತ್ರಿಕೆಗಳು


ಪ್ರಜಾವಾಣಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದು. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. '[[ಪದ ಸಂಪದ]', 'ಚಿನಕುರಳಿ' ಮುಂತಾದ ಜನಪ್ರಿಯ ಕಾಲಂ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ,ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರ್ರಾಷ್ತ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.

= ಇತಿಹಾಸ== ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ "ಡೆಕ್ಕನ್ ಹೆರಾಲ್ಡ್"ನೊಂದಿಗೆ ಪ್ರಾರಂಭವಾಗಿ ಬೇಗನೆ ಜನಪ್ರಿಯವಾಯಿತು.೧೯೪೮ರಲ್ಲಿ ಶ್ರೀ ಕೆ.ಎನ್. ಗುರುಸ್ವಾಮಿಯವರ ದಿ ಪ್ರಿಂಟರ್ಸ್ ಲಿ. ಇದನ್ನು ಪ್ರಾರಂಭಿಸಿತು.

ಪ್ರಜಾವಾಣಿ ಬರುವ ಅಕ್ಟೋಬರ್ ೧೦ಕ್ಕೆ ೬೦ ವಸಂತಗಳನ್ನು ತುಂಬಿದ ಪ್ರಬುದ್ಧ ಪತ್ರಿಕೆಯಾಗುತ್ತದೆ. ಸಂಪಾದಕರು ಕೆ.ಎನ್. ತಿಲಕ್ ಕುಮಾರ್.

[ಬದಲಾಯಿಸಿ] ಸಂಪಾದಕರು

ಪ್ರಜಾವಾಣಿಯ ಪ್ರಥಮ ಸಂಪಾದಕರು ಬಿ.ಪುಟ್ಟಸ್ವಾಮಯ್ಯನವರು.ನಂತರ ಖಾದ್ರಿ ಶಾಮಣ್ಣ,ಟಿ.ಎಸ್.ರಾಮಚಂದ್ರರಾವ್ ಸಂಪಾದಕರಾಗಿದ್ದರು.೧೯೪೮ ರ ಅಕ್ಫೋಬರ್ ೧೦ ರಂದು ಪ್ರಜಾವಾಣಿ ಆರಂಭವಾಯಿತು. ಇದುವರೆಗೆ ಆಗಿರುವ ಸಂಪಾದಕರು: ವೈಎನ್.ಕೃಷ್ಣಮುರ್ತಿ, ಎಂ.ಬಿ.ಸಿಂಗ್, ಕೆ.ಎನ್. ಹರಿಕುಮಾರ್, ಕೆ.ಎನ್. ಶಾಂತ ಕುಮಾರ್, ಕೆ.ಎನ್.ತಿಲಕ್ ಕುಮಾರ್. ಸಹ ಸಂಪಾದಕರು: ಪಿ.ರಾಮಣ್ಣ, ಬಿ.ಎಂ.ಕೃಷ್ಣಮೊರ್ತಿ, ಜಿ.ಎನ್.ರಂಗನಾಥ ರಾವ್, ಶ್ರೀಧರ ಆಚಾರ್, ಶೈಲೇಶ್ಚಂದ್ರ ಗುಪ್ತ, ಆರ್. ಪಿ. ಜಗದೀಶ. ಪದ್ಮರಾಜ ದಂಡಾವತಿ. ಸಹಾಯಕ ಸಂಪಾದಕರು: ಗೋಪಾಲ ಕಣ್ಣನ್, ಶ್ರೀಧರ ಕೃಷ್ಣಮುರ್ತಿ, ಜಿ.ಎಸ್. ಸದಾಶಿವ, ಡಿ.ವಿ. ರಾಜಶೇಖರ, ಲಕ್ಷ್ಮಣ ಕೊಡಸೆ, ಶಿವಾಜಿ ಗಣೇಷನ್, ಇ.ವಿ.ಸತ್ಯನಾರಾಯಣ ಮೊದಲಾದವರು. ಸಾಪ್ತಾಹಿಕ ಪುರವಣಿ ಉಸ್ತುವಾರಿ: ಬಿ.ವಿ.ವೈಕುಂಠರಾಜು, ಜಿ.ಎನ್.ರಂಗನಾಥ ರಾವ್, ಡಿ.ವಿ. ರಾಜಶೇಖರ, ಗಂಗಾಧರ ಮೊದಲಿಯಾರ್, ಪಿ.ಕೆ.ಹರಿಯಬ್ಬೆ, ಲಕ್ಷ್ಮಣ ಕೊಡಸೆ (ಹಾಲಿ ಸಂಪಾದಕರು)

ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ.

[ಬದಲಾಯಿಸಿ] ಹೊರಗಿನ ಸಂಪರ್ಕಗಳು

ಪ್ರಜಾವಾಣಿ ಪತ್ರಿಕೆ ಈಗ ಹೆಚ್ಚು ಜನಪ್ರಿಯ ಆಗುತ್ತಿದೆ. ನಿತ್ಯವೂ ಹೊಸ ಪುರವಣಿಗಳು. ಪ್ರತಿ ಪುರವಣಿಯೂ ವಿಷಯ ಆಧಾರಿತ.ಹೊಸ ಲೇಖಕರು, ಹಳೆಯ ಲೇಖಕರು ಪತ್ರಿಕೆಗೆ ಬರೆಯುತ್ತಾರೆ. ಬರೆಯಲು ಅವರಿಗೆ ಖುಶಿ. ಇಲ್ಲಿ ಬರೆದರೆ ಸಿಗುವ ಮನ್ನಣೆ ಬೇರೆ ಕಡೆ ಬರೆದರೆ ಸಿಗದು ಎಂಬ ಅಭಿಪ್ರಾಯವಿದೆ. ಅದರಲ್ಲಿಯೂ ದೀಪಾವಳಿ ಸಂಚಿಕೆಯ ಕಥೆ,ಕವನ,ಲೇಖನ ಬರೆಯಲು ಅವಕಾಶ ಲೇಖಕರಿಗೆ ಹೆಮ್ಮೆಯ ಸಂಗತಿ. ಈಚಿನ ಸಂಚಿಕೆಗಳು ಬಲು ಜನಪ್ರಿಯ.

ವೈಯಕ್ತಿಕ ಉಪಕರಣಗಳು