ಎಚ್.ಸುಂದರ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಡ್ಲುಕುಡಿಕೆಯಲ್ಲಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕೊಪ್ಪ, ಉಡುಪಿಯಲ್ಲಿ ಪೂರೈಸಿದರು.ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ, ೧೯೭೫ ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದರು.

ಲೇಖನ[ಬದಲಾಯಿಸಿ]

"ಶಬ್ದಮಾಲಿನ್ಯ- ಪರಿಹಾರ ಹೇಗೆ ? " :ಇದು ಇವರ ಒಂದು ವಿಶಿಷ್ಟ ಪರಿಸರವಾದಿ ಲೇಖನ.ಪರಿಸರ ಮಾಲಿನ್ಯಕ್ಕೆ ಪರಿಹಾರವನ್ನು ಸೂಚಿಸುವುದು ಇದರ ತಿರುಳು. ಗಾಳಿ,ನೀರು,ಬೆಳಕು ಹಾಗೂ ಶಬ್ದ ಮಾಲಿನ್ಯಗಳಿಂದ ಇಂದು ಪರಿಸರ ಹೇಗೆ ಮಲಿನಗೊಂಡಿದೆ? ಅದರಿಂದಾಗುವ ದುಷ್ಪರಿಣಾಮಗಳೇನು? ಅವುಗಳ ಪರಿಹಾರವೇನು? ಎಂಬುದನ್ನು ಈ ಲೇಖನ ತಿಳಿಸುತ್ತದೆ. ಹೀಗಾಗಿ ಇದು ಪರಿಸರದ ಬಗೆಗೆ ಕಾಳಜಿಯನ್ನಿಟ್ಟುಕೊಡಿರುವ ಲೇಖನ.

ಭಾಷೆಯ ಬಗ್ಗೆ[ಬದಲಾಯಿಸಿ]

ಎಚ್.ಸುಂದರ ರಾವ್‍ರ ಭಾಷೆ ಸರಳ ಮತ್ತು ಭಾವಪೂರ್ಣ. ಅವರ ಭಾಷೆ ಹೇಳಬೇಕಾದುದನ್ನು ಸರಳವಾಗಿ ಮನಕ್ಕೆ ಮುಟ್ಟುವಂತೆ ಹೇಳುತ್ತದೆ.

ವ್ರತ್ತಿ[ಬದಲಾಯಿಸಿ]

೨೦೦೯ರ ವರೆಗೆ ಬಿ.ಸಿ.ರೋಡ್‍ನಲ್ಲಿ 'ನೇರ ಮುದ್ರಣಾಲಯ'ವನ್ನು ನಡೆಸಿದ ರಾವ್ ಅವರು ಡಾ.ರವೀಂದ್ರನಾಥ ಶಾನುಭೋಗರಿಂದಿಗೆ ಬಳಕೆದಾರರ ಚಳವಳಿಯ ಕಾರ್ಯಕರ್ತರಾಗಿದ್ದರು.