ಹೊಸನಗರ
ವಿಕಿಪೀಡಿಯ ಇಂದ
ಇದು ಶಿವಮೊಗ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ತಾಲೂಕಿನಲ್ಲಿನ ನಗರ ಎಂಬ ಊರಿನಲ್ಲಿ ಶಿವಪ್ಪನಾಯಕನು ತನ್ನ ಆಳ್ವಿಕೆಯ ರಾಜಧಾನಿಯನ್ನಾಗಿ ಮಾಡಿಕೊಂಡ್ಡಿದ್ದನೆಂದು ವಾಡಿಕೆ ಆ ಕಾಲದಲ್ಲಿ ಈ ಊರನ್ನು ಬಿದನೂರು ಎಂದು ಕರೆಯುಥಿದ್ದರು. ಹುಂಚ:
ಹುಂಚ, ಇದು ಜೈನರ ತೀರ್ಥ ಕ್ಷೇತ್ರ.ಇದು ಶಿವಮೊಗ್ಗ ನಗರದಿಂದ ೫೪ (54) ಕಿ.ಮಿ. ದೂರದಲ್ಲಿದೆ ಮತ್ತು ತೀರ್ಥಹಳ್ಳಿಯಿಂದ ೨೫ (25)ಕಿ.ಮಿ. ದೂರದಲ್ಲಿದೆ. 10 ಮತ್ತು 11ನೇ ಶತಮಾನದ ಪಂಚಕೂಟ ಬಸದಿ (ಜೈನ ದೇವಾಲಯ), ಪದ್ಮಾವತಿ ದೇವಾಲಯ, ಜೈನ ಮಠ, ನೋಡುವಂತವು.
ಪ್ರಸಿದ್ಧ ಕೊಡಚಾದ್ರಿ ಬೆಟ್ಟ, ಅರಿಶಿನಗುಂಡಿ ಜಲಪಾತ, ಶಿವಪ್ಪನಾಯಕನ ಕೋಟೆ(ನಗರ), ಹಿಡ್ಲುಮನೆ ಜಲಪಾತ, ಕಾರಣಗಿರಿ ದೇವಸ್ಥಾನ , ಚಕ್ರ,ಮಾನಿ,ವರಾಹಿ ಡ್ಯಾಮ್೦ ಈ ತಾಲೂಕಿನ ಮುಖ್ಯ ಪ್ರೇಕ್ಶಣೀಯ ಸ್ಥಳಗಳು. ಹೊಸನಗರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ(ಹುಲಿಕಲ್).
ಜೆಟ್ಟಿಮನೆ,ಬೆಳ್ಳಕ್ಕ,ಅಂಬ್ಲಾಡಿ ಪ್ರದೇಶಗಳು ಯಾವಾಗಲು ತಂಪಾಗಿರುವ ಪ್ರದೇಶಗಳು.
ಇದರ ಬಹುತೇಕ ಭಾಗ ಶರಾವತಿ ಹಿನ್ನಿರಿನಲ್ಲಿ ಮುಳುಗಡೆಯಾಗಿದೆ.