ಸೂರ್ಯನಾರಾಯಣ ಚಡಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂರ್ಯನಾರಾಯಣ ಚಡಗ(ಜನನ:೧೩.೦೪.೧೯೩೨-ನಿಧನ:೧೪.೧೧.೨೦೦೬) ಇವರು ೧೯೩೨ ಎಪ್ರಿಲ ೧೩ರಂದು ಉಡುಪಿ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಶೇಷಮ್ಮ; ತಂದೆ ನಾರಾಯಣ.೧೯೫೪ರಲ್ಲಿ ತಮ್ಮ ಪ್ರಥಮ ಕಾದಂಬರಿ ರತ್ನ ಪಡೆದ ಭಾಗ್ಯದೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಪ್ರವೇಶಿಸಿದರು.೨೦೦೧ರವರೆಗೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಇವರ ಕೊನೆಯ ಕೃತಿ ನಾಟ್ಯರಶ್ಮಿ.ಕನ್ನಡದಲ್ಲಿ ನಾಟಕಗಳು,ಸಣ್ಣಕತೆಗಳಲ್ಲದೆ ೩೦ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.[೧].ಇವರ ಕೆಲವು ಕೃತಿಗಳು ಇಂತಿವೆ:

ಕಥಾ ಸಂಕಲನ[ಬದಲಾಯಿಸಿ]

  • ಜರತಾರಿ ಕುಪ್ಪಸ
  • ನಮ್ಮೂರಿನ ಕತೆಗಳು

ಕಾದಂಬರಿ[ಬದಲಾಯಿಸಿ]

  • ಅಮರ ಸರಸ್ವತಿ
  • ಅರಿಶಿನ ಕುಂಕುಮ
  • ಗಂಗಾ ಭವಾನಿ
  • ಬತ್ತದ ಕಣ್ಣೀರು
  • ಮಧುರ ಮೈತ್ರಿ
  • ಮನೆ ತುಂಬಿದ ಮಡದಿ
  • ಮನೆ ನಿನ್ನದು ಮನ ನನ್ನದು[೨]
  • ಮನೆಗೆ ಬಂದ ಸೊಸೆ
  • ಮನೆತನ
  • ಮಾಂಗಲ್ಯ ದೇವರು
  • ಸೀಮಂತಿನಿ
  • ಸ್ವರ್ಗದ ಬಾಗಿಲು
  • ಹೆಣ್ಣು, ಹೊನ್ನು,ಮಣ್ಣು

ಸಂಪಾದನೆ[ಬದಲಾಯಿಸಿ]

  • ಜಯದೇವಿ ತಾಯಿ
  • ದಕ್ಷಿಣ ಕನ್ನಡದ ಬರಹಗಾರರು
  • ನಗೆ ನಂದನ

ಹಾಸ್ಯ ಪ್ರಬಂಧಗಳ ಸಂಕಲನ[ಬದಲಾಯಿಸಿ]

  • ಸುಹಾಸ

ಪ್ರಶಸ್ತಿಗಳು[ಬದಲಾಯಿಸಿ]

ಇವರ ಹೆಣ್ಣು-ಹೊನ್ನು-ಮಣ್ಣು ಹಾಗೂ ಮನೆತನ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಉಲ್ಲೇಖಗಳು[ಬದಲಾಯಿಸಿ]