ಸಿದ್ದಾಂತ ಶಿಖಾಮಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿದ್ದಾಂತ ಶಿಖಾಮಣಿಯು 13 - 14ನೇ ಶತಮಾನದ ಸಂಸ್ಕೃತ ಭಾಷೆಯ ಕಾಲ್ಪನಿಕ ಕಥೆಯ ಪುಸ್ತಕವಾಗಿದೆ, ಇದನ್ನು ಶ್ರೀ ಶಿವಯೋಗಿ ಶಿವಾಚಾರ್ಯರು ರಚಿಸಿದರು ಎಂದು ಹೇಳಲಾಗುತ್ತದೆ. ಪಂಚಾಚಾರ್ಯರ ಪ್ರಕಾರ ಇದು ವೀರಶೈವರ ಮತ ಗ್ರಂಥವಾಗಿದೆ. ಈ ಕೃತಿಯು ಜಗದ್ಗುರು ರೇಣುಕ ಮತ್ತು ಅಗಸ್ತ್ಯ ಮಹರ್ಷಿಗಳ ಸಂವಾದದ ರೂಪದಲ್ಲಿದೆ. ಈ ಕೃತಿಯನ್ನು ರೇಣುಕಾಗಸ್ತ್ಯ ಸಂವಾದ ಮತ್ತು ವೀರಶಿವ ಮಹಾತಂತ್ರ ಎಂದು ಸಹ ಕರೆಯಲಾಗುತ್ತದೆ. [೧][೨].

ಸಿದ್ದಾಂತ ಶಿಖಾಮಣಿ
ಲೇಖಕರುಶ್ರೀ ಶಿವಯೋಗಿ ಶಿವಾಚಾರ್ಯರು
ಭಾಷೆಸಂಸ್ಕೃತ
ಪ್ರಕಾರಕಾಲ್ಪನಿಕ ದಂತ ಕಥೆ
ಪ್ರಕಟವಾದದ್ದು13-14ನೇ ಶತಮಾನ

ಹಿನ್ನಲೆ[ಬದಲಾಯಿಸಿ]

ಶ್ರೀ ಸಿದಾಂತ ಶಿಖಾಮಣಿ ಯಲ್ಲಿ ಪ್ರತಿಪಾದಿತವಾದ ಏಕೋತ್ತರಶತಸ್ಥಲಾತ್ಮಕವಾದ ಈ ಸಿದ್ದಾಂತವು ಮೊಟ್ಟಮೊದಲು ಶಿವನು ಪಾರ್ವತಿಗೆ ಮತ್ತು ತನ್ನ ಶಿವಗಣರಿಗೆ ಉಪದೇಶಿಸಿದ್ದನು. ಶಿವನಿಂದ ಉಪದೇಶ ಪಡೆದ ಶಿವ ಪ್ರಮುಖರಾದ ರೇಣುಕ, ದಾರುಕ, ಘಂಟಾಕರ್ಣ, ಧೇನುಕರ್ಣ, ಮತ್ತು ವಿಶ್ವಕರ್ಣ ರೆಂಬ ಗಣೇಶ್ವರರು ಭೂಲೋಕದಲ್ಲಿ ಕ್ರಮಾವಾಗಿ ಅಗಸ್ತ್ಯ, ದಧೀಚಿ, ವ್ಯಾಸ, ಸಾನಂದ, ಮತ್ತು ದೂರ್ವಾಸ ರೆಂಬ ಮಹರ್ಷಿಗಳಿಗೆ ಶಿವಾದ್ವೈತ ಸಿದ್ದಾಂತವನ್ನು ಉಪದೇಶಿಸಿರುತ್ತಾರೆ. ಈ ಶಿವಗಣರಲ್ಲೊಬ್ಬರಾದ ಶ್ರೀ ರೇಣುಕಗಣೇಶ್ವರನು ಅಗಸ್ತ್ಯ ಮಹರ್ಷಿಗೆ ಉಪದೇಶಿಸಿದ ಶಿವಾದ್ವೈತ ಸಿದ್ದಂತವನ್ನೇ ಶ್ರೀ ಶಿವಯೋಗಿ ಶಿವಾಚಾರ್ಯರು ಈ ಸಿದ್ದಾಂತ ಶಿಖಾಮಣಿಯಲ್ಲಿ ರೇಣುಕಾಗಸ್ತ್ಯರ ಸಂವಾದ ರೂಪದಲ್ಲಿ ವಿವರಿಸಿದ್ದಾರೆ.

ಈ ಕೃತಿಯನ್ನು ಮೊಟ್ಟಮೊದಲಿಗೆ ಶ್ರೀ ಶಿವಯೋಗಿ ಶಿವಾಚಾರ್ಯರು ಸಂಪಾದಿಸಿಕೊಟ್ಟಿದ್ದಾರೆ. ಶ್ರೀ ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಭೋದಿಸಿದ ಸಾರವನ್ನು ಈ ಸಿದ್ದಾಂತಶಿಖಾಮಣಿ ಒಳಗೊಂಡಿದೆ. ಇದು "ರೇಣುಕಾಗಸ್ತ್ಯ ಸಂವಾದ" ರೂಪವಾಗಿದೆ.

ಸಾರ:[ಬದಲಾಯಿಸಿ]

ಈ ಗ್ರಂಥದ ಸಾರ ಶಿವಜೀವರ ಐಕ್ಯ. ವೀರಶೈವ ಸಿದ್ದಾಂತದ ಷಟ್ ಸ್ಥಲ ಗಳನ್ನು ನೂರೊಂದು ಸ್ಥಲಗಳಲ್ಲಿ ವಿಭಾಗಿಸಿ ವಿವರಿಸಲಾಗಿದೆ. ಈ ನೂರೊಂದು ಸ್ಥಲಗಳು ಸಾಧಕನ ಮನಸ್ಸಿನ ವಿಕಾಸದ ಉನ್ನತೋನ್ನತ ಸೋಪಾನಗಳಾಗಿವೆ. ಸಕಲ ಶಿವಾಗಮಗಳ ಸಾರವನ್ನೇ ಈ ಪುಸ್ತಕ ಓಳಗೊಂಡಿದೆ. ಈ ಗ್ರಂಥದಲ್ಲಿನ ಸಿದ್ದಾಂತದವು ದ್ವೈತಾದ್ವೈತಗಳ ಸಮನ್ವಯಾತ್ಮಕವಾದುದು. ಮೂಲತ ಸಂಸ್ಕೃತ ಭಾಷೆಯಲ್ಲಿರುವ ಈ ಪುಸ್ತಕವನ್ನು ಶ್ರೀ ೧೦೦೮ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕನ್ನಡಿಗರಿಗೂ ಲಭ್ಯವಾಗಿಸಿದ್ದಾರೆ. ಈ ಪುಸ್ತಕ ರೇಣುಕ ಗೀತೆ ಅಂತಲೂ, ರೇಣುಕಾಗಸ್ತ್ಯ ಸಂವಾದ ಗ್ರಂಥವೆಂದೂ ಕರೆಯಲ್ಪಡುತ್ತದೆ.

ವಿಮರ್ಶೆ[ಬದಲಾಯಿಸಿ]

"ಸಿದ್ಧಾಂತ ಶಿಖಾಮಣಿಯ ಮೂಲ ಮತ್ತು ವಿಷಯಗಳು ನಿಗೂಢವಾಗಿವೆ, 1998 ರಲ್ಲಿ ಪ್ರಸಿದ್ಧ ಇತಿಹಾಸಕಾರ, ಬರಹಗಾರ ಎಂ. ಚಿದಾನಂದ ಮೂರ್ತಿಯವರು ಸಿದ್ಧಾಂತ ಶಿಖಾಮಣಿಯನ್ನು 13 ಅಥವಾ 14 ನೇ ಶತಮಾನದಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ.ಮತ್ತು ಅದು ಖಂಡಿತವಾಗಿಯೂ ಬಸವಣ್ಣನವರಾಗಲಿ ಅಥವಾ ಅವರ ಶರಣ ಚಳವಳಿಗಾಗಲಿ ಹಿಂದಿನದಲ್ಲ ಎಂದು ಹೇಳಿದ್ದರು, ಆದರೆ ಮರುವರ್ಷವೇ, ಕಾಶಿ ಪೀಠದ ಮುಖ್ಯಸ್ಥರಾದ ಚಂದ್ರಶೇಖರ ಸ್ವಾಮಿಗಳು (ಐದು ಮಠಗಳಲ್ಲಿ ಒಬ್ಬರು) ತಮ್ಮದೆಯಾದ ಕಟ್ಟು ಕಥೆಯನ್ನು ಹೆಣೆದು, ಅದರಲ್ಲಿ ಅವರು ಸಿದ್ಧಾಂತ ಶಿಖಾಮಣಿ ರಾಮಾಯಣಕ್ಕಿಂತ ಹಳೆಯದು ಎಂದು ಹೇಳಿದ್ದರು, ಇನ್ನೂ ವಿಸ್ಮಯಕಾರಿಯಾಗಿ, ಸಿದ್ಧಾಂತ ಶಿಖಾಮಣಿಯ ಕರ್ತೃವಾದ ಶಿವಯೋಗಿ ಶಿವಾಚಾರ್ಯರು ತಮ್ಮ ಪುಸ್ತಕದಲ್ಲಿ, ಐದು ಪಂಚಾಚಾರ್ಯರ ಹಿಂದಿನವರು ಕೃತಯುಗ, ತೇತ್ರಯುಗ ಮತ್ತು ದ್ವಾಪರಯುಗದಲ್ಲಿ ಧರ್ಮ ಪ್ರಚಾರಕರಾಗಿದ್ದರು ಎಂದು ಹೇಳುತ್ತಾರೆ; ಅವರು ರಾಮಾಯಣದ ವಿಭೀಷಣನಿಗೆ ಸಲಹೆ ನೀಡಿದ್ದರು; ಅವರು ಅಗಸ್ತ್ಯ ಋಷಿಗೆ ಶಿವನ ಮಹಿಮೆಗಳನ್ನು ವಿವರಿಸಿದ್ದಾರೆ ಎಂದು; ಅವರು ಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರ ಲಿಂಗವನ್ನು ಕೊಟ್ಟಿದ್ದಾರೆಂದು; ಇನ್ನೂ ಮುಂತಾದ ಸುಳ್ಳಿನ ಕಥೆ ಮುಂದುವರಿಯುತ್ತದೆ, ಆದರೆ ತಮಾಷೆಯೆಂದರೆ, ಯಾವುದೇ ವೇದ, ಆಗಮ, ಉಪನಿಷತ್ತು, ಬ್ರಾಹ್ಮಣಕ, ಅರಣ್ಯಕ ಅಥವಾ ಶಂಕರಾಚಾರ್ಯ ಅಥವಾ ರಾಮಾಯಣಕ್ಕೆ ಸಂಬಂಧಿಸಿದ ಯಾವುದೇ ಪಠ್ಯವು ಈ ಯಾವುದೇ ಪಂಚಾಚಾರ್ಯರು ಅಥವಾ ಅವರ ಅದ್ಭುತ ಚಟುವಟಿಕೆಗಳನ್ನು ಉಲ್ಲೇಖಿಸಿಲ್ಲ. ಇದೆ ಪಂಚಾಚಾರ್ಯರುಗಳೆ ವೀರಶೈವರು ಮತ್ತು ಲಿಂಗಾಯತರು ಒಂದೇ ಎಂದು , ವೀರಶೈವ ಲಿಂಗಾಯತದ ಸಂಸ್ಥಾಪರು ಪಂಚಾಚಾರ್ಯರು , ಬಸವಣ್ಣನವರು ಅಲ್ಲ ಎಂದು ವಾದಿಸುತ್ತಾರೆ, ಆದರೆ ಪಂಚಾಚಾರ್ಯರು ಬಸವಣ್ಣನವರ ನಂತರ ಬಂದವರು ಎಂಬುದು ಬಹಳ ಸ್ಪಷ್ಟವಾಗಿದೆ, ಅವರು ತಮ್ಮ ಹಿಂದಿನವರ ಬಗ್ಗೆ ಕಾಲ್ಪನಿಕ ಕಥೆಗಳನ್ನು ಹೆಣೆದಿದ್ದಾರೆ; ಮತ್ತು ಅವರು ಕಟ್ಟಿದ ಕಥೆಯನ್ನು ನಿಜ ಎಂದು ಸಾಧಿಸಲು ಕಾಲ್ಪನಿಕ ಪಠ್ಯಗಳನ್ನು ರಚಿಸಿದ್ದಾರೆ ಆ ಕಟ್ಟುಕಥೆಯ ಪುಸ್ತಕವೇ ಸಿದ್ಧಾಂತ ಶಿಖಾಮಣಿಯಾಗಿದೆ". [೩]

ಉಲ್ಲೇಖ[ಬದಲಾಯಿಸಿ]

  1. Chandrashekhara Shivacharya (2017). Shri Siddhanta Shikhaamani Paraamarshe. Managuli, Vijapura: Sha. Bra. Sri Dr. Mahantalinga Shivacharya Swamigalavara Pattaadhikara Rajata Mahotsava Samiti.
  2. https://m.thewire.in/article/history/karnataka-lingayat-veerashaive-debate
  3. https://m.thewire.in/article/history/karnataka-lingayat-veerashaive-debate