ಸದಸ್ಯ:Likhithgowda248/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  ನನ್ನ ಜೀವನ[ಬದಲಾಯಿಸಿ]

ನನ್ನ ಹೆಸರು ಲಿಖಿತ್ ಗೌಡ

ನನಗೆ ಈಗ ೧೮ ವರುಷ ನಾನು ಉಟ್ಟಿದ್ದು ಬೆಳ್ಳೇದಿದ್ದು ಚಿಕ್ಕಮಗಳೂರಿನಲ್ಲಿ ನನ್ನ ತಂದೆಯ ಹೆಸರು ಪ್ರದೀಪ್ ಆಗು ಅಮ್ಮನ ಹೆಸರು ಸುಮಿತ್ರ . ಆದರೆ ಈಗ ನನ್ನ ಜೀವನದಲ್ಲಿ ಮೊದಲ ಬಾರಿಗೆ ಚಿಕ್ಕ್ಮಗಳೂರಿಂದ ಹೊರಗೆ ಬಂದು ಬೆಂಗಳೂರಿನಲ್ಲಿ ನನ್ನ ವಿದ್ಯಾಭ್ಯಾಸ ಮಾಡುತಿರುವೆ .

ನನ್ನ ವಿದ್ಯಾಭ್ಯಾಸದ ಬಗ್ಗೆ ಮಾತನಾಡುವುದಾದರೆ ೧೦ನೆ ತರಗತಿ ವರಗೆ ನಾನು ಚಿಕ್ಕ್ಕಮಗಳೂರಿನ  ಸಂತ ಜೋಸೆಫರ ಶಾಲೆಯಲ್ಲಿ ಮುಗಿಸಿದೆ ನಾನು ವಿದ್ಯಾಭ್ಯಾಸದಲ್ಲಿ ಆಸಕ್ತಿ ಒಂದಿದವನಾದರಿಂದ ನನಗೆ ೧೦ನೆ ತರಗತಿಯಲ್ಲಿ

ಸುಮಾರು ೯೮ ಶೇಕಡಾವಾರು ಗಳಿಂದ ತೇರ್ಗಡೆ ಹೊಂದಿದೆ ನಂತರ ನಾನು ಮುಂದಿನ ವಿದ್ಯಾಬ್ಯಾಸಕಾಗಿ ಚಿಕ್ಕಮಗಳೂರಿನ ಸಾಯಿ ಏಂಗೆಲ್ಸ್  ಪದವಿ ಪೂರ್ವ ಕಾಲೇಜಿಗೆ ಸೇರಿಕೊಂಡೆ ನನ್ನಲಿ ಇದ್ದ ವಿದ್ಯಾಭ್ಯಾಸದ ಆಸಕ್ತಿಯನ್ನು

ನಾನು ಆಗೇ ಕಾಪಾಡಿ ಕೊಂಡು ೧೨ನೆ ತರಗತಿಯಲ್ಲೂ ಕೂಡ ಸುಮಾರು ೯೮ ಶೇಕಡಾವಾರುಗಲ್ಲಿಂದ ತೇರ್ಗಡೆ  ಹೊಂದಿದೆ ನಂತರ ಈಗ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ನನ್ನ ಉನ್ನತ ವಿದ್ಯಾಭ್ಯಾಸ ಮಾಡುತಿರುವೆ .

ನಾನು ವಿದ್ಯಾಭ್ಯಾಸದಲ್ಲಿ  ಚೆನಾಗಿದ್ದರು ಮೊದಲು ನನ್ನಗೆ ಧೈರ್ಯ ಇರಲಿಲ್ಲ ಆದರೆ ೫ನೆ ತರಗತಿಯ ನಂತರ

ಬ್ಯಾಸ್ಕೆಟ್ಬಾಲ್ ಅದಲ್ಲೂ ಸುರು ಮಾಡಿದೆ ಪ್ರತಿದಿನ ಬ್ಯಾಸ್ಕೆಟ್ಬಾಲ್ ಆಡುತಿದೆ ಯಾಕಂದರೆ ನನ್ನ ಜೀವನದಲ್ಲಿ ನಾನು ಓದುವುದನ್ನು ಬಿಟ್ಟು ಬೇರೇನೂ ಬರುತ್ತಿರಲಿಲ್ಲ ಆಗೇ ಪ್ರತಿದಿನ ಅಡಿದಿಂದ ನಾನು ೭.೮.೯.೧೦ನೆ ತರಗತಿಯಲ್ಲಿ

ರಾಷ್ಟ್ರ ಆಗು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡೆ ಮತ್ತು ಬ್ಯಾಸ್ಕೆಟ್ಬಾಲ್ ಚೆನ್ನಾಗಿ ಆಡುವುದನ್ನು ಕಲಿತೆ

ಇದರಿಂದ ನನ್ನ ಜೀವನದ ಮೇಲೆ ಬಹಳ ಪ್ರಭಾವ ಬೀರಿದೆ ಸ್ಪರ್ಧಾತ್ಮಕ ಮನುಷ್ಯನನ್ನಾಗಿ  ಮಾಡಿದೆ

ಆಗು ನನ್ನಲಿ ಧೈರ್ಯ ತುಂಬಿದೆ .ಬ್ಯಾಸ್ಕೆಟ್ಬಾಲ್ ಬಿಟ್ಟರೆ ನನ್ನಲಿ ಇರುವ ಆಸಕ್ತಿ ಪುಸ್ತಕ ಓದುವುದು ಅದು ಈಗಿನ ಕಾಲದವರು ಬರದಿರುವ ಪುಸ್ತಕ ವಾಗಿರಬವುದು ಅಥವಾ ಪುರಾಣ  ಆಗಿರಬಹುದು.

ನಾನು ಅನೇಕ ಥರದ ಪುಸ್ತಕ ಗಳನ್ನೂ ಓದಿದ್ದೇನೆ  ನಾನು ಹಣದ ಬಗೆ ಇರುವ ಪುಸ್ತಕಗಳ್ಳನು ಓದಿದ್ದೇನೆ ಆಗು ವ್ಯಕ್ತಿತ್ವ ಮೇಲಿನ ಪುಸ್ತಕಗಳ್ಳನು ಓದಿದ್ದೇನೆ ಆಗು ಮುಖ್ಯವಾಗಿ ಇತಿಹಿಸದ ಮೇಲೆ ಇರುವಾ ಪುಸ್ತಕದ ಮೇಲೆ ಬಹಳಾ

ಆಸಕ್ತಿಯಿದೆ ಆಗೇ ನಮ್ಮ ಪುರಾಣ ,ವೇದ ಉಪನಿಷದಗಳ ಮೇಲು ಆಸಕ್ತಿಯಿದೆ  ಇದು ಕೂಡ ನನ್ನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದೆ

ನನ್ನ ವ್ರಿತ್ತಿಯ ಗುರಿ ನನಗೆ ನನ್ನ  ವ್ರಿತ್ತಿಯಲ್ಲಿ ಒಂದೇ ಗುರಿ ಅದು  ಶ್ರೀಮಂತನಾಗುವುದು ಆದರೆ ಬಹಳ ಜನರು ಇದನ್ನು

ಕೆಟ್ಟ ಗುರಿ ಎಂದು ಹೇಳುತ್ತಾರೆ ಆದರೆ ಅದರಿಂದ ನನಗೆ ಯಾವುದೇ ದುಕ್ಕ ಇಲ್ಲ ಯಾಕಂದರೆ ಆಗೇ ಹೇಳಿದ ವ್ಯಕ್ತಿಗಳೆಲ್ಲರೂ ಬಡವರು  ಆಗೇ ಹೇಳ್ಳಲು ಒಂದೇ ಕಾರಣ ಅವರು ಶ್ರೀಮಂತರಾಗದಿರಿವುದು . ಯಾಕಂದರೆ  ಇಲ್ಲಿ ವರೆಗೂ ಯಾವುದೇ ಶ್ರೀಮಂತ ವ್ಯಕ್ತಿ ಣ್ಣನ್ನಗೆ ನಿನ್ನ ಗುರಿ ಸರಿ ಇಲ್ಲ ಎಂದು ಹೇಳಿಲ್ಲ  ಮತ್ತೆ  ಬಹಳ ಜನ ಶ್ರೀಮಂತ ನಾಗುವುದೆಂದರೆ ಬರಿ ತುಂಬ ಹಣ ದುಡಿಯುವುದೆಂದುಕೊಂಡಿದರೆ ಆದರೆ ಅವ್ರಿಗೆ ತಿಳಿದಿಲ್ಲ ಅದಕ್ಕೂ ಮೀರಿ ಬೇರೆ ಇದೆ ಎಂದು. ಇದು ನನ್ನ ಜೀವನದ ಭಾಗವಾದ ವ್ರಿತ್ತಿಯ ಗುರಿ ಜೀವನದ ಗುರಿಯಲ್ಲ . ಜೀವನದಲ್ಲಿ ಯಾವುದೇ ಗುರಿಯಿಲ್ಲ ಏನಾದರು ಇದಾರೆ ಅದು ನನ್ನ ದೇಹಕೆ ತಿಳಿದಿದೆ ಅದು ಬದುಕುವುದು ಅಷ್ಟೇ.

ನಾನು ಅಂತ ವಿಶೇಷ ವ್ಯಕ್ತಿ ಅಲ್ಲದ ಕಾರಾಣ ನನ್ನ ಬಗೆ ಹೇಳ್ಳಲು ಬಹಳಷ್ಟೇನು ಇಲ್ಲ .

ನನ್ನ ಜೀವನದಲ್ಲಿ ಮೊದಲಿಗೆ ಹೇಳಿದ ಆಗೇ ಬ್ಯಾಸ್ಕೆಟ್ಬಾಲ್ ಒಂದು ಮುಖ್ಯ ಪತ್ರ ವಯಿಸಿದೆ .ಅದರಲ್ಲೂ  ಬ್ಯಾಸ್ಕೆಟ್ಬಾಲ್ ಮೇಲೆ ನನ್ನ ಒಲವು ಎಚಿಸಿದ ವ್ಯಕ್ತಿಯ ಬಗ್ಗೆ ನಾನು ಮಾತನಾಡಲೇ ಬೇಕು .  ಅವರೇ ಕೋಬ್ ಬೀನ್ ಬ್ರಯಾಂಟ್ ಬ್ಯಾಸ್ಕೆಟ್ಬಾಲ್ ದಂತ ಕತೆ ಇವರ ಬಗ್ಗೆ ಎಷ್ಟು ಮಾತನಾಡಿದರು ಕಡಿಮೇನೆ  ಆದರೂ ಸ್ವಲ್ಪ ನನಗೆ ತಿಳಿದಷ್ಟು ನಿಮಗೆ ತಿಳಿಸುತ್ತೆನೆ

ವಿಶ್ವದಲ್ಲೇ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿರುವ ವಿಶೇಷವಾಗಿಯೂ ಆಫ್ರಿಕಾದಲ್ಲಿ ಕಂಡುಬರುವ ಕಡುನಂಜಿನ ಹಾವು 'ಬ್ಲ್ಯಾಕ್ ಮಾಂಬಾ' ಎಂಬ ಹೆಸರಿನಿಂದಲೇ ವಿಶ್ವ ವಿಖ್ಯಾತಿ ಪಡೆದಿರುವ ಅಮೆರಿಕದ ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರ ಕೋಬ್ ಬೀನ್ ಬ್ರ್ಯಾಂಟ್ ಅಥವಾ ಕೋಬ್ ಬ್ರ್ಯಾಂಟ್, ಜನವರಿ 26 ಭಾನುವಾರ ನಡೆದ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ಸಾವಿಗೀಡಾಗಿದ್ದಾರೆ. ಇದು ಇಡೀ ಕ್ರೀಡಾ ಜಗತ್ತನ್ನೇ ಬೆಚ್ಚಿ ಬೀಳಿಸುವಂತಾಗಿದೆ. ಬ್ಯಾಡ್ಮಿಂಟನ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿರುವ ಕೋಬ್ ಬ್ರ್ಯಾಂಟ್, ತಮ್ಮ ಮಿಂಚಿನ ಆಟದಿಂದಲೇ ಗಮನ ಸೆಳೆದಿದ್ದರು. ಲಾಸ್ ಏಂಜಲೀಸ್‌ನಲ್ಲಿ ನಡೆದ ದುರಂತದಲ್ಲಿ 13ರ ಹರೆಯದ ಮಗಳು ಜಿಯನ್ನಾ ಸೇರಿದಂತೆ ಏಳು ಮಂದಿ ಅಸುನೀಗಿರುವುದು ಅತೀವ ಬೇಸರದ ಸಂಗತಿಯಾಗಿದೆ.ಭಾರತದಲ್ಲಿ ಕ್ರಿಕೆಟ್ ಹೇಗೆ ಜನಪ್ರಿಯವೋ ಅದೇ ರೀತಿ ಅಮೆರಿಕದಲ್ಲಿ ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ (ಎನ್‌ಬಿಎ) ವೃತ್ತಿಪರ ಬಾಸ್ಕೆಟ್‌ಬಾಲ್ ಲೀಗ್ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಲಾಸ್ ಏಂಜಲೀಸ್ ಲೇಕರ್ಸ್ ತಂಡವನ್ನು ಪ್ರತಿನಿಧಿಸಿರುವ ಕೋಬ್ ಬ್ರ್ಯಾಂಟ್, ಸಂಪೂರ್ಣ 20 ವರ್ಷಗಳ ವೃತ್ತಿ ಜೀವನವನ್ನು ಎನ್‌ಬಿಎನಲ್ಲೇ ತೊಡಗಿಸಿದ್ದರು. 1997ರಲ್ಲಿ 18ರ ಹರೆಯದಲ್ಲೇ ಎನ್‌ಬಿಎ ಸ್ಲಾಮ್ ಡಂಕ್ ಸ್ಪರ್ಧೆಯನ್ನು ಗೆದ್ದು ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎಂದೆನಿಸಿದ್ದರು.

ಬಾಸ್ಕೆಟ್‌ಬಾಲ್ ಆಟದ ಐದು ಸಾಂಪ್ರದಾಯಿಕ ಸ್ಥಾನಗಳಲ್ಲಿ 'ಶೂಟಿಂಗ್ ಗಾರ್ಡ್' ಒಂದಾಗಿದೆ. ತಮ್ಮ ತಂಡಕ್ಕೆ ಅಂಕಗಳನ್ನು ಗಳಿಸುವುದರ ಜೊತೆಗೆ ಚೆಂಡನ್ನು ರಕ್ಷಣೆಯಿಂದ ಕದಿಯುವುದರಲ್ಲಿ ಕೋಬ್ ಬ್ರ್ಯಾಂಟ್ ಪರಿಣಿತಿಯನ್ನು ಪಡೆದಿದ್ದರು. ಇಂತಹ ಆಟಗಾರರನ್ನು 'ಕಾಂಬೊ ಗಾರ್ಡ್' ಎಂದು ಸಹ ಕರೆಯಲಾಗುತ್ತದೆ. ಆರು ಅಡಿ ಆರು ಇಂಚು ಎತ್ತರದ ಬ್ರ್ಯಾಂಟ್, ಎದುರಾಳಿ ತಂಡದ ಪಾಲಿಗೆ ಸಿಂಹಸ್ವಪ್ನವಾಗಿದ್ದರು.

ಪಂದ್ಯವೊಂದರಲ್ಲಿ ಜೀವನಶ್ರೇಷ್ಠ 81 ಅಂಕ ಸಾಧನೆ  :- 2006ರಲ್ಲಿ ಟೊರಂಟೊ ರಾಪ್ಟಾರ್ಸ್ ವಿರುದ್ಧ ಜೀವನಶ್ರೇಷ್ಠ 81 ಅಂಕಗಳನ್ನು ಸಂಪಾದಿಸಿದರು. ಇದು ಎನ್‌ಬಿಎ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಆಟಗಾರರೊಬ್ಬರಿಂದ ದಾಖಲಾದ ಗರಿಷ್ಠ ಅಂಕಗಳ ಸಾಧನೆಯಾಗಿದೆ. 1962ನೇ ಇಸವಿಯಲ್ಲಿ ವಿಲ್ಟ್ ಚೇಂಬರ್ಲೇನ್ಸ್ 100 ಅಂಕಗಳನ್ನು ಸಂಪಾದಿಸಿರುವುದು ಇದುವರೆಗಿನ ಸರ್ವಶ್ರೇಷ್ಠ ದಾಖಲೆಯಾಗಿದೆ.

'ಡಿಯರ್ ಬಾಸ್ಕೆಟ್‌ಬಾಲ್‌'ಗೆ ಅಕಾಡೆಮಿ ಪ್ರಶಸ್ತಿ:-[ಬದಲಾಯಿಸಿ]

ಕೇವಲ ಬಾಸ್ಕೆಟ್‌ಬಾಲ್ ಮಾತ್ರವಲ್ಲದೆ ವಾಣಿಜ್ಯ ಹಾಗೂ ಮನರಂಜನೆಯಲ್ಲೂ ಕೋಬ್ ಬ್ರ್ಯಾಂಟ್ ಹೆಸರು ಮಾಡಿದ್ದರು. 2018ರಲ್ಲಿ ಅವರ ಕಿರು ಚಿತ್ರ 'ಡಿಯರ್ ಬಾಸ್ಕೆಟ್‌ಬಾಲ್‌'ಗೆ 'ಅಕಾಡೆಮಿ ಪ್ರಶಸ್ತಿ' ಅರಸಿ ಬಂದಿತ್ತು. ಹಾಗೆಯೇ ಕ್ರೀಡಾ ಪಾನೀಯ ಬಾಡಿ ಆರ್ಮರ್‌ನಲ್ಲಿ ಕೋಟಿ ಗಟ್ಟಲೆ ಹಣವನ್ನು ಸುರಿದಿದ್ದರು.

ಆದರೆ ದುರದೃಷ್ಟವಶಾತ್ ನಾವು ಇಂತಹ ದೇವತಾಮನುಶ್ಯನನ್ನು ಹೆಲಿಕ್ಯಾಪ್ಟರ್ ದುರಂತ ದಲ್ಲಿ ೨೦೨೦ ಯಲ್ಲಿ ಕಳೆದು ಕೊಂಡೆವು ಆದರೆ ದುಃಖದ ಸಂಗತಿ ಹೆಂಡರೆ ಅದರಲ್ಲಿ ಅವರ ೧೪ ವರುಷದ ಮಗಳು ಕೂಡ ತೀರಿಕೊಂಡಳು.

ಇಷ್ಟು ಅವರ ಜೀವನದ ಬಗ್ಗೆ ಆದರೆ  ನನ್ನ ಬಗ್ಗೆ ಮಾತನಾಡಬೇಕೆಂದರೆ ಈವಾರ ಜೀವನದಿಂದ ಬಹಳ ಪ್ರಭಾವಿತಗೊಂಡ ನಾನು ಅವರ ಜೀವನದಿಂದ ಸ್ವಲ್ಪ ಕಲಿತುಕೊಂಡು ನನ್ನ ಜೀವನದಲ್ಲಿ ರೂಢಿಸಿಕೊಳ್ಳಲು ಪ್ರ್ಯತ್ನಿಸುತಿರುತೇನೆ .

ಮತ್ತೆ ಬೇರೆ ಪ್ರಭಾವಗಾಲ ಬಗ್ಗೆ ಮಾತನಾಡುವುದಾದರೆ ಆಡು ನಮ್ಮ ಪುರಾಣಗಳು, ವೇದಗಳು , ಉಪನಿಷದಗಳು ,ಆಗು ಆದಿ ಶಂಕರಾಚಾರ್ಯರ ಮೂಲ ಸಿದಾಂತ  ವೇದಾಂತದಿಂದ ಹೆಚ್ಚು ಪ್ರಭಾವ ಗೊಂಡಿರುವೆ . ಅದರಲ್ಲೂ " ಅಹಂ ಬ್ರಹ್ಮಾಸ್ಮಿ " ಸಿದಾಂತ ಬಹಳ ನನ್ನ ಮೇಲೆ ಪ್ರಭಾವ ಬೀರಿದೆ . ನಾವು ನಮ್ಮ ಹಿಂದೂ ಧರ್ಮದ ಬಗ್ಗೆ ಮಾತನಾಡುವುದರೆ ಇದು ಯಾವುದೊ ದೇವರ ಕಟ್ಟು ಕತೆ ಅಲ್ಲ  ಇದು ಜೀವನದ ಸತ್ಯ ಜೀವನ ನಡೆಸುವ ಮಾರ್ಗ .

ಮತೊಬ್ಬ ಪ್ರಭಾವಿ ವ್ಯಕ್ತಿ ನನ್ನ ಜೀವನದಲ್ಲಿ ಎಂದರೆ ಅದು ಶ್ರೀ ಕೃಷ್ಣ ಪರಮಾತ್ಮ  ಏಕೆಂದರೆ ಅವರು ಕೂಡ ಅಹಂ ಬ್ರಹ್ಮಾಸ್ಮಿ ತತ್ವಾನ್ನು ಶ್ರೀ ಭಾಗವದ್ಗೀತದಲ್ಲಿ ಅರ್ಜುನನಿಗೆ ಬ್ರಹ್ಮ ವಿದ್ಯದ ಮೂಲಕ ತಿಳಿಸಿಕೊಟ್ಟರು. ಆಗು ಬದುಕಿನ ಯೋಗದ ಅರ್ತವನ್ನು ಬಹಳ ಸ್ಪಷ್ಟ ವಾಗಿ ತಿಳಿಸಿಕೊಟ್ಟರು

ಭಗವದ್ಗೀತೆಯಲ್ಲಿ ಅಂಥದ್ದೇನಿದೆ ತಿಳ್ಕೋಬೇಕೆಂಬ ಕುತೂಹಲ. ಆದರೆ, 700 ಶ್ಲೋಕಗಳಿರುವ ಪುಸ್ತಕದ ಗಾತ್ರ ನೋಡಿ ಕೆಲವರು ಓದಲು ಹಿಂಜರಿದರೆ, ಮತ್ತೆ ಕೆಲವರು ಆ ಶ್ಲೋಕ ಗೀಕ ಎಲ್ಲ ಯಾರು ಓದ್ತಾರೆ ಅಂತ ಸುಮ್ನಾಗಿರ್ತಾರೆ. ನಿಮ್ಮಂಥವರಿಗಾಗಿಯೇ ಸರಳವಾಗಿ ಒಂದೊಂದು ಅಧ್ಯಾಯಗಳ ಸಾರವನ್ನೂ ಒಂದೆರಡು ಸಾಲಿನಲ್ಲಿ ಇಲ್ಲಿ ಕೊಡಲಾಗಿದೆ.

ಅಧ್ಯಾಯ 1: ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ

ಅರ್ಜುನನ ದುಃಖ ಇಲ್ಲಿ ಮುಖ್ಯ ವಿಷಯ. ಯುದ್ಧಕ್ಕಾಗಿ ಬಂಧುಗಳನ್ನೇ ಕೊಲ್ಲಬೇಕಾದ ದುಗುಡ ಹಾಗೂ ಖಿನ್ನತೆ. ಧರ್ಮ ಹಾಳುಗೆಡವಿದ್ದನ್ನು ನೋಡುವುದಕ್ಕಿಂತ ಅವರೆಲ್ಲ ತನ್ನ ಬಂಧುಗಳೇ. ಅವರನ್ನು ಹೇಗೆ ಕೊಲ್ಲುವುದು ಎಂದು ಅರ್ಜುನ ಯೋಚಿಸುತ್ತಿರುತ್ತಾನೆ. ಆದರೆ, ಈ ಯೋಚನೆ ತಪ್ಪು. ಧರ್ಮವು ಈ ಭವಬಂಧನಗಳಿಗಿಂತ ಹೆಚ್ಚು. ತಪ್ಪಾಗಿ ಯೋಚಿಸುವುದರಿಂದ ತಪ್ಪಾದ ತೀರ್ಪು ಹೊರಬರುತ್ತದೆ ಎಂಬುದನ್ನು ಶ್ರೀಕೃಷ್ಣ ವಿವರಿಸುತ್ತಾನೆ. ಆದರೆ, ಅರ್ಜುನನಿಗೆ ಸಮಧಾನವಾಗುವುದಿಲ್ಲ. ಆತ ಗೊಂದಲ ಹಾಗೂ ದುಃಖದಿಂದ ಕುಳಿತುಕೊಳ್ಳುತ್ತಾನೆ.

ಅಧ್ಯಾಯ 2: ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ

ಕೃಷ್ಣನು ಅರ್ಜುನನಿಗೆ ಅವನೆಲ್ಲ ದುಃಖದುಮ್ಮಾನ, ಸಮಸ್ಯೆಗಳಿಗೆ ಅಜ್ಞಾನವೇ ಕಾರಣ ಎಂಬುದನ್ನು ತಿಳಿಸುತ್ತಾನೆ. ಭೀಷ್ಮನಿಂದ ಹಿಡಿದು ಯಾರೊಬ್ಬರ ಆತ್ಮಗಳನ್ನೂ ನಾಶಪಡಿಸಲಾಗುವುದಿಲ್ಲ. ಹಾಗಾಗಿ ಅವರೆಲ್ಲ ಶಾಶ್ವತವಾಗಿರುತ್ತಾರೆ. ಯುದ್ಧವನ್ನು ದೂರವಿಡುವುದರಿಂದ ನಿನ್ನ ಧರ್ಮವನ್ನೇ ದೂರವಿಟ್ಟಂತಾಗುತ್ತದೆ. ಅದು ಪಾಪಕಾರ್ಯ. ಹೋರಾಡದಿದ್ದರೆ ಆತನೊಬ್ಬ ಹೇಡಿ ಎನಿಸಿಕೊಳ್ಳುತ್ತಾನೆ ಎಂದು ಎಚ್ಚರಿಸುತ್ತಾನೆ ಕೃಷ್ಣ.

ಅಧ್ಯಾಯ 3: ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥವೊಂದೇ ದಾರಿ

ಕೃಷ್ಣ ಇಲ್ಲಿ ನಿಸ್ವಾರ್ಥ ಸೇವೆಯಾದ ಕರ್ಮಯೋಗದ ಕುರಿತು ಮಾತನಾಡುತ್ತಾನೆ. ಕರ್ಮಯೋಗಿಯು ಧರ್ಮದ ಆಧ್ಯಾತ್ಮಕ್ಕೆ ಬೆಲೆ ಕೊಟ್ಟು ತನ್ನೆಲ್ಲ ಕೆಲಸಗಳನ್ನು ದೇವರಿಗೆ ಸಮರ್ಪಿಸುತ್ತಾನೆ. ಫಲಿತಾಂಶದ ಬಗ್ಗೆ ಯೋಚಿಸದೆ  ತನ್ನ ಪಾಡಿಗೆ ತಾನು ಶಾಂತಚಿತ್ತದಿಂದ ಕೆಲಸ ಮಾಡಿಕೊಂಡು ಹೋಗುತ್ತಾನೆ. ನಮ್ಮ ಆಸೆ, ಸಿಟ್ಟು, ಅತಿಯಾದ ಪ್ರೀತಿಯೇ ನಮ್ಮ ನಿಜವಾದ ಶತ್ರುಗಳು. ಇವು ನಮ್ಮನ್ನು ಸ್ವಾರ್ಥಿಗಳಾಗಿಸಿ ಶಾಂತಿಯನ್ನು ಕಸಿದುಕೊಳ್ಳುತ್ತದೆ ಎಂದು ತಿಳಿಸುತ್ತಾನೆ.

ಅಧ್ಯಾಯ 4: ಧರ್ಮಸಂಸ್ಥಾಪನೆಗೆ ಭಗವಂತ ಅವತಾರ ಎತ್ತುತ್ತಾನೆ

ಧರ್ಮಕ್ಕೆ ಹಾನಿಯಾದಾಗ ಭಗವಂತನು ಸಜ್ಜನರನ್ನು ಕಾಪಾಡಿ, ದುರ್ಜನರನ್ನು ನಾಶ ಮಾಡಲು, ಪ್ರತಿ ಯುಗದಲ್ಲಿ ಭೂಮಿಯಲ್ಲಿ ಅವತರಿಸುತ್ತಾನೆ ಎಂದು ಕೃಷ್ಣ ವಿವರಿಸುತ್ತಾನೆ. ಅಷ್ಟೇ ಅಲ್ಲ, ಭಗವಂತನ ಈ  ಜನ್ಮ ರಹಸ್ಯವನ್ನು ಅರಿತವರು ಮೋಕ್ಷ ಪ್ರದರು ಎಂದು ತಿಳಿಸುತ್ತಾನೆ.

ಅಧ್ಯಾಯ 5: ಅಹಂಕಾರದಿಂದ ಹೊರ ಬಂದು ಫಲದಾಸೆ ಇಲ್ಲದೆ ಕರ್ಮ ಮಾಡು

ಹೇಗೆ ಕರ್ತವ್ಯ ನಿಭಾಯಿಸುತ್ತಲೇ ಫಲದಾಸೆಯಿಲ್ಲದೆ ಸನ್ಯಾಸಿಯಂತಿರುವುದು ಎಂದು ಅರ್ಜುನ ಪ್ರಶ್ನಿಸುತ್ತಾನೆ. ಇದಕ್ಕೆ ಕೃಷ್ಣನು ನಿಜವಾದದ ಕರ್ಮಯೋಗಿಯು ಫಲಿತಾಂಶದ ಬಗ್ಗೆ ಯೋಚಿಸದೆ ಫಲವನ್ನು ದೇವರಿಗೆ ಬಿಟ್ಟು ತಾನು ಕರ್ತವ್ಯ ನಿಭಾಯಿಸುತ್ತಾನೆ. ಈ ಮನಸ್ಥಿತಿಯಿಂದಾಗಿ ಆತ ಸ್ವಯಂ ನಿಯಂತ್ರಣ ಸಾಧಿಸಿ ಅಹಂಕಾರದಿಂದ ಹೊರಬರಬಲ್ಲ ಎಂದು ಹೇಳುತ್ತಾನೆ.

ಅಧ್ಯಾಯ 6: ಧ್ಯಾನಸಾಧಕನಿಗೆ ಕರ್ಮ ಸಾಧನೆ ಸಾಧ್ಯ

ಧ್ಯಾನದ ಕುರಿತು ಇಲ್ಲಿ ಕೃಷ್ಣ ಹೇಳುತ್ತಾನೆ. ಧ್ಯಾನವನ್ನು ಅಭ್ಯಾಸ ಮಾಡುವವನು ಏಕಾಂಗಿಯಾಗಿ, ದೇಹವನ್ನೂ ಮನಸ್ಸನ್ನೂ ಬಿಗಿಹಿಡಿದು, ಮನಸ್ಸನ್ನು ಪರಮಾತ್ಮನಲ್ಲಿ ಕೂಡಿಸಿಕೊಂಡಿರಬೇಕು. ಪ್ರಯತ್ನದಿಂದಲೇ ಇಂದ್ರಿಯಗಳನ್ನೂ, ಮನಸ್ಸನ್ನು ಗೆಲ್ಲಬೇಕು ಎನ್ನುತ್ತಾನೆ.

ಅಧ್ಯಾಯ 7: ನೀನಾರು ಎಂದು ತಿಳಿದುಕೋ.

ಧ್ಯಾನ ಮಾಡುತ್ತಿರುವುದರಿಂದ ನಿನಗೆ ನೀನು ಯಾರೆಂಬುದು ಅರಿವಾಗಬೇಕು. ಜ್ಞಾನಿಯು ನನ್ನಲ್ಲಿ ಲೀನನಾಗುತ್ತಾನೆ ಎಂಬ ತತ್ವ ಬೋಧಿಸುತ್ತಾನೆ.

ಅಧ್ಯಾಯ 8: ಪ್ರಯತ್ನ ಬಿಡಬೇಡ

ದೇವರ ಧ್ಯಾನದಲ್ಲಿ ಪ್ರಾಮಾಣಿಕವಾಗಿ ತೊಡಗಿರುವವನಿಗೆ ದೇವರು ಸಿಕ್ಕೇ ಸಿಗುತ್ತಾನೆ. ಪ್ರಯತ್ನ ಬಿಡಕೂಡದು ಎಂದು ಹೇಳುತ್ತಾನೆ.

ಅಧ್ಯಾಯ 9: ದೇವರ ಧ್ಯಾನದಿಂದ ನನ್ನ ಸೇರಬಹುದು

ಈ ಜಗತ್ತೆಲ್ಲಾ ಕಣ್ಣಿಗೆ ಕಾಣದ ನನ್ನಿಂದ ತುಂಬಿರುವುದು. ಈ ಎಲ್ಲಾ ವಸ್ತುಗಳೂ ನನ್ನಲ್ಲಿ ಇರುವುವು, ಆದರೆ ನಾನು ಅವುಗಳಲ್ಲಿ ಇಲ್ಲ.ಯಾವ ಜನರು, ತಮ್ಮ ಆತ್ಮವೆಂದು ನನ್ನನ್ನು ಧ್ಯಾನ ಮಾಡುತ್ತಾರೋ, ನಾನು ಅವರ ಯೋಗಕ್ಷೇಮ ಹೊರೆ ಹೊರುತ್ತೇನೆ ಎನ್ನುತ್ತಾನೆ.

ಅಧ್ಯಾಯ 10: ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ

ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ನಾನಿದ್ದೇನೆ. ನಿನ್ನ ಸುತ್ತಲ ಬದುಕು ಸಂಪೂರ್ಣ ಪವಾಡಗಳಿಂದಲೇ ತುಂಬಿದೆ. ಅವುಗಳನ್ನು ಕಂಡು ಖುಷಿಪಡು. ಜಗತ್ತಿನಲ್ಲಿ ದೇವರಿರುವುದಲ್ಲ, ದೇವರೊಳಗೆ ಸಂಪೂರ್ಣ ಜಗತ್ತಿದೆ. ನಿನ್ನ ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೇ ತೀರುತ್ತೇನೆ.

ಅಧ್ಯಾಯ 11: ವಿಶ್ವರೂಪ ದರ್ಶನ

ಈಶ್ವರತ್ವದ ರೂಪವನ್ನು ನೋಡುವ ಆಸೆಯನ್ನು ಅರ್ಜುನ ವ್ಯಕ್ತಪಡಿಸುತ್ತಾನೆ. ಇದರಿಂದ ಕೃಷ್ಣನು ತನ್ನ ಆದಿಅಂತ್ಯವಿಲ್ಲದ ಪ್ರಕಾಶಮಾನವಾದ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಇದನ್ನು ನೋಡಿ ಅರ್ಜುನ ಬೆರಗಾಗಿ ಶರಣಾಗುತ್ತಾನೆ. ಸತ್ಯವನ್ನು ಅರಿಯದಿದ್ದುದಕ್ಕೆ ಕ್ಷಮೆ ಯಾಚಿಸುತ್ತಾನೆ.

ಅಧ್ಯಾಯ 12: ವೈರಾಗ್ಯದಿಂದ ಧ್ಯಾನಿಸುವವರೇ ಯೋಗಿ

ಯಾರು ಭಗವಂತನಲ್ಲಿ ಹೆಚ್ಚು ಪ್ರೀತಿಯನ್ನಿಟ್ಟು ವಿಶ್ವರೂಪವನ್ನು ಧ್ಯಾನಿಸುತ್ತಾ ಉಪಾಸನೆ ಮಾಡುವರೋ ಅವರು ಹೆಚ್ಚಿನ ಯೋಗಿಗಳು. ವಿವೇಕ ವೈರಾಗ್ಯಗಳಿಂದ ಅದನ್ನು ಅಭ್ಯಾ ಸಮಾಡಬೇಕು. ಅದು ಕಷ್ಟವಾದರೆ, ಭಗವಂತನ ಪ್ರೀತ್ಯರ್ಥವಾಗಿ ಕರ್ಮಗಳನ್ನು ಮಾಡು. ಅದೂ ಕಷ್ಟವಾದರೆ. ಕರ್ಮಗಳ ಫಲಗಳ ಬಯಕೆಗಳನ್ನೆಲ್ಲಾ ಬಿಡು ಎನ್ನುತ್ತಾನೆ.

ಕೃಷ್ಣನ ಭಕ್ತೆ ಮೀರಾ ಹಿಂದಿನ ಜನ್ಮದಲ್ಲಿ ಏನಾಗಿದ್ದಳು?

ಅಧ್ಯಾಯ 13: ಮಾಯೆಯಿಂದ ಕಳಚಿಕೊಂಡು ಭಗವಂತನನ್ನು ಭಜಿಸು

ಈ ಬ್ರಹ್ಮಾಂಡವೇ ಒಂದು ಮಾಯೆ. ಇವೆಲ್ಲದರ ಸೃಷ್ಟಿಕರ್ತ ಬ್ರಹ್ಮನಾಗಿದ್ದು,ಅವನು ಪ್ರತಿಯೊಂದು ಅಣುರೇಣತೃಣಕಾಷ್ಟಗಳಲ್ಲೂ ನೆಲೆಸಿದ್ದಾನೆ. ನಿನ್ನೊಳಗೂ ಆತ ಇರುವುದನ್ನು ಅರ್ಥ ಮಾಡಿಕೊಂಡು ಮಾಯೆಯಿಂದ ಕಳಚಿಕೊಂಡು ಭಕ್ತಿಯಿಂದ ಜೀವಿಸು ಎಂದು ಕೃಷ್ಣ ವಿವರಿಸುತ್ತಾನೆ.

ಅಧ್ಯಾಯ 14: ನಿನ್ನದೃಷ್ಟಿಕೋನಕ್ಕೆ ಹೊಂದುವ ಜೀವನಶೈಲಿ ಅಳವಡಿಸಿಕೋ

ಎಲ್ಲರಲ್ಲೂ ಮೂರು ಗುಣಗಳಿರುತ್ತವೆ. ಸಾತ್ವಿಕ ಗುಣವು ಬೆಳಕಿನ, ಸುಖದ, ವಿಚಾರದ ರೂಪ, ರಜೋಗುಣವು ಪ್ರೀತಿ, ಬಯಕೆ ಅಹಂಕಾರದ ಕ್ರಿಯಾಶೀಲ ರೂಪ, ತಮವು ಅಜ್ಞಾನ, ತಪ್ಪು ತಿಳುವಳಿಕೆ, ಆಲಸ್ಯದ ರೂಪ. ಇವುಗಳಲ್ಲಿ ಶಕ್ತವಾದ ಗುಣ ಆತ್ಮವನ್ನು ಕಟ್ಟಿಹಾಕುತ್ತದೆ. ಎಲ್ಲರಲ್ಲಿಯೂ ಇಷ್ಟೂ ಗುಣಗಳಿದ್ದರೂ ಒಂದು ಗುಣ ಮೇಲುಗೈ ಸಾಧಿಸುವುದು. ಸಾತ್ವಿಕ ಗುಣದವನು ಮೋಕ್ಷ, ರಾಜಸಿಕ ಗುಣದವನು ಪುನರ್ಜನ್ಮ ಹಾಗೂ ತಾಮಸಿಕ ಗುಣದವನು ಕೆಳಮಟ್ಟದ ಜನ್ಮವೆತ್ತುತ್ತಾನೆ ಎಂದು ಕೃಷ್ಣ ಹೇಳುತ್ತಾನೆ.

ಅಧ್ಯಾಯ 15: ದೈವಿಕತ್ವಕ್ಕೆ ಬೆಲೆ ಕೊಡು

ಈ ಪ್ರಾಪಂಚಿಕ ಜೀವನದಲ್ಲಿ ನಾವು ಹೇಗೆ ಸಾವು ಹಾಗೂ ಪುನರ್ಜನ್ಮಗಳ ಮಧ್ಯೆ ಸಿಲುಕಿದ್ದೇವೆ ಎಂಬುದನ್ನು ಕೃಷ್ಣ ಅರ್ಜುನನಿಗೆ ಅರ್ಥ ಮಾಡಿಸುತ್ತಾನೆ. ಆತ ಸಂಸಾರವನ್ನು ತಲೆಕೆಳಗಾದ ಅರಳಿ ಮರಕ್ಕೆ ಹೋಲಿಸಿ ಮಾತನಾಡುತ್ತಾನೆ. ಪಾಪ ಪುಣ್ಯಗಳ ಕರ್ಮಗಳನ್ನು ಅಂಟಿಸುವ ಒಳ ಬೇರುಗಳು ಮೇಲಕ್ಕೂ ಕೆಳಕ್ಕೂ ಹರಡಿಕೊಂಡಿದೆ. ಸುಖದ ಬಯಕೆಗಳೆ ಅದರ ಚಿಗುರುಗಳು. ಇದು ಆದಿ ಅಂತ್ಯವಿಲ್ಲದ್ದು. ಇದನ್ನು ವೈರಾಗ್ಯವೆಂಬ ಶಸ್ತ್ರದಿಂದ ಕತ್ತರಿಸಬೇಕು. ದೈವಿಕತ್ವಕ್ಕೆ ಬೆಲೆ ಕೊಟ್ಟಾಗ ಇದು ಸಾಧ್ಯ ಎಂದು ಕೃಷ್ಣ ಮನ ಮುಟ್ಟುವಂತೆ ಹೇಳುತ್ತಾನೆ.  

ಅಧ್ಯಾಯ 16 : ಉತ್ತಮನಾಗಿರುವುದೇ ವರ

ಸಿಟ್ಟು, ಕ್ರೂರತೆ, ಅಜ್ಞಾನ, ಅಪ್ರಾಮಾಣಿಕತೆ, ಅತಿಯಾಸೆ, ಅನೈತಿಕತೆ, ಅಹಂಕಾರ ಮುಂತಾದವು ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ ನಾಶ ಮಾಡುತ್ತವೆ. ಆದರೆ ಮಾನವೀಯತೆ, ಸತ್ಯ, ಅಹಿಂಸೆ, ತಾಳ್ಮೆ, ಇಂದ್ರಿಯಗಳ ನಿಯಂತ್ರಣ ಮುಂತಾದ ಸದ್ಗುಣಗಳು ಜ್ಞಾನಕ್ಕೆ ಕಾರಣವಾಗಿ ಸ್ವತಂತ್ರರನ್ನಾಗಿಸುತ್ತದೆ.

ಅಧ್ಯಾಯ 17: ಮೇರು ಸತ್ಯ

ಇಲ್ಲಿ ಕೃಷ್ಣ ಓಂ ತತ್ ಸತ್ ಮಂತ್ರದ ಮಹತ್ವ ಹೇಳುತ್ತಾನೆ. ಇದರ ಅರ್ಥ ಮೇರು ಸತ್ಯ ಎಂದು. ಓಂನಾಮದಿಂದಲೇ ಸತ್ಕಾರ್ಯ ಆರಂಭಿಸಬೇಕು. ಯಜ್ಞ, ದಾನ ಹಾಗೂ ತಪಸ್ಸು ಸತ್ಕಾರ್ಯಗಳು ಎಂದು ವಿವರಿಸುತ್ತಾನೆ.

ನಂಬಿದವರನ್ನು ಕೈ ಬಿಡದ ಶೃಂಗೇರಿ ಶಾರದಾಂಬೆ

ಅಧ್ಯಾಯ 18: ಪರಮಾತ್ಮನೊಂದಿಗೆ ಐಕ್ಯ

ಫಲದ ಬಯಕೆಯಿಂದ ಮಾಡುವ ಕರ್ಮಗಳನ್ನು ಬಿಡುವುದು ಸಂನ್ಯಾಸ, ಆ ಎಲ್ಲಾ ಕರ್ಮಗಳನ್ನು ಮಾಡಿ ಫಲವನ್ನ ಬಯಸದೇ ಇರುವುದು ತ್ಯಾಗ ಎಂದು ಹೇಳುವ ಕೃಷ್ಣನು, ಕರ್ಮಯೋಗಿಯಾಗಿ ಬದುಕಬೇಕು. ನಿಮ್ಮ ಕೆಲಸವೇ ನಿಮ್ಮನ್ನು ಆತ್ಮದೊಂದಿಗೆ ಜೋಡಿಸುತ್ತದೆ. ಪರಮಾತ್ಮನೊಂದಿಗೆ ಐಕ್ಯವಾಗಲು ದಾರಿ ತೋರುತ್ತದೆ ಎಂದು ವಿವರಿಸುತ್ತಾನೆ.