ಸದಸ್ಯ:122.182.227.161

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಟುಂಬ:

ನನ್ನ ಹೆಸರು ಅಕ್ಷಯ್ ಟಿ.ಎಲ್. ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ಎಸ್ ಜಿ ಪಾಳ್ಯದಲ್ಲಿ ಕುಮಾರ್ ಮತ್ತು ಕಳಾ ದಂಪತಿಗಳಿಗೆ ೧೯೯೯ನೇ ಇಸವಿಯ ಅಟ್ಕೋಬರ್ ೫ನೇ ತಾರೀಖಿನಂದು ಜನನವಾಯಿತು.ಬಾಲ್ಯದಲ್ಲಿಯೇ ದೈವಭಕ್ತಿ ಮನಸ್ಸಿನಲ್ಲಿ ಅಚ್ಚೊಚ್ಚಿತು.ತಂದೆ-ತಾಯಿಗಳೇ ಜೀವನ ಎಂದು ತಿಳಿದು ಬೆಳೆದವ ನಾನು.ತಂಗಿ ಸಿರಿಷಾ ಎಂದರೆ ಅಪಾರವಾದ ಪ್ರೀತಿ. ಚಿಕ್ಕಂದಿನಲ್ಲೇ ಈಜು,ಸೈಕಲ್ ಸವಾರಿ ಕಲಿತೆ.ಜೀವನದಲ್ಲಿ ಮೊದಲ ಬಾರಿಗೆ ಶಾಲೆಗೆ ಸೇರಿಸಿದರು.ಶ್ರೀರಾಮನ್ ಮಾಸ್ತರರು ಅಕ್ಷರ ಕಳುಹಿಸಿದರು.೧ನೇ ತರಗತಿಯಿಂದಲೇ ಎಲ್ಲ ವಿಷಯಗಳಲ್ಲಿ ಮುಂದಿರುತ್ತಿದ್ದೆ.೨ನೆ ತರಗತಿ ಮಗಿಸಿಕೊಂಡು,ಕುಟುಂಬದೊಂದಿಗೆ ಬೆಂಗಳೂರಿಗೆ ವಲಸೆ ಬರಲಾಯಿತು.

ವಿದ್ಯಾಭ್ಯಾಸ :

ಕೋರ್ಮಂಗಳಾ ಪ್ರಾಂಸಿಸ್ ಶಾಲೆಗೆ ೩ನೇ ತರಗತಿಗೆ ಸೇರಿಕೊಂಡೆ.ಆ ಶಾಲೆಯಲ್ಲಿ ನನ್ನ ಜೀವನ ಮೊಗ್ಗು ಅರಳಿ ಹೂವಾಗುವಂತೆ ಅರಳಿತು.ರೋಹಿನಿ ಎಂಬ ಶಿಕ್ಷಕಿ ಜೀವನಕ್ಕೆ 'ಸಿ.ಏ' ಗುರಿಯನ್ನು ಕೊಟ್ಟರು.ಎಲ್ಲಾ ಶಿಕ್ಷಕರ ಮುದ್ದು ವಿದ್ಯಾರ್ಥಿಯಾಗಿ ಅನೇಕ ಕನಸುಗಳನ್ನು ನನಸಾಗಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದೆ.೮ನೇ ತರಗತಿಯವರೆಗೆ ಆ ಶಿಕ್ಷಕರು ನನ್ನನ್ನು ಬುದ್ಧಿವಂತನನ್ನಾಗಿ ಮಾಡಿದರು.೯ನೇ ತರಗತಿಗೆ ವಾಸವಿರುವ ಮನೆಯಿಂದ ೫ ಕಿ.ಮೀ. ದೂರದ ಬಾಲ್ ಡಿವಿನ್ ಶಾಲೆಗೆ ಸೇರಿಕೊಂಡೆ.೯ನೇ ತರಗತಿಯಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಅನೇಕ ಬಹುಮಾನಗಳನ್ನು ಪಡೆದುಕೊಂಡೆ.ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿದರು.ಶಾಲಾ ಪಾರ್ಲಿಮೆಂಟಿನಲ್ಲಿ ೨ ವರ್ಷ ಮುಖ್ಯಮಂತ್ರಿಯಾಗಿದ್ದೆ.ಶಾಲೆಯಿಂದ ಸ್ಕಂದಾಗಿರಿ ಬೆಟ್ಟಕ್ಕೆ ಪ್ರವಾಸ ಹೋಗಿದ್ದೆವು. ೯ನೇ ತರಗತಿ ಮುಗಿಸಿ ೧೦ನೇ ತರಗತಿಗೆ ‌ನವ ಉತ್ಸಾಹದೊಂದಿಗೆ ಕಾಲಿಟ್ಟೆವು.ಅಲ್ಲಿ ಹೆಲ್ಗ,ಲ್ಕಷಮೀ,ರಾನಿ ಶಿಕ್ಷಕರು ಜೀವನದ ನಿಜವಾದ ಅರ್ಥ ತಿಳಿಸಿದರು.ಉತ್ತಮ ವಿದ್ಯಾಭ್ಯಾಸ ಮಾಡುವುದರ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದೆವು.ಈ ಬಾರಿ ತಲಕಾಡು, ಶ್ರೀರಂಗಪಟ್ಟಣ,ನಂಜನಗೂಡಿಗೆ ಪ್ರವಾಸ ಕೈಗೊಂಡಿದ್ದೆವು. ಶಾಲಾ ಜೀವನದ ಪ್ರತಿಯೊಂದು ಹಂತದಲ್ಲೂ ಅನೇಕ ಉತ್ತಮ ಗೆಳೆಯರನ್ನು ಪಡೆದುಕೊಂಡೆ.ಕಿಷೋರ್,ಪುನಿ,ಚಂದ್ರು,ನಾನಿ ಮತ್ತು ನಾನು ಆಪ್ತ ಮಿತ್ರರು.ಇವರೊಂದಿಗಿನ ಶಾಲಾ ಜೀವನ ಮರೆಯಲಾಗದು.ಶಾಲಾ ಕ್ರಿಕೆಟ್ ತಂಡವನ್ನು ಕಟ್ಟಿ,ಪಿ.ಟಿ.ಸರ್ ನೆರವಿನಿಂದ ಕೆ.ಎಸ್.ಸಿ.ಎ.ಪಂದ್ಯಗಳನ್ನು ಆಡಿದೆವು.ಆ ತಂಡದ ನಾಯಕತ್ವ ಜವಾಬ್ದಾರಿ ನಾನೆ ವಹಿಸಿಕೊಂಡಿದ್ದೆ. ಎಲ್ಲಾ ಶಿಕ್ಷಕರು ನಮ್ಮ ಜೀವನ ಸುಂದರವಾಗಿರಬೇಕೆಂದು ವಿಶೇಷ ತರಗತಿಗಳನ್ನು ಪ್ರಾರಂಭಿಸಿ, ನಮಗೆ ಒಳ್ಳೆಯ ವಿದ್ಯೆಯನ್ನು ಕಳುಹಿಸಿದರು.ಪರೀಕ್ಷೆಗಳು ಹತ್ತಿರವಾದಂತೆ ಎಲ್ಲರ ಗಮನ ಓದುವ ಕಡೆಗೆ ಹೋಯಿತು.ಕಾಲ ಹೊರಳಿದ್ದೆ ತಿಳಿಯದಂತೆ ಪರೀಕ್ಷೆಗಳು ಬಂದೇ ಬಿಟ್ಟವು,ಎಲ್ಲರೂ ಪರೀಕ್ಷೆ ಬರೆದು ಮುಗಿಸೇಬಿಟ್ಟೆವು.೯೧೦ ಅಂಕಗಳನ್ನು ಪಡೆಯುವುದರೊಂದಿಗೆ ಶಾಲೆಯಲ್ಲೇ ಅತಿ ಹೆಚ್ಚು ಅಂಕಗಳನ್ನು ಪಡೆದವನಾಗಿ ಉತ್ತೀರ್ಣನಾದೆನು.

ಅಕ್ಷಯ್ ಟಿ.ಎಲ್
Born05-10-1999
Nationalityಇಂಡಿಯನ್
Educationಕ್ರೈಸ್ಟ್ ಯೂನಿವರ್ಸಿಟಿ

ನನ್ನ ಕಾಲೇಜಿನ ದಿನಗಳು :

ಶಿವನ ಸಮುದ್ರ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರ. ಕಾವೇರಿ ನದಿಯ ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಇಲ್ಲಿ ೧೯೦೨ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಒಂದನ್ನು ಸ್ಥಾಪಿಸಲಾಯಿತು.[೧] ಇಡೀ ಏಷ್ಯಾ ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು.ಇಷ್ಟೇ ಅಲ್ಲದೆ,ಈ ಜಲವಿದ್ಯುತ್ ಉತ್ಪಾದನಾ ಕೇಂದ್ರದಿಂದ ಮೊದಲ ಬಾರಿಗೆ ಕೋಲರಕ್ಕೆ ವಿದ್ಯುತ್ತನ್ನು ಕಳೆಸಲಾಗಿತ್ತು
ಭರ ಚುಕ್ಕಿ ಫಾಲ್ಸ್

ನನ್ನ ಎಲ್ಲಾ ಸ್ನೇಹಿತರು ಕಡಿಮೆ ಅಂಕಗಳನ್ನು ಗಳಿಸಿದರು. ಇದರಿಂದಾಗಿ ಎಲ್ಲರೂ ಒಂದೇ ಕಾಲೇಜಿಗೆ ಸೇರಲು ಸಾಧ್ಯವಾಗಲಿಲ್ಲ. ಆದರೂ ಅವರನ್ನು ಮರೆಯಲಿಲ್ಲ.ಮುಂದಿನ ವಿಧ್ಯಾಭ್ಯಾಸಕ್ಕಾಗಿ ಹೊಸುರು ರಸ್ಥೆಯಲ್ಲಿ ಞರುವಾ ಕ್ರಿಸ್ಟ್ ಕಾಲೇಜಿಗೆ ಸೇರಿಕೊಂಡೆ.ಅಲಿನ ಅಧ್ಯಾಪಕರ ನೆರವಿನಿಂದ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದೆ. ಕಾಲೇಜಿನಲ್ಲಿದ್ದಾಗ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ,ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿದ್ದೆ.ಕಾಲೇಜಿನಂದ ಕಬ್ಬಾಳಮ್ಮ ಬೆಟ್ಟ,ಗಗನ ಚುಕ್ಕಿ, ಭರಚುಕ್ಕಿ,ಶಿವನಸಮುದ್ರಕ್ಕೆ ಪ್ರವಾಸ ಹೋಗಿದ್ದೆವು.ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ೮೯% ಅಂಕಗಳೊಂದಿಗೆ ಉತ್ತೀರ್ಣನಾದೆ.

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ - ಸಾಂಸ್ಕೃತಿಕ - ಧಾರ್ಮಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ
ಧರ್ಮಸ್ಥಳ ದೇವಸ್ಥಾನ

ನನ್ನ ಶಾಲಾ ಗೆಳೆಯರೇ ನನ್ನ ಉತ್ತಮ ಗೆಳೆಯರಾಗಿದ್ದರು,ಅವರೊಂದಿಗೆ ಅನೇಕ ಸ್ಥಳಗಳಿಗೆ ಪ್ರವಾಸ ಹೋಗುತ್ತಿದ್ದೆ.ಅನೇಕ ಬೆಟ್ಟಗಳ ಚಾರಣ ಹೋಗಿದ್ದೆವು. ಪರೀಕ್ಷೆ ನಂತರ ಗೆಳೆಯರ ಜೊತೆ ಸಕಲೇಶಪುರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಜಗತ್ಪ್ರಸಿದ್ಧ ಜೋಗ ಜಲಪಾತಕ್ಕೆ ಪ್ರವಾಸ ಹೋಗಿದ್ದೆವು. ರಜೆಯಲ್ಲಿ "ವಿಂಗ್ಸ್ ಆಫ್ ಫೈರ್",ಮೂಕಜ್ಜಿಯ ಕನಸುಗಳು,ಮಲೆಗಳಲ್ಲಿ ಮದುಮಗಳು,ಆವರಣ ಎಂಬ ಪುಸ್ತಕಗಳನ್ನು ಓದಿದೆ.ಜೀವನದ ಪ್ರತಿಯೊಂದು ಹಂತದಲ್ಲೂ, ಒಂದೊಂದು ಪಾಠವನ್ನು ಕಲಿಯುತ್ತಾ ಹೋಗುತ್ತಿದ್ದೇನೆ.ಇಂದಿಗೂ ಅಮ್ಮ ಎಂದರೆ ಪ್ರಾಣ.ಅಪ್ಪ ನನ್ನ ಬೆನ್ನ ಹಿಂದೆ ನನಗಾಗಿ ತನ್ನ ಜೀವನವನ್ನು ಸವೆಯುತ್ತಿದ್ದಾರೆ. ಪರೀಕ್ಷೆಯ ಫಲಿತಾಂಶ ಬಂದ ನಂತರ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರಬೇಕೆಂದು ನಿಶ್ಚಯ ಮಾಡಿ,ಸೇರಿಕೊಂಡೆ.ಕಾಲೇಜಿನಂತೆ ಅದರ ಒಳಗಿನ ಪ್ರಪಂಚವೂ ದೊಡ್ಡದು.ಅನೇಕ ದೇಶಗಳ ವಿದ್ಯಾರ್ಥಿಗಳು ಇರುವ ಕಾಲೇಜು. ಇಲ್ಲಿನ ಅಧ್ಯಾಪಕರು ತಮ್ಮ ವಿಷಯಗಳಲ್ಲಿ ಪಾಂಡಿತ್ಯವನ್ನು ಗಳಿಸಿಕೊಂಡಿದ್ದಾರೆ.ಜೀವನದಲ್ಲಿ ಏನಾದರು ಸಾಧನೆ ಮಾಡಬೇಕೆಂದು ಜೀವನದ ಬಂಡಿಯನ್ನು ವೇಗವಾಗಿ ನಡೆಸುತ್ತಿದ್ದೇನೆ.