ಸಂಧಿ ದೋಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಧಿಯಾಗಬಾರದ ಎಡೆಯಲ್ಲಿ ಸಂಧಿ ಮಾಡಿ ದೋಷಕ್ಕೊಳಗಾದುದು ಸಂಧಿದೋಷ.

ಸಂಧಿ[ಬದಲಾಯಿಸಿ]

ನಾಮರೂಢಿಯಳಿಯದ ಪಕ್ಷಂ ಎಂಬುದು ಕೇಶಿರಾಜನ ಸಾರ್ವತ್ರಿಕ ನಿಯಮ. ಕೆಲವೆಡೆ ಪದಗಳು ಸೇರುವಂತಿದ್ದರೂ ಅರ್ಥಹಾನಿಯಾಗುವುದರಿಂದ ಅವು ಸೇರದೆ ಪ್ರಕೃತಿ ರೂಪದಲ್ಲೇ ಇರುತ್ತದೆ. ಕೆಲವು ಕಡೆ ಪದಗಳೆರಡನ್ನು ಒಂದರ ಮುಂದೆ ಇನ್ನೊಂದು ಇರಿಸುವುದೇ ಸಂಧಿದೋಷವಾಗುತ್ತದೆ.[೧]

  1. ಪೂರ್ವ ಪದಾಂತ್ಯವು ಹೃಸ್ವ ಅಕ್ಷರವಾಗಿದ್ದು ಪರಪದದ ಆದಿಯು ದ್ವಿತ್ವವಾಗಿದ್ದರೆ ಸಂಧಿದೋಷವಾಗುತ್ತದೆ. ಪೂರ್ವಪದದ ಅಂತ್ಯ ಹೃಸ್ವಾಕ್ಷರವಾಗಿದ್ದು ಮುಂದೆ ರೇಫೆಸಹಿತವಾದ ದ್ವಿತ್ವವಾಗಿದ್ದಲ್ಲಿ ಅದನ್ನು ಶಿಥಿಲದ್ವಿತ್ವವೆಂದು ಭಾವಿಸಿ ಕೆಲವರು ಸಂಧಿಮಾಡುವರು. ಉದಾ : ಬರಸಿ ಪ್ರಧಾನರುಂ ಕುಳ್ಳಿರಿಸಿ ಪ್ರಯವಾರ್ತೆಯಂ ಕೇಳ್ದು
  2. ಹೃಸ್ವವರ್ಣದ ಮುಂದೆ ರೇಫೆ ಬಂದರೆ ಶಿಥಿಲವೆಂದು ಅನುಕರಿಸುವುದು ದೋಷವೇ. ಸತ್ವಹೀನರು ಗದ್ಯದಲ್ಲದ್ದು ಸಲ್ಲುವುದೆಂದು ಹೇಳಿದರೂ ವಿವೇಕಿಗಳು ಗೇಫೆಯು ಕೂಡಾ ದಿತ್ವವೆಂದೇ ತಿಳಿದು, ಪದ್ಯದಲ್ಲೇ ಆಗಲಿ ಗದ್ಯದಲ್ಲೇ ಆಗಲಿ ಇದು ದೋಷವೆಂದು ಹೇಳುವರು. ಉದಾ : ಮಿರುಗುತಿರ್ಪ ತ್ರಿಶೂಲದೆ, ಪ್ರಣಯದೇತ್ರಿಪಥೆಗೆ ನಡೆತರೆ.
  3. ಎರಡು ಪದಗಳ ನಡುವೆ ಅಸಹ್ಯೋಕ್ತಿ ಹುಟ್ಟುವಂತಿದ್ದರೆ ಅದು ಸಂಧಿದೋಷ. ಉದಾ : ಅ] ಹೇ ಲತಾ ಕೋಮಲಾಂಗಿ, ಆ] ಬನ್ನಿಯ ತರುಡಕ್ಕೆಗೆ ಸುರಹೊನ್ನೆಯ ತರುಡಮರುಗಕ್ಕೆ.
  4. ಎರಡು ಪದಗಳ ನಡುವೆ ರೇಫಾಕ್ಷರಗಳು ಬಂದು ಉಚ್ಛಾರಣಾ ದೃಷ್ಟಿಯಿಂದ ಅವು ಶುೃತಿ ಕಷ್ಟವೆನಿಸುತ್ತದೆ. ಅದು ಸಂಧಿದೋಷ. ಉದಾ: ವಿದ್ವಟ್ಸ್ತ್ರೀಯರ್. [ವ್+ಇ+ದ್+ವ್+ಟ್+ಸ್+ತ್+ರ್+ಈ+ಯ್+ಅ+ರ್]

ಉಲ್ಲೇಖ[ಬದಲಾಯಿಸಿ]

  1. ಕೇಶಿರಾಜಶಬ್ದಮಣಿದರ್ಪಣ
"https://kn.wikipedia.org/w/index.php?title=ಸಂಧಿ_ದೋಷ&oldid=729342" ಇಂದ ಪಡೆಯಲ್ಪಟ್ಟಿದೆ