ವೈ.ನಾಗೇಶ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈ.ನಾಗೇಶ ಶಾಸ್ತ್ರಿಗಳು ೧೮೯೩ರಲ್ಲಿ ಬಳ್ಳಾರಿ ಜಿಲ್ಲೆಯ ಏಳು ಬೆಂಚೆ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ನೀಲಾಂಬಿಕೆ ; ತಂದೆ ನಯನಯ್ಯ.[ಬದಲಾಯಿಸಿ]

ಇವರ ಕೆಲವು ಪ್ರಮುಖ ಕೃತಿಗಳು ಇಂತಿವೆ:

  • ಅಭಿನವ ಗೀತೆ
  • ವಿದ್ಯಾ ವಿನೋದಿನಿ
  • ಗವಿ ಸಿದ್ಧೇಶ್ವರ ಪುರಾಣ
  • ಮರಿಯೋಗೀಶ್ವರ ಪುರಾಣ
  • ಶ್ರೀ ಪಾಲಾಕ್ಷ ಶಿವಯೋಗೀಶ್ವರ ಪುರಾಣ

ಇವರು ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ಜರುಗಿದ ೧೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರಿಗೆ ಕೋಲಕತ್ತಾ ವಿಶ್ವವಿದ್ಯಾಲಯದಿಂದ ‘ಸರ್ವದರ್ಶನ ತೀರ್ಥ’ ಪ್ರಶಸ್ತಿ ದೊರೆಕಿದೆ.

ವಿದ್ವಾನ್ ವೈ. ನಾಗೇಶ ಶಾಸ್ತ್ರಿಗಳು ೧೯೭೪ರಲ್ಲಿ ನಿಧನರಾದರು.

ಸ್ಮರಣಾರ್ಥ[ಬದಲಾಯಿಸಿ]

ಸರ್ವದರ್ಶನತೀರ್ಥ ಶ್ರೀ ವಿದ್ವಾನ್ ಪಂಡಿತ್ ವೈ. ನಾಗೇಶ್ ಶಾಸ್ತ್ರಿಯವರ ಸ್ಮರಣಾರ್ಥವಾಗಿ ಇವರ ಹುಟ್ಟೂರಾದ ಏಳುಬೆಂಚಿ ಗ್ರಾಮದಲ್ಲಿ ಕಲಾಭವನ ನಿರ್ಮಿಸಿ 2021 ಆಗಸ್ಟ್ 29ರಂದು ಉದ್ಘಾಟಿಸಲಾಯಿತು.