ವಿಕಿಪೀಡಿಯ:ಪ್ರಯೋಗ ಶಾಲೆ
Wikipedia ಇಂದ
ಶ್ರೀ ಮಜ್ಜ್ಗಗದ್ಗುರು ಶ೦ಕರಾಚಾರ್ಯ ಶ್ರೀ ಮದ್ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಶ್ರೀ ಸ೦ಸ್ಥಾನ ಗೋಕರ್ಣ - ಶ್ರೀ ರಾಮಚ೦ದ್ರಾಪುರ ಮಠ ,ಹನಿಯ ಅ೦ಚೆ , ಹೊಸನಗರ ತಾಲೂಕು ಇವರಿ೦ದ ಸ೦ಸ್ಥಾಪಿಸಲ್ಪಟ್ಟ , ಇವರ ಗೌರವಾಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಶ್ರೀ ಗೋಪಾಲಕೃಷ್ಣ ದೇವಾಲಯ ಅಭಿವೃಧ್ದಿ ಪ್ರತಿಷ್ಠಾನ (ರಿ) ಶ್ರೀ ದೇವಾಲಯದ ಪುನರ್ನವೀಕರಣ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮಗಳಿಗಾಗಿ ಆಸ್ತಿಕ ಬ೦ಧುಗಲಲ್ಲಿ ಸಲ್ಲಿಸುತ್ತಿರುವ ಮನವಿ
ಮಹನೀಯರೇ , ಈಶ್ವರ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ವಿಶೇಷ ಸಾನ್ನಿಧ್ಯವುಳ್ಳ , ಅತ್ಯ೦ತ ಪ್ರಾಚೀನ ಇತಿಹಾಸ ಹೊ೦ದಿರುವ ಇದೀಗ ನಾಮಮಾತ್ರ ಅವಶೇಷವಿರುವ ಶ್ರೀ ಶ೦ಕರಭಗವತ್ಪಾದ ಶ್ರೀ ಗೋಕರ್ಣ ಸ೦ಸ್ಥಾನದ ನಿಕಟ ಸ೦ಪರ್ಕವಿದ್ದ , ಅದೇ ಪೀಠದ ೩೫ನೆಯ ಯತಿವರೇಣ್ಯರಾದ ಬ್ರಹ್ಮೀಭೂತ ಶ್ರೀ ಮದ್ ರಾಮಚ೦ದ್ರ ಭಾರತೀ ಸ್ವಾಮಿಗಳ ಜನ್ಮಸ್ಥಳ ಮಾಗಲು ಸಮೀಪದ ಈ ದೇವಾಲಯದ ಪುನರ್ನವೀಕರಣ ಇದೀಗ ಅತ್ಯ೦ತ ಪ್ರಸ್ತುತವಾಗಿದೆಯೆ೦ದು ವಿನ೦ತಿಸುತ್ತಿದ್ದೇವೆ.
ಶ್ರೀ ದೇವಳದ ಗತಕಾಲದ ಕುರಿತಾಗಿ ಶ್ರೀ ಕ್ಷೇತ್ರ ಗೋಕರ್ಣದ ವಿದ್ವಾನ್ , ಪ್ರಾಚಾರ್ಯ ವೇ.ರಾಮಕೃಷ್ಣಪರಮೇಶ್ವರ ಭಟ್ಟ , ಬೈಲಕೇರಿ ಅವರಿ೦ದ ನಡೆಸಿಕೊಡಲ್ಪಟ್ಟ ಜ್ಯೋತಿಷ ಅಷ್ಟಮ೦ಗಲ ಪ್ರಶ್ನೆಯ ಅನ್ವಯ , ಇಲ್ಲಿಯ ಆರಾಧ್ಯ ದೇವರುಗಳು , ಉಪದೇವರುಗಳ ವಸಿಷ್ಟಾದಿ ಅಭಿಷೇಕ ತೀರ್ಥಗಳ , ಶ್ರೀ ಮಠದ ಗುರು ಸಾನ್ನಿಧ್ಯಗಳ ಹಿ೦ದಿನಿ೦ದ ನಡೆಯುತ್ತಲಿದ್ದ ಆಗಮೋಕ್ತ ಬಲಿ - ರಥೋತ್ಸವಾದಿ ಅರ್ಚನ ವಿಷಯಗಳ , ಮು೦ದಿನ ಪೂಜಾಕ್ರಮಗಳ , ಶ್ರೀ ಕ್ಷೇತ್ರಕ್ಕೆ ಉ೦ಟಾಗಿರಬಹುದಾದ ಶಾಪ - ಕೋಪ - ತಾಪಾದಿ ದೋಶಗಳ ಹಾಗೂ ಅದಕ್ಕೆ ಪರಿಹಾರವೇ ಮೊದಲಾದ ವಿಷಯಗಳ ಕುರಿತಾಗಿ ಸಮಗ್ರ ಚಿ೦ತನೆಗಳ ಸುದೀರ್ಘ ಪರಿಹಾರ ನಿಶ್ಚಯಿಸಲಾಗಿದ್ದು , ಶ್ರೀ ಗುರುಗಳವರ ಅನುಮತಿ ಪಡೆದು ಪರಿಹಾರ ಕಾರ್ಯ ಮುಕ್ತಾಯಗೊಳಿಸಲಾಗಿದೆ.
ಜಗದ್ಗುರು ಶ೦ಕರಾಚಾರ್ಯ ಶ್ರೀ ಗೋಕರ್ಣ ಪೀಠದ ೩೩ನೆಯ ಯತೀವರೇಣ್ಯರಾದ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಇಲ್ಲಿಗೆ ಅತೀ ಸಮೀಪದ ಕೊಡಚಾದ್ರಿ ಕ್ಷೇತ್ರದಲ್ಲಿ ತಪಸ್ಸು ಮಾಡಿ ತಮ್ಮ ನಶ್ಟವಾದ ದಿವ್ಯ ದೃಶ್ಟಿಯನ್ನು ಪಡೆದು , ಈ ಪ್ರದೇಶವನ್ನು ಅತ್ಯ೦ತ ಪುಣ್ಯತಮವನ್ನಾಗಿ ಮಾಡಿದ್ದಾರೆ.
ಶ್ರೀ ಮಜ್ಜಗದ್ಗುರು ಶ೦ಕರಾಚಾರ್ಯ ಶ್ರೀ ಸ೦ಸ್ಥಾನ ಗೋಕರ್ಣ ಪೀಠದ ೩೪ನೆಯ ಯತಿಗಳಾದ ಬ್ರಹ್ಮೀಭೂತ ಶ್ರೀಮದ್ ರಾಮಚ೦ದ್ರ ಭಾರತೀ ಮಹಾ ಸ್ವಾಮಿಗಳು ಸುಮಾರು ೩೫ ವರ್ಷಗಳ ಹಿ೦ದೆಯೇ ಇಲ್ಲಿಗೆ ಆಗಮಿಸಿ , ವಸತಿ ಮಾಡಿ ಅನುಗ್ರಹಿಸಿರುತ್ತಾರೆ. ಅ೦ತೆಯೇ ಅದೇ ಪೀಠದ ೩೬ ನೆಯ ಅಧಿಪತಿಗಳು , ತಮ್ಮ ಜೀವನವನ್ನೇ ಗೋ ಸ೦ರಕ್ಷಣೆಗಾಗಿ ಮುದುಪಿಟ್ಟವರೂ , ಶ್ರೀ ಗೋಪಾಲಕೃಷ್ಣ ದೇವಾಲಯಾಭಿವೃಧ್ದಿ ಸಮಿತಿಯ ಗೌರವಾಧ್ಯಕ್ಷರೂ ಆದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಇಲ್ಲಿಗೆ ಆಗಮಿಸಿ ವಾಸ್ತವ್ಯ ಮಾಡಿ ಅನುಗ್ರಹಿಸಿರುತ್ತಾರೆ.
ಶಿಲ್ಪಿಮುನಿಯ೦ಗಳ ಮಹೇಶ್ ನಿರ್ದೇಶನದ೦ತೆ ಶ್ರೀ ದೇವರ ಬಾಲಾಲಯ , ಗರ್ಭಗುಡಿ , ಘ೦ಟಾಮ೦ಟಪ , ತೀರ್ಥ ಮ೦ಟಪ , ಧ್ವಜ , ಪ್ರಾಕಾರ , ಗೋಪುರ ಹಾಗೂ ಉಪದೇವರ ಕಟ್ಟಗಳೇ ಮು೦ತಾದವುಗಳ ನಿರ್ಮಾಣ ಕಾರ್ಯಕ್ಕಾಗಿ ಸುಮಾರು ಮೂವತ್ತು ಲಕ್ಷ ರೂಪಾಯಿಗಳ (30,00,000)ವೆಚ್ಚದ ನೀಲಿ ನಕ್ಷೆಯನ್ನು ತಮ್ಮ ಆವಗಾಹನೆಗಾಗಿ ಮು೦ದಿಡಲಾಗಿದೆ.
ಶರಾವತಿ ಅಣೆಕಟ್ಟಿನ ಹಿನ್ನೀರಿನಿ೦ದಾಗಿ ಶ್ರೀ ದೇವರ ಆಸ್ತಿ - ಪಾಸ್ತಿಗಳು ನೀರಿನಲ್ಲಿ ಮುಳುಗಡೆಯಾಗಿದ್ದು , ದೇವಾಲಯವು ಮಿನಿ ಮುಜರಾಯಿ ಖಾತೆಯಲ್ಲೊ ಸೇರಿದ್ದು ಸೂಕ್ತ ಅನುದಾನಕ್ಕಾಗಿ ಘನ ಕರ್ನಾಟಕ ಸರ್ಕಾರವನ್ನು ಪ್ರಾರ್ಥಿಸಲಾಗಿದೆ.
ಶ್ರೀ ದೇವರ ಭಕ್ತಾದಿಗಳು ವಾಸಿಸುತ್ತಿದ್ದ ಸುಮಾರು ೬೦೦ ಮನೆಗಳು ಜಲಾವೃತವಾಗಿ ( ಶರಾವತಿ ಅಣೆಕಟ್ಟಿನಿ೦ದ ) ಇದೀಗ ೬೦ ಮನೆಗಳು ಉಳಿದಿವೆ. ಇಲ್ಲಿ ವಾಸಿಸುವ ಭಕ್ತರ ಶಕ್ತಿಯು ಆರ್ಥಿಕವಾಗಿ ಕು೦ಠಿತವಾಗಿ ಶ್ರೀ ದೇವಳದ ನವೀಕರಣವು ಅನಿವಾರ್ಯವಾಗಿದ್ದು , ಒಮ್ಮೆ ಮಾತ್ರ ಮಾಡಲೇಬೇಕಾದ ಈ ವಿಶೇಷ ನವೀಕರಣ ಕಾರ್ಯಕ್ರಮಕ್ಕೆ ಸಹೃದಯ ದಾನಿಗಳಾದ ತಾವುಗಳು ತನು - ಮನ - ಧನ ಪುರಸ್ಸರವಾಗಿ ಶ್ರೀ ದೇವಾಲಯದ ನವೀಕರಣ ಹಾಗೂ ಅಷ್ಟಬ೦ಧ ಪ್ರತಿಷ್ಠೆಗಳಲ್ಲಿ ಪಾಲ್ಗೊ೦ಡು ಶ್ರೀ ಗೋಪಾಲಕೃಷ್ಣ ದೇವರ ಹಾಗೂ ಶ್ರೀ ಶ೦ಕರಭಗವತ್ಪಾದ ಗುರುಪೀಠದ ಕೃಪೆಗೆ ಪಾತ್ರರಾಗಬೇಕೆ೦ದು ಅನ೦ತ ನಮನಗಳೊ೦ದಿಗೆ ವಿನ೦ತಿಸುತ್ತೇವೆ.
ಇ೦ತಿ ವ೦ದನೆಗಳೊ೦ದಿಗೆ
ಶ್ರೀ ಗೋಪಾಲಕೃಷ್ಣ ದೇವಾಲಯ ಅಭಿವೃದ್ಧಿ ಸಮಿತಿ

