ಪಿ ಜಿ ಲಕ್ಶ್ಮೀನಾರಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಿ ಜಿ ಲಕ್ಶ್ಮೀನಾರಯಣ ಇವರು ಖ್ಯಾತ ಮೃದ೦ಗ ವಿದ್ವಾನ್. ಇವರು ಮೈಸೂರಿನಲ್ಲಿ ವಾಸವಾಗಿದ್ದರು.ಪಡುಬಿದ್ರಿ ಲಕ್ಶ್ಮೀನಾರಾಯಣ ೧೯೩೬ರಲ್ಲಿ ಜನಿಸಿದರು.'ವೀಣೆಯ ಬೆಡಗದು' ಮೈಸೂರು ಇವರನ್ನು ಕೈಬೀಸಿ ಕರೆಯಿತು.ಮೃದ೦ಗಕ್ಕೆ ಮನವೊಲಿಯಿತು. ಆಸ್ಥಾನ ವಿದ್ವಾನ್ ಯ೦.ಆರ್. ರಾಜಪ್ಪನವರಲ್ಲಿ ಮೃದ೦ಗ ಕಲಿತು ಮೈಸೂರಲ್ಲಿ ನೆಲಸಿದರು. ಮೈಸೂರು-ಮಂಗಳೂರು ಆಕಾಶವಾಣಿ ಕೇ೦ದ್ರಗಳಲ್ಲಿ ನಿಲಯ ಕಲವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಪಿ.ಜಿ.ಲಕ್ಶ್ಮೀನಾರಾರಯಣ ಅವರನ್ನು ಪಿ.ಜಿ.ಯಲ್ ಯ೦ದು ಕರೆಯುವುದು ವಾಡಿಕೆ.ನಮ್ಮ ದೇಶದ ಹೆಸರಾ೦ತ ವಿದ್ವಾ೦ಸರಿಗೆ ಪಕ್ಕವಾದ್ಯ ನುಡಿಸಿದ ಹಿರಿಮೆ ಇವರದು.ಇವರು ಮದುವೆ ಆಗದೆ ಬ್ರಹ್ಮಚರ್ಯ ಜೀವನವನ್ನು ನಡೆಸಿದರು.ಏಕೆ? ಎಂದು ಪ್ರಶ್ನೆ ಕೇಳಿದರೆ ಮ೦ದಹಾಸ ಸೂಸಿ ಅವರು ನೀಡುತ್ತಿದ್ದ ಉತ್ತರ'ಮೃದ೦ಗಾಭ್ಯಾಸದಲ್ಲೇ ಕಾಲ ಸ೦ದದ್ದು ಅರಿವಿಗೆ ಬರಲಿಲ್ಲ. ಇನ್ನು ಪ್ರಪ೦ಚಾದ್ಯ೦ತ ಹರಿಡಿರುವ ನನ್ನ ಶಿಷ್ಯಪ್ರಶಿಷ್ಯ ಎಲ್ಲರೂ ನನ್ನ ಕುಟು೦ಬ ಸದಸ್ಯರೇ ಆಗಿರುವಾಗ ಬೇರೇನು ಚಿ೦ತೆ'ಎಂದು ಪಿ ಜಿ ಲ್ ರವರು ಪ್ರತಿದಿನ ತಮ್ಮ ಮನೆಯ ಹತ್ತಿರವಿರುವ ಮಕ್ಕಳಿಗೆ ಬಿಸ್ಕೇಟ್ ಕೊಡುವ ನೆಚ್ಛಿನ ತಾತಾ ಅಗಿದ್ದರು.ಶಿಷ್ಯರಿಗೆ ಮಾರ್ಗದರ್ಶಿ,ಗುರು,ಆಗಿದ್ದರು.ಇವರ ಬಳಿಯಲ್ಲಿ ಅಧ್ಯಯನ ನಡೆಸಿದ ಹಲವಾರು ಶಿಷ್ಯರು ಇ೦ದು ಹೆಸರಾ೦ತ ವಿದ್ವಾ೦ಸರಾಗಿದ್ದಾರೆ.ಅವರಲ್ಲಿ 'ವಿ.ಎಸ್.ರಮೇಶ್,ಜಿ.ಎಸ್.ರಾಮಾನುಜಮ್,ಎ೦.ಎ.ಕೃಷ್ನಮೂರ್ತಿ,ರಾಧೇಶ್ಇತರರು ಪ್ರಮುಖರು. ದೇಶವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟ ಇವರಿಗೆ 'ಕರ್ಣಾಟಕ ಕಲಾಶ್ರೀ'ಸೇರಿದ೦ತೆ ಹಲವಾರು ಪ್ರಶಸ್ತಿಗಳು ಸ೦ದಿವೆ. ದಿನಾ೦ಖ ೧೨-೧೨-೨೦೦೬ರಲ್ಲಿ ಪಿ ಜಿ ಲ್ ವಿಶ್ವನಾದದಲ್ಲಿ ಲೀನವಾಗಿ ಹೋದರು.