ಜಾಮಿಯಾ ಮಸೀದಿ, ಉಡುಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೧೨ರ ಆಗಸ್ಟ್ ೧೦ ರಂದು ೪ ದಶಲಕ್ಷ ವೆಚ್ಚದ ಉಡುಪಿಯ ಅತಿ ದೊಡ್ಡ ಮಸೀದಿ ಜಾಮಿಯಾ ಮಸೀದಿಯನ್ನು ಶುಕ್ರವಾರ ಉದ್ಘಾಟಿಸಲಾಯಿತು. ಉದ್ಯಮಿ ಹಿದಾಯತುಲ್ಲಾ ಅಬ್ಬಾಸ್ ಉಚ್ಚಿಲ ಅಬುಧಾಬಿಯಲ್ಲಿ ತನ್ನ ವ್ಯವಹಾರವನ್ನು ಹೊಂದಿರುವ ಎನ್‌ಆರ್‌ಐ ಉದ್ಯಮಿ ಹಿದಾಯತುಲ್ಲಾ ಅಬ್ಬಾಸ್ ಉಚ್ಚಿಲ ಅವರು ವೆಚ್ಚದ ಪ್ರಮುಖ ಭಾಗವನ್ನು ಭರಿಸುವ ಪ್ರಸ್ತಾವನೆಯೊಂದಿಗೆ ಮುಂದಾದರು. ೨೦೧೦ ರಲ್ಲಿ ಅಡಿಪಾಯ ಹಾಕಲಾಯಿತು ಮತ್ತು ಸೊಗಸಾದ ರಚನೆಯನ್ನು ನಿರ್ಮಿಸಲಾಯಿತು. ಎರಡು ಶತಮಾನಗಳಷ್ಟು ಹಳೆಯದಾದ ಜಾಮಿಯಾ ಮಸೀದಿ, ೧೮,೦೦೦ ಚದರ ಅಡಿಗಳಷ್ಟು ವಿಶಾಲವಾದ ಪ್ರಾರ್ಥನಾ ಮಂದಿರಗಳೊಂದಿಗೆ ಹೊಸದಾಗಿ ನಿರ್ಮಿಸಲಾಗಿದ್ದು, ಏಕಕಾಲದಲ್ಲಿ ೩,೦೦೦ ಆರಾಧಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಜಾಮಿಯಾ ಮಸೀದಿಯು ಮಹಿಳೆಯರಿಗಾಗಿ ವಿಶೇಷ ಮತ್ತು ಪ್ರತ್ಯೇಕ ಪ್ರಾರ್ಥನಾ ಮಂದಿರವನ್ನು ಒಳಗೊಂಡಿರುವ ಜಿಲ್ಲೆಯ ಮೊದಲ ಮಸೀದಿಯಾಗಿದ್ದು, ಏಕಕಾಲದಲ್ಲಿ ಸುಮಾರು ೪೦೦ ಆರಾಧಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಉದ್ಘಾಟನಾ ದಿನದಂದು ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಲಾಯಿತು.

ಶುಕ್ರವಾರ ಆಗಸ್ಟ್ ೧೦ ರಂದು ಮಧ್ಯಾಹ್ನ ೧೨.೧೫ ಕ್ಕೆ ಮಸೀದಿಯ ಉದ್ಘಾಟನಾ ಸಮಾರಂಭ ನಡೆದಿದೆ. ಶುಕ್ರವಾರ ಸಂಜೆ ಇಫ್ತಾರ್ ಕೂಟ ನಡೆದಿದ್ದು, ಉಚ್ಚಿಲದ ಹಿದಾಯತುಲ್ಲಾ ಅಬ್ಬಾಸ್ ಉದ್ಘಾಟಿಸಿದರು. ಜಾಮಿಯಾ ಮಸೀದಿಯ ಖತೀಬರಾದ ಮೌಲಾನಾ ಮೊಹಿಯುದ್ದೀನ್ ಜೀಲಾನಿ ಪ್ರಾರ್ಥನೆ ಮತ್ತು ಶುಕ್ರವಾರದ ಪ್ರವಚನ ನೀಡಿದರು. ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಮೊಹಿಯುದ್ದೀನ್ ಜಿಲಾನಿ ಜುಮಾ ಶುಕ್ರವಾರ ಪ್ರವಚನ ನೀಡಿದರು. ಮಾಜಿ ಎಂಎಲ್‌ಸಿ ಕೆ ಎಸ್ ಮಹಮ್ಮದ್ ಮಸೂದ್, ಹಿದಾಯತ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಿಇಒ ಇಮ್ರಾನ್ ಹಿದಾಯತುಲ್ಲಾ, ದುಬೈ, ಜಾಮಿಯಾ ಮಸೀದಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ ಎಸ್ ಬುಡಾನ್ ಬಾಷಾ, ಉಪಾಧ್ಯಕ್ಷ ಅತೀಫ್ ಹುಸೇನ್, ಕಾರ್ಯದರ್ಶಿ ಖಮರುದ್ದೀನ್ ಎಂ ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ಜಾಮಿಯಾ ಮಸೀದಿಯಲ್ಲಿ ಮಾರ್ಚ್ ೬ ಸೋಮವಾರದಂದು ಎಲ್ಲ ವಯೋಮಾನದವರೂ ಸೇರಿ ವಿವಿಧ ಧರ್ಮದ ಜನರು ಮಸೀದಿಯಲ್ಲಿ ನಡೆಯುತ್ತಿರುವ ಕಲಾಪಗಳನ್ನು ಅರಿಯುವ ಜತೆಗೆ ಕೋಮು ಸೌಹಾರ್ದತೆಗೆ ಸಾಕ್ಷಿಯಾದರು.