ಚೆನ್ನಪಟ್ಟಣ ಚರ್ಚು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೆನ್ನಪಟ್ಟಣವು ರಾಮನಗರ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಹೆದ್ದಾರಿಯಲ್ಲಿ ೬೦ಕಿಲೋಮೀಟರು ದೂರದಲ್ಲಿದೆ. ಕ್ಲೋಸ್ ಪೇಟೆ(ಇಂದಿನ ರಾಮನಗರ)ಯ ಉಪ ಧರ್ಮಕೇಂದ್ರವಾಗಿದ್ದ ಚೆನ್ನಪಟ್ಟಣ ಸ್ವತಂತ್ರ ಧರ್ಮಕೇಂದ್ರವಾದದ್ದು ೧೯೫೫ರಲ್ಲಿ. ಮಹಾಧರ್ಮಾಧಿಪತಿ ತೋಮಾಸ್ ಪೋತಕಮೂರಿಯವರು ಉದ್ಘಾಟಿಸಿದ ಈ ಧರ್ಮಕೇಂದ್ರದ ಪ್ರಥಮ ಗುರುವಾಗಿ ಯೇಸುಸಭೆಯ ಸ್ವಾಮಿ ಜಾನ್ ಎರೇನಾ (೧೯೫೫-೫೭) ಪಾಲನೆ ಮಾಡಿದರು. ಬಹುಶಃ ಇವರ ಕಾಲದಲ್ಲಿಯೇ ಇಲ್ಲಿನ ದೇವಾಲಯದಲ್ಲಿ ಜಪಸರದ ೧೫ ರಹಸ್ಯಗಳ ಭಿತ್ತಿಚಿತ್ರಗಳು ದೇವಾಲಯದ ಗೋಡೆಯಲ್ಲಿ ಮೂಡಿಬಂದವು. ಚೆನ್ನಪಟ್ಟಣದಲ್ಲಿ ಈ ಕೆಳಕಂಡ ಇತರ ಪಾದ್ರಿಗಳು ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.

ಸ್ವಾಮಿ ಮ್ಯಾಥ್ಯೂ ಲೂಯಿಸ್ ೧೯೫೭-೫೯ ಸ್ವಾಮಿ ಸಿರಿಲ್ ವಿ ಸಿಲ್ವಾ ೧೯೫೯-೬೪ ಸ್ವಾಮಿ ಸೆಬಾಸ್ಟಿಯನ್ ಮೇನಾಚೆರ್ರಿ ೧೯೬೪-೬೫ ಸ್ವಾಮಿ ವಿಲಿಯಂ ಮಥಾಯಿಸ್ ೧೯೬೫-೭೧ ಸ್ವಾಮಿ ಪಯಸ್ ೧೯೭೧-೭೨ ಸ್ವಾಮಿ ಲಾಜರ್ ೧೯೭೨-೭೬ ಸ್ವಾಮಿ ಜೆ ಡಿ ಪಿಂಟೋ ೧೯೭೬-೭೮ ಸ್ವಾಮಿ ಅಮೃತರಾಜ್ ೧೯೭೮-೮೩ ಸ್ವಾಮಿ ಜೆರೋಮ್ ಲೋಬೊ ೧೯೮೩-೮೪ ಸ್ವಾಮಿ ಜಾನ್ ರೊಸಾರಿಯೋ ೧೯೮೪-೮೯ ಸ್ವಾಮಿ ಸುಂದರರಾಜ್ ೧೯೮೯-೯೦ ಸ್ವಾಮಿ ಅಮೃತರಾಜ್ ಸ್ವಾಮಿ ಎಲ್ ಅರುಳಪ್ಪ ಸ್ವಾಮಿ ಸಂದ್ಯಾಗೊ

ಚೆನ್ನಪಟ್ಟಣದಲ್ಲಿನ ಈ ಚರ್ಚು ೧೯೫೮ರಿಂದಲೂ ಕನ್ನಡ ಉನ್ನತ ಪ್ರಾಥಮಿಕ ಶಾಲೆ ನಡೆಸುತ್ತಿದೆ. ೧೯೮೦ರಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಸೇರಿಸಲಾಯಿತು. ೧೯೫೯ರಿಂದ ಕಾರ್ಯಾರಂಭ ಮಾಡತೊಡಗಿದ ಸಂತ ಅನ್ನಮ್ಮ ಕನ್ಯಾಮಠ ಈ ಊರಿನಲ್ಲಿ ಪ್ರೌಢಶಾಲೆಯನ್ನು ನಡೆಸುತ್ತಿದೆ. ಸ್ವಾಮಿ ಎಲ್ ಅರುಳಪ್ಪನವರು ಈ ಕೇಂದ್ರದ ಗುಡಿಯ ಸ್ವರ್ಣಮಹೋತ್ಸವದ ನೆನಪಿಗೆ ೨೦೦೫ರಲ್ಲಿ ಹೊಸ ಚರ್ಚನ್ನು ಕಟ್ಟಿಸಿದ್ದಾರೆ.