ಚಿ.ಉದಯಶಂಕರ್
ಚಿ. ಉದಯಶಂಕರ್ ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ ಚಿ.ಸದಾಶಿವಯ್ಯನವರ ಪುತ್ರ.
"ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.
ಕಸ್ತೂರಿ ನಿವಾಸ ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.
ಆಪರೇಷನ್ ಡೈಮಂಡ್ ರ್ಯಾಕೆಟ್ ಚಿತ್ರದಲ್ಲಿನ ಡಾ. ರಾಜ್ಕುಮಾರ್ ಗಾಯನದಲ್ಲಿರುವ "If you come today, its too early" ಎನ್ನುವ ವಿಭಿನ್ನ ಗೀತೆಯನ್ನು ರಚಿಸಿದವರು ಚಿ.ಉದಯಶಂಕರ್. ಈ ಹಾಡಿನ ಸಂಪೂರ್ಣ ಸಾಹಿತ್ಯ, ಆಂಗ್ಲಭಾಷೆಯಲ್ಲಿರುವುದು ಒಂದು ವಿಶೇಷ.
ಶಿವಾಜಿ ಗಣೇಶನ್ ಇವರನ್ನು ಕನ್ನಡದ "ಕಣ್ಣದಾಸನ್"(ಕಣ್ಣದಾಸನ್ ತಮಿಳಿನ ಪ್ರಸಿದ್ದ ಚಿತ್ರ ಸಾಹಿತಿ) ಎಂದು ಅಭಿಮಾನ ಪಟ್ಟು ಕರೆದಿದ್ದಾರೆ.ಆದರೊ ಇವರಿಗೆ ಗೀತ ರಚನೆಗೆ ಒಂದು ಸಲವೂ ರಾಜ್ಯಪ್ರಶಶ್ತಿ ದೊರಕಲಿಲ್ಲ.
ಚಿ. ಉದಯಶಂಕರ್ ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.ಡಾ.ರಾಜ್ ಕುಮಾರ್ ಅವರಿಗಾಗಿ ೪೦೦ಕ್ಕೂ ಮಿಕ್ಕಿ ಗೀತೆಗಳನ್ನು ರಚಿಸಿದ್ದಾರೆ,ಚಿತ್ರ ಸಾಹಿತಿಯಾಗಿ ಇವರು ೪೦೦೦ಕ್ಕೂ ಮಿಕ್ಕಿ ಗೀತೆಗಳನ್ನೂ ರಚಿಸಿ ಗಿನ್ನೀಸ್ ದಾಖಲೆ ಮಾಡಿದ್ದಾರೆ.ನಮನ
[ಬದಲಾಯಿಸಿ] ಪ್ರಮುಖ ಚಿತ್ರಗಳು
- ಕಸ್ತೂರಿ ನಿವಾಸ
- ಸಮಯದ ಗೊಂಬೆ
- ರಾಜ ನನ್ನ ರಾಜ
- ಆನಂದ್
- ರಥಸಪ್ತಮಿ
- ಎರಡು ಕನಸು
- ನಾ ನಿನ್ನ ಮರೆಯಲಾರೆ
- ಹಾಲು ಜೇನು
- ಭಾಗ್ಯದ ಲಕ್ಷ್ಮಿ ಬಾರಮ್ಮ
- ಅದೇ ಕಣ್ಣು
- ಚಂದನದ ಗೊಂಬೆ
- ಗಾಳಿಮಾತು
- ಬೆಂಕಿಯ ಬಲೆ
- ಶ್ರುತಿ ಸೇರಿದಾಗ
- ಸುಪ್ರಭಾತ
- ದಾರಿ ತಪ್ಪಿದ ಮಗ
- ಚಲಿಸುವ ಮೋಡಗಳು
- ಅನುರಾಗ ಅರಳಿತು
- ಗೀತಾ
- ಭಾಗ್ಯವಂತರು
- ಗುರಿ
- ಬಯಸದೇ ಬಂದ ಭಾಗ್ಯ
- ಪಾವನಗಂಗಾ
- ಗೆಜ್ಜೆ ಪೂಜೆ
- ಕಥಾನಾಯಕ
- ಸೀತಾರಾಮು
- ಅಪೂರ್ವ ಸಂಗಮ
- ಭೂತಯ್ಯನ ಮಗ ಅಯ್ಯು
- ಆಪರೇಷನ್ ಡೈಮಂಡ್ ರ್ಯಾಕೆಟ್
- ಜನ್ಮ ಜನ್ಮದ ಅನುಬಂಧ
- ನೀ ನನ್ನ ಗೆಲ್ಲಲಾರೆ
