ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{Incomplete}]

ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ. ಕನ್ನಡದ ಪ್ರಸಿದ್ಧ ಗಾದೆಮಾತು. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬಳಸುವ ಮಾತು. ಗಡ್ಡಕ್ಕೆ ಬೆಂಕಿ ಹತ್ತಿಕೊಂಡ ನಂತರ ಬಾವಿ ತೊಡುವುದರಿಂದ ಆಗುವ ಪ್ರಯೋಜನ ಶೂನ್ಯ. ಗಡ್ಡಕ್ಕೆ ಬೆಂಕಿ ಹತ್ತಿಕೊಂಡ ನಂತರ ಗಡ್ಡಕ್ಕೆ ತಗುಲಿರುವ ಬೆಂಕಿ ನಂದಿಸಲು ನೀರಿಗಾಗಿ ಬಾವಿ ತೋಡಲು ಹೊರಟರೆ ಗಡ್ಡ ಉರಿದು ಕ್ರಮೇಣ ಮುಖಕ್ಕೆ ಆವರಿಸುವ ಸಂಭವ ಹೆಚ್ಚು ಆದ್ದರಿಂದ ಯಾವಾಗಲು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.ಮಾಡಬೇಕಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡುವುದು ಉತ್ತಮ. ಮಾಡುವ ಕೆಲಸವನ್ನು ಮುಂದೂಡುತ್ತಾ ಬಂದಹಾಗೆ ಅದು ನಮ್ಮ ಮುಂದಾಗುವ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ. ಈ ಗಾದೆಯ ಒಳ ಅರ್ಥ ಸಮಯ ಪ್ರಜ್ಞೆಯ ಪ್ರಾಮುಖ್ಯತೆ.