ಕೊಡಗಿನ ಗೌರಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಡಗಿನ ಗೌರಮ್ಮ
ಜನನಗೌರಮ್ಮ
೧೯೧೨
ಮಡಿಕೇರಿ, ಭಾರತ
ಮರಣ೧೩ ಏಪ್ರಿಲ್, ೧೯೩೯
(೨೭ ವರ್ಷ)
ಮಡಿಕೇರಿ
ವೃತ್ತಿಲೇಖಕಿ
ಪ್ರಕಾರ/ಶೈಲಿಕಥೆ
ಬಾಳ ಸಂಗಾತಿಬಿ. ಟಿ. ಗೋಪಾಲಕೃಷ್ಣ

ಕೊಡಗಿನ ಗೌರಮ್ಮನವರು ಕನ್ನಡದ ಪ್ರಥಮ ಕತೆಗಾರ್ತಿ ಎಂದು ಹೆಸರಾಗಿದ್ದಾರೆ. ಇವರು ೧೯೧೨ ರಲ್ಲಿ ಮಡಿಕೇರಿಯಲ್ಲಿ ಜನಿಸಿದರು.[೧] ಪ್ರಾರಂಭಿಕ ವಿದ್ಯಾಭ್ಯಾಸ ಮಡಿಕೇರಿಯಲ್ಲಿ ಆಯಿತು. ೧೯೨೮ ರಲ್ಲಿ ಬಿ.ಟಿ.ಗೋಪಾಲಕೃಷ್ಣರ ಜೊತೆ ಇವರ ವಿವಾಹವಾಯಿತು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮಹಾತ್ಮಾ ಗಾ೦ಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಾಗ ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡು ತಮ್ಮ ಆಭರಣಗಳನ್ನೆಲ್ಲ ದಾನ ನೀಡಿದರು. ತಾರುಣ್ಯದಲ್ಲೆ ಇವರ ಪತಿ ನಿಧನ ಹೊಂದಿದರು.

ಗೌರಮ್ಮನವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆದಿದ್ದಾರೆ. ೧೯೩೧ ರಿಂದ ೧೯೩೯ ರವರೆಗೆ ಇವರು ರಚಿಸಿದ ಸಣ್ಣ ಕತೆಗಳು ಪ್ರಸಿದ್ಧ ಕಥೆ "ಮನುವಿನ ರಾಣಿ".ಕಂಬನಿ, ಚಿಗುರು ಹಾಗು ಗೌರಮ್ಮನ ಕಥೆಗಳು ಎಂಬ ಶೀರ್ಷಿಕೆಗಳಲ್ಲಿ ಪ್ರಕಟವಾಗಿವೆ.

ಮರಣ[ಬದಲಾಯಿಸಿ]

೧೯೩೯ರ ಏಪ್ರಿಲ್ ೧೩ರಂದು ಗೌರಮ್ಮನವರು ತಮ್ಮ ಮನೆಯ ಸಮೀಪದ ಹೊಳೆಯಲ್ಲಿ ಈಜಲು ಹೋದಾಗ ಆಕಸ್ಮಿಕವಾಗಿ ಮುಳುಗಿ ದುರಂತ ಸಾವಿಗೀಡಾದರು.

ಓದಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Vēṇugōpāla Soraba, Je Hēmalata (1 September 1995). Women writers in South Indian languages. B.R. Pub. Corp. p. 9. Retrieved 15 April 2021.