ಕೆ.ಮರುಳಸಿದ್ದಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ| ಕೆ.ಮರುಳಸಿದ್ದಪ್ಪ ಇವರು ಕನ್ನಡ ಭಾಷೆಯ ವಿಮರ್ಶಕರು, ಕವಿಗಳು, ವಿದ್ವಾಂಸರು, ಸಾಹಿತಿಗಳು , ಪ್ರಾಧ್ಯಾಪಕರಾಗಿ ಖಾತ್ಯರಾಗಿದ್ದಾರೆ . ಇವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ,ಮುಖ್ಯಸ್ಥರೂ ಆಗಿದ್ದರು.ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು.

ಜನನ[ಬದಲಾಯಿಸಿ]

ಡಾ| ಕೆ. ಮರುಳಸಿದ್ದಪ್ಪ ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ ಗ್ರಾಮದವರು. ತಂದೆ ಉಜ್ಜನಪ್ಪ, ತಾಯಿ ಕಾಳಮ್ಮ. ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ‌ದ್ದರು.

ಕೃತಿಗಳು[ಬದಲಾಯಿಸಿ]

ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟ[ಬದಲಾಯಿಸಿ]

  • ಷಟ್ಪದಿ ಸಾಹಿತ್ಯ (1975)

ಪಿಎಚ್ ಡಿ ಮಹಾಪ್ರಬಂಧ[ಬದಲಾಯಿಸಿ]

  • ಆಧುನಿಕ ಕನ್ನಡ ನಾಟಕ ವಿಮರ್ಶೆ(೧೯೮೬)

ಪ್ರವಾಸ ಕಥನ[ಬದಲಾಯಿಸಿ]

  • ನೋಟ ನಿಲುವು (೨೦೦೨)

ಸಂಪಾದಿತ ಕೃತಿಗಳು[ಬದಲಾಯಿಸಿ]

  • ಕನ್ನಡ ನಾಟಕ: ವಿಮರ್ಶೆ (೧೯೭೮)
  • ಲಾವಣಿಗಳು (೧೯೭೨)
  • ಶತಮಾನದ ನಾಟಕ(೨೦೦೩)
  • ಒಡನಾಟ (೨೦೦೩)
  • ವಚನ ಕಮ್ಮಟ ( ಇತರರೊಂದಿಗೆ)
  • ಗಿರೀಶ್ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ (೨೦೧೦)

ಅನುವಾದ ಕೃತಿಗಳು[ಬದಲಾಯಿಸಿ]

  • ಮೀಡಿಯಾ (ಯುರಿಪಿಡೀಸನ ನಾಟಕ),೧೯೮೮
  • ಎಲೆಕ್ಟ್ರ (ಸಾಫೋಕ್ಲಿಸನ ನಾಟಕ),೧೯೮೮
  • ರಕ್ತಕಣಗೀಲೆ (ರವೀಂದ್ರನಾಥ ಠಾಗೋರ್ ಕೃತಿ)
  • ಭಾರತೀಯ ಜಾನಪದ ಸಮೀಕ್ಷೆ (ದುರ್ಗಾ ಭಾಗವತ್),೧೯೭೪

ಬಿಡಿ ಬರಹಗಳು[ಬದಲಾಯಿಸಿ]

  • ಉಲ್ಲಾಸ (೨೦೧೩)
  • ಲಂಕೇಶ ಬದುಕು ಬರಹ (೨೦೧೯)

ಉಲ್ಲೇಖಗಳು[ಬದಲಾಯಿಸಿ]