ಶ್ರೀ ಕರಿಕಾನ ಪರಮೇಶ್ವರಿ
ಉತ್ತರ ಕನ್ನಡ ಜಿಲ್ಲೆಯ ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ಹಚ್ಚಹಸುರಾಗಿರುವ ಅರಣ್ಯದ ನಡುವೆ, ಹೊನ್ನಾವರ ತಾಲೂಕಿನ ನೀಲಕೋಡು ಗ್ರಾಮದ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ ಒಂದು ಧಾರ್ಮಿಕ ಕ್ಷೇತ್ರ. ಸುತ್ತಲೂ ಹಬ್ಬಿರುವ ಅರಣ್ಯಗಳಿಂದ ಐತಿಹಾಸಿಕವಾಗಿ, ಧಾರ್ಮಿಕವಾಗಿ ಪ್ರಸಿದ್ಧವಾದ ಪ್ರದೇಶ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
.
ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ಕಂಗೊಳಿಸುವ ನಯನಮನೋಹರವಾದ ಸೌಂದರ್ಯರಾಶಿಯ ಮಧ್ಯೆ, ಬೆಟ್ಟದ ತಪ್ಪಲಿನಲ್ಲಿ ಪುಣ್ಯಕ್ಷೇತ್ರವಾಗಿ, ನಿಸರ್ಗಧಾಮವಾಗಿ ಇದೆ ಈ ಶಾಂತಿಧಾಮ. ಈ ಕ್ಷೇತ್ರವು ಕೇವಲ ಶಿಲೆಗಳಿಂದಾವೃತವಾದ ಶಿಖರಗಳ ನಡುವೆ ಇದ್ದು, ಶ್ರೀ ಕರಿಕಾನಮ್ಮ ದೇವಿಯ ಶಿಲಾಮಯವಾದ ಉದ್ಭವ ಮೂರ್ತಿ ಇಲ್ಲಿದೆ.
ಐತಿಹ್ಯ[ಬದಲಾಯಿಸಿ]
ಉದ್ಭವ ಮೂರ್ತಿಯಾದ ದೇವಿಗೆ ಇಲ್ಲಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿ, ಗುದ್ದಲಿ, ಹಾರೆಗಳಿಂದ ನೆಲವನ್ನು ಅಗೆದಾಗ ನೆಲದಿಂದ ರಕ್ತ ಚಿಮ್ಮುತ್ತಿತ್ತು. ನಂತರ, ಶ್ರೀ ಶ್ರೀಧರ ಸ್ವಾಮಿಗಳು ಇಲ್ಲಿಗೆ ಬಂದು ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |