ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೧೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦ನೆ ಶತಮಾನದಲ್ಲಿ ಮೈಸೂರು ಸಂಸ್ಥಾನ, ಮುಂಬೈ ಆಧಿಪತ್ಯ , ಹೈದರಾಬಾದ್ ನಿಜಾಮ ಸಂಸ್ಥಾನ ಮತ್ತು ಮದ್ರಾಸ್ ಆಧಿಪತ್ಯಗಳ ನಡುವೆ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಗರ ನಾಡು ೫೦ ವರ್ಷಗಳ ಹಿಂದೆ ನವೆಂಬರ್ ೧ ೧೯೫೬ರಲ್ಲಿ ಏಕೀಕರಣಗೊಂಡು ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ತದನಂತರ ೧೯೭೩ ನವೆಂಬರ್ ೧ ರೊಂದು ಕರ್ನಾಟಕ ಎಂದು ನಾಮಕರಣಗೊಂಡಿತು. ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವನ್ನು ವಿಶ್ವಾದ್ಯಂತ ಕನ್ನಡಿಗರು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಕವಿ ಕುವೆಂಪು ನಾಡ ಗೀತೆಯಲ್ಲಿ ಸ್ತುತಿಸಿದಂತೆ ರಸ ಋಷಿಗಳ ಈ ಬೀಡಿನ ಜನರು ಕಳೆದ ೫೦ ವರ್ಷಗಳಲ್ಲಿ ಸಾಹಿತ್ಯ, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗಳನ್ನು ಮಾಡಿ ಕನ್ನಡ ನಾಡಿಗೆ ಮತ್ತು ಅದರ ಜನನಿಯಾದ ಭಾರತಕ್ಕೆ ಅಪಾರ ಗೌರವ ತಂದಿದ್ದಾರೆ.